ರಾಜ್ಯ

ಪರೀಕ್ಷೆ ಇಲ್ಲದೆ ರೀಪಿಟರ್ಸ್ ಪಾಸು: ದ್ವಿತೀಯ ಪಿಯು ರಿಸಲ್ಟ್ ಘೋಷಣೆಗೆ ಸೂತ್ರವನ್ನು ಹೈಕೋರ್ಟ್ ಮುಂದಿಟ್ಟ ಸರ್ಕಾರ!

Nagaraja AB

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಲು ಸೂತ್ರವೊಂದನ್ನು ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್ ಮುಂದಿಟ್ಟಿದೆ.

ಎಸ್‌ಎಸ್‌ಎಲ್‌ಸಿ / ತತ್ಸಮಾನ ಪರೀಕ್ಷಾ ಅಂಕಗಳಲ್ಲಿ ಶೇಕಡಾ 45, ಪ್ರಥಮ ಪಿಯುಸಿ ಅಂಕಗಳಲ್ಲಿ ಶೇಕಡಾ 45 ಮತ್ತು  ದ್ವಿತೀಯ ಪಿಯುಸಿ  ಆಂತರಿಕ ಮೌಲ್ಯಮಾಪನ ಅಂಕಗಳಲ್ಲಿ ಶೇಕಡಾ 10 ರಷ್ಟು ಅಂಕಗಳನ್ನು ನೀಡುವ ಮೂಲಕ ರೆಗ್ಯುಲರ್ ಅಥವಾ ಪ್ರೆಶರ್ ವಿದ್ಯಾರ್ಥಿಗಳನ್ನು ಸರ್ಕಾರ ಪಾಸು ಮಾಡಲಿದೆ  ಎಂದು ಮೂಲಗಳು ಹೇಳಿವೆ.

ಸುಧಾರಣೆ ಉದ್ದೇಶದಿಂದ ತಮ್ಮ ಹಿಂದಿನ ಫಲಿತಾಂಶಗಳನ್ನು ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಹಿಂದಿನ ಫಲಿತಾಂಶವನ್ನು ಸ್ವೀಕರಿಸಲು ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅವಕಾಶದ ಬಗ್ಗೆಯೂ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಹಿಂದಿನ ಪ್ರಯತ್ನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಗ್ರೇಸ್ ಮಾರ್ಕ್ಸ್ ನೀಡುವ ಮೂಲಕ ರಿಪೀಟರ್ಸ್ ಗಳನ್ನು ಪಾಸ್ ಮಾಡುವುದಾಗಿ ಸರ್ಕಾರ ಹೇಳಿದೆ.

ಖಾಸಗಿ ವಿದ್ಯಾರ್ಥಿಗಳ ಕಾಳಜಿಯಿಂದ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿ ಒಂದು ಬಾರಿ ಅಥವಾ ಅನೇಕ ವಿಷಯಗಳಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೂ ಪಾಸಿಂಗ್ ಅಂಕಗಳ ಜೊತೆಗೆ ಶೇ.5 ರಷ್ಟು ಗ್ರೇಸ್ ಅಂಕಗಳೊಂದಿಗೆ ಪಾಸು ಮಾಡಲಾಗುತ್ತಿದೆ. ಆದರೆ, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ನೇರವಾಗಿ ನೋಂದಣಿಯಾಗಿದ್ದ ಖಾಸಗಿ ವಿದ್ಯಾರ್ಥಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಹಾಜರಾಗಬೇಕು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. 

ಜುಲೈ 31ರೊಳಗೆ ರಾಜ್ಯ ಸರ್ಕಾರ ಫಲಿತಾಂಶ ಪ್ರಕಟಿಸುವಂತೆ ನ್ಯಾಯಾಧೀಶರಾದ ಬಿ.ವಿ. ನಾಗರತ್ನ ಮತ್ತು ಹಂಚಟೆ ಸಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ನಿರ್ದೇಶಿಸಿದೆ.

SCROLL FOR NEXT