ರಾಜ್ಯ

ಕಾಸರಗೋಡು ಬಳಿ ದೋಣಿ ಮುಳುಗಡೆ: ಮೂವರು ಮೀನುಗಾರರು ನಾಪತ್ತೆ

Srinivas Rao BV

ಕಾಸರಗೋಡು: ಕಾಸರಗೋಡು ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಭಾನುವಾರ ಮುಂಜಾನೆ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ.        

ಇಲ್ಲಿನ ಕಿಜೂರ್  ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಏಳು ಮೀನುಗಾರರಿದ್ದ ದೋಣಿ ಮುಳುಗಡೆಯಾಗಿದ್ದು, ಈ ಪೈಕಿ ನಾಲ್ವರು ಮೀನುಗಾರರು ಕಡಲ ತೀರಕ್ಕೆ ಈಜಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.  

ನಾಪತ್ತೆಯಾದ ಮೀನುಗಾರರನ್ನು, ಕಾರ್ತೀಕ್ ರತ್ ಗೀಶ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ನಾಪತ್ತೆಯಾದವರ ಪತ್ತೆಗೆ ಕರಾವಳಿ ರಕ್ಷಣಾ ಪಡೆ ಮತ್ತು ಇತರ ಮೀನುಗಾರರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

SCROLL FOR NEXT