ರಾಜ್ಯ

'ನಮ್ಮ ಪರಂಪರೆಯ ಪ್ರಮುಖ ಭಾಗ': ರಾಜಭವನದಲ್ಲಿ ಜಾನಪದದ ಮಹತ್ವ ಸಾರಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

Srinivasamurthy VN

ಬೆಂಗಳೂರು: ಜಾನಪದವು ನಮ್ಮ ಪರಂಪರೆಯ ಪ್ರಮುಖ ಭಾಗವಾಗಿದೆ ಎಂದು  ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

ಬೆಂಗಳೂರಿನ ರಾಜಭವನದಲ್ಲಿ ನಡೆದ ಜಾನಪದದ ಮಹತ್ವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,  ಜಾನಪದವು ನಮ್ಮ ಪರಂಪರೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

"ಜಾನಪದವು ನಮ್ಮ ಪರಂಪರೆಯ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಅದರ ನಿಜವಾದ ಅರ್ಥದಲ್ಲಿ, ಜನರ ಸಾಹಿತ್ಯ ಎಂದು ಅವರು ಹೇಳಿದರು. 

ಅಂತೆಯೇ 'ಭಾರತವು ದೊಡ್ಡ ಇತಿಹಾಸವನ್ನು ಹೊಂದಿದೆ.  ಜಾನಪದ ಮತ್ತು ಒಟ್ಟಾರೆ ಸಂಪ್ರದಾಯಗಳ ಶ್ರೀಮಂತ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪ್ರತಿಯೊಂದು ಭಾಗವು ಜಾನಪದ ಸಂಪ್ರದಾಯಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ಜಾನಪದವು ವೈವಿಧ್ಯತೆ ಮತ್ತು ಬಹುಸಂಸ್ಕೃತಿಯ ನೈಜ ಚೈತನ್ಯವನ್ನು ಒಳಗೊಂಡಿದೆ ಎಂದು ಹೇಳಿದರು.

ಅಲ್ಲದೆ ಈ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡುತ್ತಿದ್ದ ಸಮುದಾಯಗಳು ಈಗ ಕಣ್ಮರೆಯಾಗುತ್ತಿವೆ. ನಾವು ಅವರನ್ನು ರಕ್ಷಿಸಬೇಕು ಮತ್ತು ಉತ್ತೇಜಿಸಬೇಕು ... ನಾವು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಬಾರದು. ನಮ್ಮಲ್ಲಿ ಉತ್ತಮ ಸಂಸ್ಕೃತಿಯಿದೆ, ನಾವು ಇತರ ಸಂಸ್ಕೃತಿಗಳನ್ನು ಏಕೆ ಅನುಸರಿಸಬೇಕು ಮತ್ತು ಅಭ್ಯಾಸ ಮಾಡಬೇಕು? ಎಂದು ವೆಂಕಯ್ಯ ನಾಯ್ಡು ಪ್ರಶ್ನಿಸಿದರು.

ವಿಶ್ವದಲ್ಲೇ ಮೊದಲ ಜಾನಪದ ವಿಶ್ವವಿದ್ಯಾಲಯನ್ನು ಸ್ಥಾಪನೆ ಮಾಡಿದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ. ಅಪರೂಪದ ಕಲೆ ನಶಿಸಿ ಹೋಗದಂತೆ ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು. ಬದಲಾದ ಕಾಲಘಟ್ಟದಲ್ಲಿ ಜನಪದ ಕಲೆಗಳು ಮಹತ್ವ ಕಳೆದುಕೊಳ್ಳುತ್ತವೆ. ಈ ವೃತ್ತಿಯಲ್ಲಿ ತೊಡಗಿದ್ದ ಬಹುತೇಕ ಯುವಕ-ಯುವತಿಯರು ಹಳ್ಳಿಗಳನ್ನು ತೊರೆದು ಪಟ್ಟಣ ಸೇರುತ್ತಿದ್ದಾರೆ. ಇದರಿಂದಾಗಿ ಹಿಂದಿನ ವೈಭವ ಮರೆಯಾಗುತ್ತಿದೆ. ಇದು ಬೇಸರದ ಸಂಗತಿ ಎಂದು ಉಪರಾಷ್ಟ್ರಪತಿ ಹೇಳಿದರು.

SCROLL FOR NEXT