ಸಾಂದರ್ಭಿಕ ಚಿತ್ರ 
ರಾಜ್ಯ

ಕ್ಲಿನಿಕ್ ಸೇವಾ ಲೋಪ ಸಾಬೀತು: ದೂರುದಾರರಿಗೆ 3 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕರ ವೇದಿಕೆ ನಿರ್ದೇಶನ

ದೂರುದಾರರು ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು. ಈ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು.

ಬೆಂಗಳೂರು: ಗ್ರಾಹಕರ ವೇದಿಕೆ ನಗರದ ಶ್ರವಣ ಕ್ಲಿನಿಕ್ ಒಂದಕ್ಕೆ 3 ಲಕ್ಷ ರೂ.ಗಳನ್ನು ದೂರುದಾರಿಗೆ ನೀಡುವಂತೆ ನಿರ್ದೇಶನ ನೀಡಿದೆ. 

ಸುದೀಪ್ ಹೇಮಾರೆಡ್ಡಿ ಎಂಬುವವರು ಕ್ಲಿನಿಕ್ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಮಾರ್ಚ್ 2019ರಲ್ಲಿ ಸುದೀಪ್ ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ಅದರ ಮೊತ್ತ 2.5 ಲಕ್ಷ ರೂ. ಅದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು.

ಎರಡನೇ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು. ಅಲ್ಲದೆ 2.5 ಲಕ್ಷ ಹಣವನ್ನು ಮರಳಿಸಲೂ ನಿರಾಕರಿಸಿದರು. ಆಗ ಸುದೀಪ್ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ವಿಚಾರಣೆಯಲ್ಲಿ ಕ್ಲಿನಿಕ್ ತಪ್ಪು ಎಸಗಿರುವುದು ಸಾಬೀತಾಗಿತ್ತು. ಹೀಗಾಗಿ ಸಾಧನದ ಶುಲ್ಕ ಸೇರಿದಂತೆ 50,000 ಪರಿಹಾರ ಸೇರಿ ಒಟ್ಟು 3 ಲಕ್ಷ ರೂ.ಗಳನ್ನು ದೂರುದಾರರಿಗೆ ಪಾವತಿಸುವಂತೆ ವೇದಿಕೆ ಕ್ಲಿನಿಕ್ಕಿಗೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT