ಕೊರೋನಾದಿಂದ ಮೃತಪಟ್ಟವರನ್ನು ಚಿತಾಗಾರದಲ್ಲಿ ಸುಡಲು ಆಂಬ್ಯುಲೆನ್ಸ್ ಗಳು ಸಾಲಿನಲ್ಲಿ ನಿಂತಿರುವ ದೃಶ್ಯ ಬೆಂಗಳೂರಿನಲ್ಲಿ ಪೀಣ್ಯ ಚಿತಾಗಾರ ಸಮೀಪ ಕಂಡುಬಂದದ್ದು ಹೀಗೆ 
ರಾಜ್ಯ

18 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಮೇ ಮಧ್ಯಭಾಗದಿಂದಷ್ಟೇ ಲಭ್ಯ: ಸರ್ಕಾರದ ಮೂಲಗಳಿಂದ ಮಾಹಿತಿ 

18ರಿಂದ 44 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಮೇ 1ರಿಂದ ಲಭ್ಯವಾಗುತ್ತದೆ ಎಂದು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಕೋವಿನ್ ಆಪ್ ತೆರೆದ ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಬೆಂಗಳೂರು: 18ರಿಂದ 44 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಮೇ 1ರಿಂದ ಲಭ್ಯವಾಗುತ್ತದೆ ಎಂದು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಕೋವಿನ್ ಆಪ್ ತೆರೆದ ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ಕೊರೋನಾ ಸಂಕಷ್ಟ ಕಾಲದಲ್ಲಿ, ಅಪಾರ ಸಾವು-ನೋವುಗಳಾಗುತ್ತಿರುವಾಗ ಲಸಿಕೆ ಹಾಕಿಸಿಕೊಂಡು ಸ್ವಲ್ಪ ಬಚಾವಾಗೋಣ ಎಂಬ ಆಲೋಚನೆ ಎಲ್ಲರದ್ದಾಗಿರುತ್ತದೆ.ಆದರೆ ಕರ್ನಾಟಕದಲ್ಲಿ ಈ ವಯಸ್ಸಿನ ಗುಂಪಿನವರಿಗೆ ಮೇ ಎರಡನೇ ವಾರದಿಂದ ಅಥವಾ ಮೇ 3 ಮೂರನೇ ವಾರದ ಆರಂಭದಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭವಾಗುತ್ತದಷ್ಟೆ ಎಂದು ಹೇಳಲಾಗುತ್ತಿದೆ.

ಲಸಿಕೆಗೆ ಹಲವು ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಬೇಡಿಕೆಯಿದೆ, ಆರ್ಡರ್ ಗಳು ಕೂಡ ಸಾಕಷ್ಟು ಬರುತ್ತಿವೆ. ಕೇಂದ್ರ ಸರ್ಕಾರಕ್ಕೆ ಮಾಡಿಕೊಂಡ ಪೂರ್ವ ಬದ್ಧತೆಯಂತೆ ಲಸಿಕೆ ಉತ್ಪಾದಕರು ಲಸಿಕೆಗಳ ಮೊದಲ ಭಾಗವನ್ನು ಕರ್ನಾಟಕಕ್ಕೆ ಮೇ ಮಧ್ಯಭಾಗದಲ್ಲಿ ಪೂರೈಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ನಿನ್ನೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ನಾಲ್ಕನೇ ಹಂತದ ಕೊರೋನಾ ಲಸಿಕೆ ಅಭಿಯಾನವನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ನೋಂದಾಯಿಸಿಕೊಂಡಿರುವ ಕೋಟ್ಯಂತರ ಮಂದಿ ತಮಗೆ ಲಸಿಕೆಯ ದಿನಾಂಕ ಮತ್ತು ಕೇಂದ್ರಗಳು ಕೋವಿನ್ ಆಪ್ ನಲ್ಲಿ ತೋರಿಸುತ್ತಿಲ್ಲ ಎಂದು ದೂರುಗಳು ಬಂದಿದ್ದು, ಲಸಿಕೆಗಳು ಸಾಕಷ್ಟು ಬಂದ ನಂತರ ಅಭಿಯಾನ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಒಂದು ಕೋಟಿ ಲಸಿಕೆ ಡೋಸ್ ಗಳನ್ನು ಸಂಗ್ರಹಿಸುತ್ತಿದೆ. ಇನ್ನೂ ಹೆಚ್ಚುವರಿ ಒಂದು ಕೋಟಿ ಡೋಸ್ ಗಳನ್ನು ಸಂಗ್ರಹಿಸಲು ಆರ್ಡರ್ ಮಾಡಲಾಗಿದೆ. ಲಸಿಕೆ ಅಭಿಯಾನದ ನಾಲ್ಕನೇ ಹಂತವನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಫಾರ್ಮ ಕಂಪೆನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಮೂರನೇ ಲಸಿಕೆ ಆಯ್ಕೆಯನ್ನು ಸಹ ಪರಿಚಯಿಸಲಾಗುವುದು. ಈ ಪರಿಸ್ಥಿತಿಗಳ ಮಧ್ಯೆ, ಲಸಿಕೆಗಳ ಲಭ್ಯತೆ ನೋಡಿಕೊಂಡು ಅಭಿಯಾನ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಲಸಿಕೆ ಅಭಿಯಾನ ಕ್ರಮಬದ್ಧವಾಗಿ, ಶಿಸ್ತುಬದ್ಧವಾಗಿ ಮತ್ತು ಸರಾಗವಾಗಿ ಜಾರಿಗೆ ಬರಲು ಯೋಜನೆ ರೂಪಿಸುತ್ತಿದ್ದೇವೆ ಎಂದ ಮುಖ್ಯಮಂತ್ರಿಗಳು ಈಗಾಗಲೇ ಆರ್ಡರ್ ಕೊಟ್ಟಿರುವ ಲಸಿಕೆಗಳು ಯಾವಾಗ ಬರುತ್ತವೆ ಎಂದು ಹೇಳಲಿಲ್ಲ. ಮೇ ಎರಡನೇ ವಾರದಲ್ಲಿ ಸೆರಂ ಇನ್ಸ್ ಟಿಟ್ಯೂಟ್ ನಿಂದ ಕೋವಿಶೀಲ್ಡ್ ಒಂದು ಕೋಟಿ ಲಸಿಕೆಗಳು ಕರ್ನಾಟಕಕ್ಕೆ ಬರಬಹುದು ಎಂಬ ಮಾಹಿತಿ ಸರ್ಕಾರ ಮೂಲದಿಂದ ಸಿಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT