ರಾಜ್ಯ

ಬೆಂಗಳೂರು: ಕದ್ದ ವಸ್ತುವನ್ನು ರಸ್ತೆ ಬದಿ ಮಾರುತ್ತಿದ್ದ ಕಳ್ಳನ ಬಂಧನ. 7.60 ಲಕ್ಷ ಮೌಲ್ಯದ ಚಿನ್ನಾಭರಣ ವಶ

Raghavendra Adiga

ಬೆಂಗಳೂರು: ಮನೆಗಳಲ್ಲಿ ಕದ್ದ ಆಭರಣದ ವಸ್ತುಗಳನ್ನು ರಸ್ತೆಯ ಬದಿ ಮಾರಾಟ ಮಾಡುತ್ತಿದ್ದ ಮನೆಗಳ್ಳನೋರ್ವನನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ರಫಿ ಬಂಧಿತ ಆರೋಪಿ .

ಆರೋಪಿ ಸೈಯದ್ ರಫಿ ಕಳ್ಳತನ ಮಾಡಿದ ಬೆಳ್ಳಿ ಆಭರಣಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಅನುಮಾನದಿಂದ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವ ಕುರಿತು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 7.8 ಲಕ್ಷ ಮೌಲ್ಯದ 124 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತನ ವಿರುದ್ಧ ಮಾಗಡಿ ರಸ್ತೆ ಠಾಣೆಯಲ್ಲಿ 2 ಕೇಸ್, ಬ್ಯಾಡರಹಳ್ಳಿಯಲ್ಲಿ 3, ಬಸವೇಶ್ವರ ನಗರ ಠಾಣೆಯಲ್ಲಿ 1ಕೇಸ್ ದಾಖಲಾಗಿರುವುದು ಳಿದುಬಂದಿದೆ. ಹೆಚ್ಚಿನ ವಿಚಾರಣೆ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಪೋಲೀಸರು ಹೇಳಿದ್ದಾರೆ.

SCROLL FOR NEXT