ರೈಲು 
ರಾಜ್ಯ

ನೈಋತ್ಯ ರೈಲ್ವೆಯಿಂದ ತಮಿಳುನಾಡಿಗೆ 16 ರೈಲುಗಳು ರದ್ದು

ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್‍ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಕಳೆದ ರಾತ್ರಿಯಿಂದ 14 ದಿನಗಳ ಲಾಕ್‍ಡೌನ್‍ ಜಾರಿಗೆ ಬಂದ ನಂತರ ನೈಋತ್ಯ ರೈಲ್ವೆ, ಬಹುತೇಕ ತಮಿಳುನಾಡಿಗೆ ಸಂಪರ್ಕಿಸುವ 16 ರೈಲುಗಳನ್ನು ರದ್ದುಗೊಳಿಸಿದೆ.

ರೈಲುಗಳ ಸೇವೆ ರದ್ದು ವಿವಿಧ ದಿನಗಳಲ್ಲಿ ಜಾರಿಗೆ ಬರಲಿದೆ. ಬೆಂಗಳೂರು- ಚೆನ್ನೈ ಸೆಂಟ್ರಲ್‍ ನಡುವಿನ ಶತಾಬ್ಡಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸ್ಪೆಷಲ್ ಬುಧವಾರದಿಂದ ಎರಡೂ ಕಡೆಯಿಂದ ರದ್ದುಗೊಳ್ಳಲಿದೆ..

ಅದರಂತೆ ಕೊಯಮತ್ತೂರು-ಕೆ.ಎಸ್.ಆರ್. ಬೆಂಗಳೂರು ನಡುವೆ ವಾರದಲ್ಲಿ ಆರು ದಿನ ಸಂಚರಿಸುವ ರೈಲು ಸೇವೆ ಇದೇ ತಿಂಗಳ 29ರಿಂದ ಮುಂದಿನ ಆದೇಶದವರೆಗೆ  ಎರಡೂ ಕಡೆಗಳಿಂದ ರದ್ದಾಗಲಿದೆ. ಕೋಚುವೇಲಿ-ಬಾಣಸವಾಡಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ಹಂಸಫರ್ ಎಕ್ಸ್ ಪ್ರೆಸ್ ವಿಶೇಷ ರೈಲು, ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ನಡುವಿನ ರೈಲುಗಳನ್ನು ಕೂಡ ರದ್ದುಗೊಳಿಸಲಾಗುವುದು.

ಎರ್ನಾಕುಲಂ-ಬಾಣಸವಾಡಿ ವಾರಜ್ಜೆ ಎರಡು ಬಾರಿ ಸಂಚರಿಸುವ ರೈಲು ಮೇ 3ರಿಂದ ರದ್ದುಗೊಳ್ಳಲಿದೆ. ಬೆಂಗಳೂರು ಉಪನಗರ ಸಂಪರ್ಕಿಸುವ ಆರು ಮೆಮು ರೈಲುಗಳನ್ನು ಈ ತಿಂಗಳ 29ರಿಂದ  ರದ್ದುಗೊಳಿಸಲಾಗುತ್ತದೆ. ಕೆ.ಎಸ್.ಆರ್. ಬೆಂಗಳೂರು-ಮಾರಿಕುಪ್ಪಮ್, ಕೆ.ಎಸ್.ಆರ್. ಬೆಂಗಳೂರು-ಹೊಸೂರು, ಬೈಯಪ್ಪನಹಳ್ಳಿ-ಹೊಸೂರು ರೈಲು ಸೇವೆ ಸಹ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT