ಸಂಗ್ರಹ ಚಿತ್ರ 
ರಾಜ್ಯ

ಟೌಕ್ಟೆ ಚಂಡಮಾರುತದಿಂದ ರಾಜ್ಯಕ್ಕೆ 209 ಕೋಟಿ ರೂ. ನಷ್ಟ

ಟೌಕ್ಟೆ ಚಂಡಮಾರುತದಿಂದ ರಾಜ್ಯಕ್ಕೆ ರೂ.209 ಕೋಟಿ ನಷ್ಟವಾಗಿದ್ದು, ನಷ್ಟ ಪರಿಶೀಲನೆಗೆ ಅಂತರ್ ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ) ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬುಧವಾರ ಮನವಿ ಮಾಡಿಕೊಂಡಿದೆ. 

ಬೆಂಗಳೂರು: ಟೌಕ್ಟೆ ಚಂಡಮಾರುತದಿಂದ ರಾಜ್ಯಕ್ಕೆ ರೂ.209 ಕೋಟಿ ನಷ್ಟವಾಗಿದ್ದು, ನಷ್ಟ ಪರಿಶೀಲನೆಗೆ ಅಂತರ್ ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ) ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬುಧವಾರ ಮನವಿ ಮಾಡಿಕೊಂಡಿದೆ. 

ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ರಾಜ್ಯ ಸರ್ಕಾರ, ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಗಳ ಪ್ರಕಾರ ಟೌಕ್ಟೆ ಚಂಡಮಾರುತದಿಂದಾಗಿ ರಾಜ್ಯಕ್ಕೆ ರೂ.209.30 ಕೋಟಿ ನಷ್ಟವಾಗಿದೆ. ಚಂಡಮಾರುತದ ಪರಿಣಾಮ ರಾಜ್ಯದಲ್ಲಿ 1047 ಕಿ.ಮೀ ರಸ್ತೆಗಳು, ಸಮುದ್ರ ಸಂರಕ್ಷಣಾ ಗೋಡೆಗಳು, 473 ಮನೆಗಳು, 71 ಸರ್ಕಾರಿ ಕಟ್ಟಡಗಳು, 29 ಸಣ್ಣ ನೀರಾವರಿ ಯೋಜನೆಗಳು, 79 ಟ್ರಾನ್ಸ್'ಫಾರ್ಮರ್ ಗಳು ಮತ್ತು 107 ಕಿ.ಮೀ ವಿದ್ಯುತ್ ಲೈನ್ ಗಳು ಹಾನಿಗೊಳಗಾಾಗಿವೆ. ಇದರ ಜೊತೆಗೆ 263 ದೋಣಿಗಳು ಮತ್ತು 324 ಬಲೆಗಳು ಹಾಳಾಗಿದ್ದು, ಮೀನುಗಾರರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ. 

ದೀರ್ಘಕಾಲೀನ ವಿಪತ್ತು ನಿರೋಧಕ ವಿದ್ಯುತ್ ಮೂಲಸೌಕರ್ಯಗಳನ್ನು ಸ್ಥಾಪಿಸಲು, ಚಂಡಮಾರುತದ ಉಲ್ಬಣಗೊಳ್ಳುವ ಸ್ಥಿತಿಸ್ಥಾಪಕಗಳೊಂದಿಗೆ ಕರಾವಳಿ ರಕ್ಷಣೆ ಮತ್ತು ಹಾನಿಗೊಳಗಾದ ನಿರ್ಣಾಯಕ ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು, ರಾಜ್ಯಕ್ಕೆ ರಾಷ್ಟ್ರೀಯ ಚಂಡಮಾರುತ ಅಪಾಯ ತಗ್ಗಿಸುವ ಯೋಜನೆ, ರಾಜ್ಯ ವಿಪತ್ತು ತಗ್ಗಿಸುವ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆಯ ನಿಧಿಯಂತಹ ಯೋಜನೆಗಳ ಮೂಲಕ ಕೇಂದ್ರದಿಂದ ಉದಾರವಾದ ಹಣದ ಅಗತ್ಯವಿರುತ್ತದೆ ಎಂದು ತಿಳಿಸಿದೆ. 

ಒಟ್ಟಾರೆಯಾಗಿ ಚಂಡಮಾರುತ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಆಂತರಿಕ ಜಿಲ್ಲೆಗಳ 125 ಗ್ರಾಮಗಳ ಮೇಲೆ ಪರಿಣಾಮ ಬೀರಿದ್ದು, ಮೂಲಸೌಕರ್ಯಗಳಿಗೆ ಸಾಕಷ್ಟು ಹಾನಿಯುಂಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT