ಸಾಂದರ್ಭಿಕ ಚಿತ್ರ 
ರಾಜ್ಯ

ಕ್ಲಿನಿಕ್ ಸೇವಾ ಲೋಪ ಸಾಬೀತು: ದೂರುದಾರರಿಗೆ 3 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕರ ವೇದಿಕೆ ನಿರ್ದೇಶನ

ದೂರುದಾರರು ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು. ಈ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು.

ಬೆಂಗಳೂರು: ಗ್ರಾಹಕರ ವೇದಿಕೆ ನಗರದ ಶ್ರವಣ ಕ್ಲಿನಿಕ್ ಒಂದಕ್ಕೆ 3 ಲಕ್ಷ ರೂ.ಗಳನ್ನು ದೂರುದಾರಿಗೆ ನೀಡುವಂತೆ ನಿರ್ದೇಶನ ನೀಡಿದೆ. 

ಸುದೀಪ್ ಹೇಮಾರೆಡ್ಡಿ ಎಂಬುವವರು ಕ್ಲಿನಿಕ್ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಮಾರ್ಚ್ 2019ರಲ್ಲಿ ಸುದೀಪ್ ಕ್ಲಿನಿಕ್ ನಿಂದ ಶ್ರವಣ ಸಾಧನವೊಂದನ್ನು ಖರೀದಿಸಿದ್ದರು. ಅದರ ಮೊತ್ತ 2.5 ಲಕ್ಷ ರೂ. ಅದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೊಸ ಸಾಧನವನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲೂ ದೋಷ ಕಂಡು ಬಂದಿತ್ತು.

ಎರಡನೇ ಸಾಧನವನ್ನು ಬದಲಾಯಿಸಿಕೊಡುವಂತೆ ಕೇಳಿಕೊಂಡಾಗ ಕ್ಲಿನಿಕ್ ಮಂದಿ ನಿರಾಕರಿಸಿದ್ದರು. ಅಲ್ಲದೆ 2.5 ಲಕ್ಷ ಹಣವನ್ನು ಮರಳಿಸಲೂ ನಿರಾಕರಿಸಿದರು. ಆಗ ಸುದೀಪ್ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ವಿಚಾರಣೆಯಲ್ಲಿ ಕ್ಲಿನಿಕ್ ತಪ್ಪು ಎಸಗಿರುವುದು ಸಾಬೀತಾಗಿತ್ತು. ಹೀಗಾಗಿ ಸಾಧನದ ಶುಲ್ಕ ಸೇರಿದಂತೆ 50,000 ಪರಿಹಾರ ಸೇರಿ ಒಟ್ಟು 3 ಲಕ್ಷ ರೂ.ಗಳನ್ನು ದೂರುದಾರರಿಗೆ ಪಾವತಿಸುವಂತೆ ವೇದಿಕೆ ಕ್ಲಿನಿಕ್ಕಿಗೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

'ನನ್ನ ಸ್ನೇಹಿತ ಮೋದಿ ಜೊತೆಗೆ ಉತ್ತಮ ಮಾತುಕತೆ ನಡೆಸಿದೆ': ಡೊನಾಲ್ಡ್ ಟ್ರಂಪ್-Video

Bengaluru: ಎಲೆಕ್ಟ್ರಾನಿಕ್ ಸಿಟಿಯಲ್ಲಿ 'ಕೃತಕ ಬುದ್ಧಿಮತ್ತೆಯ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ- ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ಬರಗಾಲದ ಕರಿನೆರಳು; ಆದರೆ ಸಿಎಂ- ಡಿಸಿಎಂಗೆ ಕುರ್ಚಿ ಕಿತ್ತಾಟದ ತೆವಲು! ಆರ್.ಅಶೋಕ್ ಕಿಡಿ

SCROLL FOR NEXT