ಎಕ್ಸ್‌ಪ್ರೆಸ್ ಆರ್‌ಟಿ-ಪಿಸಿಆರ್ ಯಂತ್ರ 
ರಾಜ್ಯ

'ಅಪಾಯದಲ್ಲಿಲ್ಲದ' ರಾಷ್ಟ್ರಗಳಿಂದ ಬೆಂಗಳೂರಿಗೆ ಬರುವ ಶೇ. 2 ರಷ್ಟು ಪ್ರಯಾಣಿಕರಿಗೆ ಕೋವಿಡ್ ರ‍್ಯಾಂಡಮ್‌ ಟೆಸ್ಟ್

ಓಮಿಕ್ರಾನ್ ವೇರಿಯಂಟ್ ಭಯದ ನಂತರ ಹೊಸ ನಿಯಮಗಳಿಗೆ ಅನುಗುಣವಾಗಿ, 'ಅಪಾಯದಲ್ಲಿಲ್ಲದ' ದೇಶಗಳಿಂದ ಬೆಂಗಳೂರಿಗೆ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರು ಕೋವಿಡ್ ರ‍್ಯಾಂಡಮ್‌ ಟೆಸ್ಟ್ ಗೆ ಒಳಗಾಗುತ್ತಿದ್ದಾರೆ...

ಬೆಂಗಳೂರು: ಓಮಿಕ್ರಾನ್ ವೇರಿಯಂಟ್ ಭಯದ ನಂತರ ಹೊಸ ನಿಯಮಗಳಿಗೆ ಅನುಗುಣವಾಗಿ, 'ಅಪಾಯದಲ್ಲಿಲ್ಲದ' ದೇಶಗಳಿಂದ ಬೆಂಗಳೂರಿಗೆ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರು ಕೋವಿಡ್ ರ‍್ಯಾಂಡಮ್‌ ಟೆಸ್ಟ್ ಗೆ ಒಳಗಾಗುತ್ತಿದ್ದಾರೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಶನಿವಾರ ತಿಳಿಸಿದೆ.

ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬಿಐಎಎಲ್, "ಅಂತರರಾಷ್ಟ್ರೀಯ ಪ್ರಯಾಣದ ಮಾರ್ಗಸೂಚಿಗಳ ಪ್ರಕಾರ, 'ಅಪಾಯಕಾರಿ' ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುವ ಶೇ. 2 ರಷ್ಟು ಪ್ರಯಾಣಿಕರು ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ರ‍್ಯಾಂಡಮ್‌ ಪರೀಕ್ಷೆಗೆ ಒಳಗಾಗುತ್ತಾರೆ. ಅಂತಹ ಪ್ರಯಾಣಿಕರ ರ‍್ಯಾಂಡಮ್‌ ಪರೀಕ್ಷೆಯ ವೆಚ್ಚವನ್ನು ಬಿಐಎಎಲ್ ಭರಿಸಲಿದೆ" ಕೆಐಎ ಟ್ವೀಟ್ ಮಾಡಿದೆ.

ಓಮಿಕ್ರಾನ್ ರೂಪಾಂತರಿ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನವೆಂಬರ್ 30 ರಂದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅಪಾಯದಲ್ಲಿರುವ ದೇಶಗಳನ್ನು ಹೊರತುಪಡಿಸಿ ಇತರೆ ದೇಶಗಳ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುವುದು ಮತ್ತು ಆಗಮನದ ನಂತರ 14 ದಿನಗಳವರೆಗೆ ಅವರ ಆರೋಗ್ಯ ಮೇಲೆ ಸ್ವಯಂ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದೆ.

ಒಂದು ಉಪ-ವಿಭಾಗ ಅಥವಾ ಒಟ್ಟು ವಿಮಾನ ಪ್ರಯಾಣಿಕರಲ್ಲಿ ಶೇ. 2 ರಷ್ಟು ಪ್ರಯಾಣಿಕರು ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ರ‍್ಯಾಂಡಮ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದೆ.

ಶುಕ್ರವಾರದಿಂದ ಆಗಮಿಸುವ ಪ್ರಯಾಣಿಕರಿಗೆ ಮತ್ತೊಂದು ದೊಡ್ಡ ರಿಲೀಫ್ ಸಿಕ್ಕಿದ್ದು, ಎಕ್ಸ್‌ಪ್ರೆಸ್ ಆರ್‌ಟಿ-ಪಿಸಿಆರ್‌ಗಾಗಿ 50 ಹೊಸ ಅಬಾಟ್ ಐಡಿ ಯಂತ್ರಗಳನ್ನು ವಿಮಾನ ನಿಲ್ದಾಣಕ್ಕೆ ಸ್ಥಾಪಿಸಲಾಗಿದೆ.

ಶೇ 90 ರಷ್ಟು ಪ್ರಯಾಣಿಕರು ಕ್ಷಿಪ್ರ ಅಥವಾ ಎಕ್ಸ್‌ಪ್ರೆಸ್ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಆರಿಸಿಕೊಳ್ಳುತ್ತಾರೆ, ಇದಕ್ಕೆ 3,000 ರೂ. ವೆಚ್ಚವಾಗುತ್ತದೆ ಮತ್ತು ಒಂದು ಗಂಟೆಯೊಳಗೆ ಫಲಿತಾಂಶ ನೀಡುತ್ತದೆ. ನಿಯಮಿತ ಪರೀಕ್ಷೆಗೆ 500 ರೂ. ವೆಚ್ಚವಾಗುತ್ತದೆ ಮತ್ತು ಫಲಿತಾಂಶ ಬರಲು 5 ರಿಂದ 6 ಗಂಟೆ ತೆಗೆದುಕೊಳ್ಳುತ್ತದೆ. ಬಿಐಎಎಲ್ ವಿಮಾನ ನಿಲ್ದಾಣದಲ್ಲಿ ವೈ-ಫೈ ಸಂಪರ್ಕವನ್ನು ಸುಧಾರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT