ರಾಜ್ಯ

ಕೋವಿಡ್ 3ನೇ ಅಲೆ ಎದುರಿಸಲು ಸಜ್ಜಾಗಿ: ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿನಯ್ ಗುರೂಜಿ ಸಲಹೆ

Vishwanath S

ಬೆಂಗಳೂರು: ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ನರಕವನ್ನೇ ಸೃಷ್ಟಿಸಿತ್ತು. ಇನ್ನು ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ಮಾತುಗಳನ್ನಾಡಿದ್ದು ಇದನ್ನು ಬೆಂಬಲಿಸಿ ವಿನಯ್ ಗುರೂಜಿ ಸಹ ಕೋವಿಡ್ ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 

ಸಿಎಂ ನಿವಾಸ ಕಾವೇರಿಗೆ ಬಂದ ವಿನಯ್ ಗುರೂಜಿ, ಎರಡನೇ ಅಲೆ ವೇಳೆ ಆದ ಅವಾಂತರಗಳು ಮರುಕಳಿಸದಂತೆ ನೋಡಿಕೊಳ್ಳಿ. ಇನ್ನು ತಜ್ಞರು ಸಲಹೆ ಕೊಟ್ಟಂತೆ ಮೂರನೇ ಅಲೆ ಕೂಡಾ ಬರುತ್ತಿದೆ. ಅದರ ಬಗ್ಗೆ ನಿರ್ಲಕ್ಷ್ಯ ಬೇಡ. ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. 

ಇನ್ನು ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿಶೇಷ ಆಸ್ಪತ್ರೆಗಳನ್ನು ಸರ್ಕಾರ ಪ್ರಾರಂಭ ಮಾಡಬೇಕು. ಕೊಪ್ಪದಿಂದ ಶಿವಮೊಗ್ಗಕ್ಕೆ ಬರೋದಕ್ಕೆ ಒಂದೂವರೆ ಗಂಟೆಯಾಗುತ್ತದೆ. ಹೀಗಾಗಿ ಕೊಪ್ಪದಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು. 

SCROLL FOR NEXT