ಕುಕ್ಕೆ ಸುಬ್ರಹ್ಮಣ್ಯ (ಸಂಗ್ರಹ ಚಿತ್ರ) 
ರಾಜ್ಯ

ಕೋವಿಡ್‌ ನಡುವೆಯೂ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ 69 ಕೋಟಿ ರೂ. ಆದಾಯ ಸಂಗ್ರಹ

ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020-21ರ ಅವಧಿಯಲ್ಲಿ 68.94 ಕೋಟಿ ರೂ. ಕಾಣಿಕೆ ಮೊತ್ತ ಸಂಗ್ರಹವಾಗಿದೆ.

ಮಂಗಳೂರು: ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020-21ರ ಅವಧಿಯಲ್ಲಿ 68.94 ಕೋಟಿ ರೂ. ಕಾಣಿಕೆ ಮೊತ್ತ ಸಂಗ್ರಹವಾಗಿದೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 29.97 ಕೋಟಿ ರೂ. ಕಡಿಮೆಯಾಗಿದೆ. ಕೋವಿಡ್ -19ರ ನಂತರ ಈ ದೇವಾಲಯವನ್ನು 2020ರ ಮಾರ್ಚ್ 17ರಿಂದ ಸೆ. 8ರವರೆಗೆ ಮುಚ್ಚಲ್ಪಟ್ಟಿತು. ಪರಿಣಾಮವಾಗಿ, ದೇವಾಲಯವು ಆರು ತಿಂಗಳವರೆಗೆ ಯಾವುದೇ ಆದಾಯವನ್ನು ಗಳಿಸಲಿಲ್ಲ. 

ಸೆಪ್ಟೆಂಬರ್ 15ರಿಂದ 2021ರ ಮಾರ್ಚ್ 31ರವರೆಗೆ 68.94 ಕೋಟಿ ರೂ.ಗಳನ್ನು ಗಳಿಸಲಾಗಿದೆ ಎಂದು ದೇವಾಲಯ ನಿರ್ವಹಣಾ ಸಮಿತಿ ಅಧ್ಯಕ್ಷ ಮೋಹನ್ರಾಮ್ ಸುಲ್ಲಿ ತಿಳಿಸಿದ್ದಾರೆ.

ದೇವಾಲಯದ ಆದಾಯದ ದೊಡ್ಡ ಭಾಗವು ವಿವಿಧ ‘ಸೇವೆ’ಗಳಿಂದ ಬಂದಿದೆ. ಇದಲ್ಲದೆ, ಎಸ್‌ಬಿ ಖಾತೆ, ಚೊಲ್ಟಿ ಮತ್ತು ಕಟ್ಟಡಗಳಿಂದ ಬಾಡಿಗೆ ಮತ್ತು ಕೃಷಿ ಉತ್ಪನ್ನಗಳನ್ನು ನೀಡುವುದರಿಂದ ಆದಾಯವನ್ನು ಗಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT