ಕಾರ್ಯಾಚರಣೆಯ ದೃಶ್ಯ 
ರಾಜ್ಯ

ರಾಮನಗರ: ಪೈಪ್‌ಲೈನ್ ಒಳಗೆ ಸಿಲುಕಿಕೊಂಡ ರೈತ; ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ತನ್ನ ಜಮೀನಿಗೆ ನೀರಿನ ಪೈಪ್ ಸಂಪರ್ಕಿಸಲು ಪೈಪ್‌ಲೈನ್ ಪ್ರವೇಶಿಸಿದ ರೈತನೊಬ್ಬ, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆತನನ್ನು ರಕ್ಷಿಸುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಅದೇ ಪೈಪ್‌ಲೈನ್ ನಲ್ಲಿ ಸಿಲುಕಿದ್ದ ಘಟನೆ ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿಡ್ಡೋಡಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು: ತನ್ನ ಜಮೀನಿಗೆ ನೀರಿನ ಪೈಪ್ ಸಂಪರ್ಕಿಸಲು ಪೈಪ್‌ಲೈನ್ ಪ್ರವೇಶಿಸಿದ ರೈತನೊಬ್ಬ, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆತನನ್ನು ರಕ್ಷಿಸುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಅದೇ ಪೈಪ್‌ಲೈನ್ ನಲ್ಲಿ ಸಿಲುಕಿದ್ದ ಘಟನೆ ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿಡ್ಡೋಡಿ ಗ್ರಾಮದಲ್ಲಿ ನಡೆದಿದೆ.

ಗೋವಿಂದರಾಜು ರಾಜಣ್ಣ ಅವರ ಜಮೀನು  ಬೆಂಗಳೂರು ಮತ್ತು ಮೈಸೂರು ನಡುವೆ ನಡೆಯುತ್ತಿರುವ ಎಕ್ಸ್‌ಪ್ರೆಸ್ ಹೆದ್ದಾರಿಯ ಭಾಗವಾಗಿ ನಿರ್ಮಿಸಲಾದ ಬೈಪಾಸ್ ರಸ್ತೆಯ ಎರಡೂ ಬದಿಗಳಲ್ಲಿದೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ವಿಭಾಗದ ಅಧಿಕಾರಿಯೊಬ್ಬರು ರಾಜಣ್ಣನ ಭೂಮಿಗೆ ನೀರು ಸಂಪರ್ಕಿಸುವ ಪೈಪ್‌ಲೈನ್‌ಗಳನ್ನು ಹಾಕಲಾಗಿದೆ ಎಂದು ಹೇಳಿದರು.

ಪೈಪ್‌ಲೈನ್‌ನಿಂದ ತನ್ನ ಭೂಮಿಗೆ ನೀರಿನ ಸಂಪರ್ಕವನ್ನು ಪಡೆಯಲು, ರಾಜಣ್ಣ ಬೆಳಿಗ್ಗೆ 11 ರ ಸುಮಾರಿಗೆ ಪೈಪ್‌ಲೈನ್‌ ಪ್ರವೇಶಿಸಿ ಸುಮಾರು 200 ಅಡಿ ದಾಟಿದ್ದರು. ಮಣ್ಣಿನ ರಾಶಿಯು ಪೈಪ್‌ಲೈನ್ ಅನ್ನು ಮುಚ್ಚಿದ್ದರಿಂದ ಅವರು ಅದರ ಮೂಲಕ ಹಾದುಹೋಗಲು ಪ್ರಯತ್ನಿದ್ದಾರೆ. ಆಗ ಒಳಗೇ ಸಿಲುಕಿದ್ದಾರೆ.

ಅಪಾಯವನ್ನು ಗ್ರಹಿಸಿದ ಅವರ ಮಗ ವೇಣುಗೋಪಾಲ್, ತಂದೆ ಪೈಪ್‌ಲೈನ್‌ನಿಂದ ಹೊರಬರಲು ಸಾಧ್ಯವಾಗದ ಸುಮಾರು 30 ನಿಮಿಷಗಳ ನಂತರ ಇಲಾಖೆಯ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿದರು.

“ನಾವು ರಾಜಣ್ಣ ಅವರೊಂದಿಗೆ ಪೈಪ್‌ಲೈನ್‌ನ ಇನ್ನೊಂದು ತುದಿಯಿಂದ ಮಾತನಾಡಿದೆವು. ಅವರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದರು ಮತ್ತು ನಾವು ಅವರಿಗೆ ಆಮ್ಲಜನಕವನ್ನು ಪೂರೈಸಲು ವ್ಯವಸ್ಥೆ ಮಾಡಿದ್ದೇವೆ. ನಮ್ಮ ತಂಡ ಪೈಪ್‌ಲೈನ್‌ಗೆ ಪ್ರವೇಶಿಸಿ ಅವರನ್ನು ಹೊರಗೆ ಕರೆತರಲು ಸಾಧ್ಯವಾಗಲಿಲ್ಲ, ಆದ್ದರಿಂದ, ಪೈಪ್‌ಲೈನ್ ಅನ್ನು ಮುರಿಯಲು ನಿರ್ಧರಿಸಲಾಯಿತು. ಪೈಪ್ಲೈನ್ ​​ಅನ್ನು ಮುರಿಯಲು ನಾವು ಭೂಮಿ ಅಗೆದಿದ್ದೇವೆ. ನಾವು ಮಣ್ಣಿನ ರಾಶಿಯನ್ನು ಕೈಗಳಿಂದ ತೆಗೆದುಹಾಕಿದ್ದೇವೆ ಮತ್ತು ನಮಗೆ ಅಪಾಯದ ಕರೆ ಬಂದ ಒಂದೂವರೆ ಗಂಟೆಯೊಳಗೆ ಅವರನ್ನು ರಕ್ಷಿಸಿದೆವು” ಎಂದು ಅಧಿಕಾರಿ ಹೇಳಿದರು.

"ನನ್ನೊಂದಿಗೆ ಯಾವುದೇ ಫೋನ್ ಇರಲಿಲ್ಲ ಆದರೆ ನಾನು ನನ್ನ ಮಗನೊಂದಿಗೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದೆ, ಅವನಿಗೆ ನನ್ನ ಸ್ಥಿತಿ ಬಗ್ಗೆ ವಿವರಿಸುತ್ತಿದ್ದೆ" ಎಂದು ರಾಜಣ್ಣ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT