ರಾಜ್ಯ

ಹಣಕಾಸು ವಿವಾದ: ಬೆಂಗಳೂರಲ್ಲಿ ಆರ್‌ಟಿಐ ಕಾರ್ಯಕರ್ತನ ಮೇಲೆ ಹಲ್ಲೆ

Raghavendra Adiga

ಬೆಂಗಳೂರು: ತಮ್ಮ ಜಮೀನಿನ ಬಳಿ ಗುರುವಾರ ಹಲ್ಲೆಗೊಳಗಾದ ದ ಆರ್‌ಟಿಐ ಕಾರ್ಯಕರ್ತ ತನ್ನ ಸಂಬಂಧಿಕರೊಂದಿಗೆ ಹಣಕಾಸಿನ ವಿಚಾರದಲ್ಲಿ ವಿವಾದವನ್ನು ಹೊಂದಿದ್ದ ಎಂದು ವರದಿಯಾಗಿದೆ. ವೆಂಕಟೇಶ್ (43) ಅವರು ವಿವಾಹೇತರ ಸಂಬಂಧವನ್ನು ಹೊಂದಿದ್ದರು ಮತ್ತು ಹಲ್ಲೆ ನಡೆಸಿದವರ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧನವಾಗಲಿದೆ ಎಂದು ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ವಿವಿಧ ಸಾರ್ವಜನಿಕ ಯೋಜನೆಗಳ ವಿವರಗಳನ್ನು ಕೋರಿ ವೆಂಕಟೇಶ್ ಹಲವಾರು ಆರ್‌ಟಿಐ ಪ್ರಶ್ನೆಗಳನ್ನು ಸಲ್ಲಿಸಿದ್ದರು ಎಂದು ಹೇಳಲಾಗಿದೆ.

ತಮ್ಮ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಶಸ್ತ್ರಸಜ್ಜಿತ ಗ್ಯಾಂಗ್ ತಮ್ಮ ಬೈಕ್‌ನಲ್ಲಿ ಬಂದು ವೆಂಕಟೇಶ್ ಮೇಲೆ ಹಲ್ಲೆ ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ಗ್ಯಾಂಗ್ ಅವರ ಮೇಲೆ ಹಲ್ಲೆ ನಡೆಸಿ ಅವನ ಒಂದು ಕೈಗೆ ಮಾರಕ ಗಾಯಗಳನ್ನು ಮಾಡಿ ಪರಾರಿಯಾಗಿದೆ. ದಾರಿಹೋಕರು ಅವರ ಸಹಾಯಕ್ಕೆ ಧಾವಿಸುವ ಮೊದಲು ಗ್ಯಾಂಗ್ ಆರ್‌ಟಿಐ ಕಾರ್ಯಕರ್ತನನ್ನು ರಕ್ತದ ಮಡುವಿನಲ್ಲಿ ಬಿಟ್ಟಿತ್ತು. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಹಲ್ಲೆ ಪ್ರಕರಣ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿಲ್ಲಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಕೋರರನ್ನು ಬಂಧಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.

SCROLL FOR NEXT