ರಾಜ್ಯ

ಡಿ.26ಕ್ಕೆ 'ಪೂರ್ಣ ಮಂಡಲೋತ್ಸವ' ಕಾರ್ಯಕ್ರಮ

Manjula VN

ಬೆಂಗಳೂರು: ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಸುವರ್ಣ ಮಹೋತ್ಸವದ ಅಂಗವಾಗಿ ಜನಸೇವಾ ವಿಶ್ವಸ್ಥ ಮಂಡಳಿಯು ಇದೇ 26ರಂದು ‘ಪೂರ್ಣ ಮಂಡಲೋತ್ಸವ’ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಸೇವಾ ವಿದ್ಯಾಕೇಂದ್ರ ಆಡಳಿತವು, ಶಿಕ್ಷಣದಲ್ಲಿ ಭಾರತೀಯತೆ’ ಎಂಬ ಪರಿಕಲ್ಪನೆಯೊಂದಿಗೆ ಗುರುಕುಲ ಪದ್ಧತಿ ಮೂಲಕ ನಮ್ಮ ಸಂಸ್ಥೆ ಶಿಕ್ಷಣ ನೀಡುತ್ತಿದೆ. ಮಾಗಡಿ ರಸ್ತೆಯ ಚನ್ನೇನಹಳ್ಳಿ ಸುತ್ತಮುತ್ತಲಿನ ವಿವಿಧ ಕಾರ್ಯಕ್ರಮಗಳ ಮೂಲಕ ಸುಮಾರು 90 ಗ್ರಾಮಗಳಲ್ಲಿ ಸೇವಾ ಆಧಾರಿತ ಚಟುವಟಿಕೆಗಳ ಮೂಲಕ ತಮ್ಮ ಪರಿಕಲ್ಪನೆಯನ್ನು 20 ಹಳ್ಳಿಗಳಿಗೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅವರು ಶಿಕ್ಷಣದ ಮೂಲಕ ಭಾರತೀಯ ಸಂಪ್ರದಾಯದ ಮೌಲ್ಯಗಳನ್ನು ಸಂಸ್ಥೆ ಬೆಳೆಸುತ್ತಿದೆ. ಇದಕ್ಕೆ ಸಹಕಾರ ಹಾಗೂ ಬೆಂಬಲ ಅಗತ್ಯವಿದೆ ಎಂದು ತಿಳಿಸಿದ್ದಾರೆ.

SCROLL FOR NEXT