ಬೆಂಗಳೂರು: ಸಂಸದೆ ಸುಮಲತ ಸಹೋದರಿ ರೇಣುಕಾಗೆ ಲಕ್ಷಾಂತರ ರೂಪಾಯಿ ವಂಚನೆಗೈದಿದ್ದ ಹೆಚ್ಡಿಎಫ್ಸಿ ಬ್ಯಾಂಕ್ ಮ್ಯಾನೇಜರ್ ವಿಶಾಲಾಕ್ಷಿ ಭಟ್ ಇದೀಗ ಧಮ್ಕಿ ಹಾಕಿದ್ದಾರೆ.
ವಿಶಾಲಾಕ್ಷಿ ಅವರು ರೇಣುಕಾ ಅವರಿಗೆ ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ಸುಮಾರು 60 ಲಕ್ಷ ಹಣವನ್ನು ಹೂಡಿಕೆ ಮಾಡುವಂತೆ ಹೇಳಿ ವಂಚಿಸಿದ್ದರು. ಈ ಸಂಬಂಧ 2015ರಲ್ಲಿ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಎಚ್ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಶಾಲಾಕ್ಷಿ ಎಂಬವರು ವಂಚನೆ ಮಾಡಿದ್ದು, ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 60 ಲಕ್ಷ ರೂ. ಹೂಡಿಕೆ ಮಾಡಿಸಿ ವಿಶಾಲಾಕ್ಷಿ ಭಟ್ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 60 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಿರುವಾಗಲೇ ರೇಣುಕಾ ನಿವಾಸಕ್ಕೆ ಬಂದು ಖಾಲಿ ಪೇಪರ್ ಗೆ ಸಹಿ ಹಾಕುವಂತೆ ವಿಶಾಲಾಕ್ಷಿ ಭಟ್ ಧಮ್ಕಿ ಹಾಕಿದ್ದಾರೆ
ಹಣ ವಂಚನೆ ಮಾಡಿದ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೂ ವಿಶಾಲಾಕ್ಷಿಭಟ್ ಮನೆಗೆ ಬಂದು ಖಾಲಿ ಪೇಪರ್ ಗೆ ಸಹಿ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ವಿಶಾಲಾಕ್ಷಿ ಭಟ್ ಹೂಡಿಕೆ ಮಾಡಿಸಿ ಮೋಸ ಮಾಡಿದ ಸಂಬಂಧ ನಾನು ಕೊಟ್ಟಿರುವ ದೂರು ತನಿಖೆ ಆಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ.