ಕೋವಿಡ್-19 ಸಾವು (ಸಂಗ್ರಹ ಚಿತ್ರ) 
ರಾಜ್ಯ

ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ; ಎನ್ ಡಿಎಂ ಕಾಯ್ದೆ ಪ್ರಕಾರ ಪರಿಹಾರ ನೀಡಲಿ: ಕಾಂಗ್ರೆಸ್

ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂತ್ರಸ್ತರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ. 

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್-19 ಮೃತರ ಸಂಖ್ಯೆಯನ್ನು ತಿರುಚುತ್ತಿದೆ ಎಂದು ಆರೋಪ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಸಂತ್ರಸ್ತರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಪ್ರಕಾರ ಮೃತರ ಕುಟುಂಬ ಸದಸ್ಯರಿಗೆ ಸರ್ಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಆದರೆ ಸರ್ಕಾರ ಒಂದು ಲಕ್ಷ ಮಾತ್ರ ಪರಿಹಾರ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. 

ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಉಸ್ತುವಾರಿ, ಮಾಜಿ ಸಚಿವ ಹೆಚ್. ಕೆ ಪಾಟೀಲ್ ಜೂ.16 ರಂದು ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಜೂನ್ 14 ರಂದು ರಾಜ್ಯದಲ್ಲಿ 33,033 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ.

ಆದರೆ ಜನವರಿ 1, 2021 ರಿಂದ ಜೂನ್ 13 ರ ಅವಧಿಯಲ್ಲಿ ರಾಜ್ಯದಲ್ಲಿ 3,27,985 ಮಂದಿ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. ಆದರೆ 3.28 ಲಕ್ಷ ಹಾಗೂ 33,033 ರ ನಡುವೆ ಇರುವ ಅಂತರ ಪ್ರಶ್ನೆ ಮೂಡಿಸುತ್ತಿದೆ. ಈ ಆಧಾರದಲ್ಲಿ ಸ್ವಾಭಾವಿಕವಾಗಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಎಂದು ಪಾಟೀಲ್ ಪ್ರಶ್ನಿಸಿದ್ದಾರೆ. 

2020 ರಲ್ಲಿ ಮೃತಪಟ್ಟವರ ವರದಿಗಳನ್ನು ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. 2018-19 ರ ಅಂಕಿ-ಅಂಶಗಳ ಪ್ರಕಾರ ಜನವರಿಯಿಂದ ಜೂನ್ ವರೆಗೂ 88,000 ಸಾವುಗಳು ಸಂಭವಿಸಿವೆ ಎಂದು ಹೆಚ್ ಕೆ ಪಾಟೀಲ್ 

ಅಂದಾಜಿನ ಪ್ರಕಾರ ತೆಗೆದುಕೊಂಡರೂ 2021 ರಲ್ಲಿ 1.10 ಲಕ್ಷ ಸಾವು ಸಂಭವಿಸಬೇಕಿತ್ತು ಆದರೆ 3.28 ಲಕ್ಷ ಸಾವು ಊಹೆಗೂ ಮೀರಿದ್ದು ಎಂದು ಪಾಟೀಲ್ ಆರೋಪಿಸಿದ್ದಾರೆ.

ಈ ಪೈಕಿ 1.10 ಲಕ್ಷ ಸಾವುಗಳನ್ನು ಹೊರತುಪಡಿಸಿದರೂ ಒಟ್ಟಾರೆ ಸಾವಿನ ಸಂಖ್ಯೆ 2.18 ಲಕ್ಷವಾಗಿರುತ್ತದೆ. ಇದು ಅತ್ಯಂತ ಹೆಚ್ಚಿನ ಅಂಕಿ-ಸಂಖ್ಯೆಯಾಗಿದೆ. 2.25 ಲಕ್ಷ ಸಾವುಗಳ ಸಂಖ್ಯೆಯನ್ನು ತಿರುಚಲಾಗಿದೆ, ಇದು ಅಮಾನವೀಯ ಎಂದು ಪಾಟೀಲ್ ಹೇಳಿದ್ದಾರೆ.

ಸರ್ಕಾರ ಮಾಸಿಕವಾಗಿ ಪ್ರಕಟಿಸುತ್ತಿದ್ದ ಮೃತರ ವರದಿಯನ್ನು ನಿಲ್ಲಿಸಿದೆ. ಹಾಗೂ 2019-20 ಹಾಗೂ 2020-21 ರ ಅವಧಿಯಲ್ಲಿ ವೈದ್ಯಕೀಯವಾಗಿ ಪ್ರಮಾಣೀಕರಿಸಲಾದ ಸಾವುಗಳ ಕಾರಣದ ವರದಿಯನ್ನು ನಿಲ್ಲಿಸಿದೆ ಎಂದು ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT