ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ 
ರಾಜ್ಯ

ಟೋಕನ್ ವ್ಯವಸ್ಥೆಯಿಂದ ಬೆಡ್ ಬ್ಲಾಕಿಂಗ್ ಅಕ್ರಮ ತಡೆಯಬಹುದು: ತಜ್ಞರ ಅಭಿಪ್ರಾಯ

ಕೋವಿಡ್ ಸೋಂಕಿನಿಂದ ತಲೆದೋರಿರುವ ಹಾಸಿಗೆ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನಲ್ಲಿ ಕ್ಯೂ ವ್ಯವಸ್ಥೆ ಅಥವಾ ಟೋಕನ್ ವ್ಯವಸ್ಥೆಯನ್ನು ಶೀಘ್ರದಲ್ಲೇ   ಪರಿಚಯಿಸಲಾಗುವುದು.

ಬೆಂಗಳೂರು: ಕೋವಿಡ್ ಸೋಂಕಿನಿಂದ ತಲೆದೋರಿರುವ ಹಾಸಿಗೆ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನಲ್ಲಿ ಕ್ಯೂ ವ್ಯವಸ್ಥೆ ಅಥವಾ ಟೋಕನ್ ವ್ಯವಸ್ಥೆಯನ್ನು ಶೀಘ್ರದಲ್ಲೇ   ಪರಿಚಯಿಸಲಾಗುವುದು. ಇದು ಎಲ್ಲಾ ಭಾಗಗಳಿಂದಲೂ ದೊಡ್ಡ ಬೇಡಿಕೆಯಾಗಿದ್ದು, ಇದನ್ನು ರಾಜ್ಯ ಸರ್ಕಾರ ಕೂಡ ಅಂಗೀಕರಿಸಲಿದೆ,

ಕೋವಿಡ್ -19 ಗಿಂತ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ ಮತ್ತು ಐಸಿಯು ಬೆಡ್ ಮುಂತಾದವುಗಳನ್ನು ವ್ಯವಸ್ಥೆ ಮಾಡುವುದೇ ದೊಡ್ಡಸವಾಲಾಗಿದೆ.  ವ್ಯವಸ್ಥೆಯನ್ನು ನಿರ್ಣಯಿಸುವ ಕೆಲವು ಅಧಿಕಾರಿಗಳು ಮತ್ತು ಹಾಸಿಗೆ ಹಂಚಿಕೆ ವೈಪರೀತ್ಯಗಳನ್ನು ಪರಿಶೀಲಿಸುವ ಸಮಿತಿಯ ಭಾಗವಾಗಿರುವ ಸದಸ್ಯರು ಅದನ್ನು ಸರಿಪಡಿಸಲು ಅನೇಕ್ ಸಭೆ ನಡೆಸಿದ್ದಾರೆ,

ಮೊದಲು ಬೆಡ್ ಬುಕ್ ಮಾಡಿದ ವ್ಯಕ್ತಿ ಅದನ್ನು ಬಿಡುತ್ತಾನೆ, ನಂತರ ಕರೆ ಮಾಡುವ ಇನ್ನೊಬ್ಬ ವ್ಯಕ್ತಿಗೆ ಆ ಹಾಸಿಗೆ ಸಿಗುತ್ತದೆ. ಹೀಗಾಗಿ ಬೆಡ್ ಹಂಚಿಕೆಗೆ ಕ್ಯೂ ಸಿಸ್ಟಮ್ ಮಾಡುವ ಪೋರ್ಟಲ್ ಪರಿಚಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಯಂತ್ರಗಳನ್ನು ವೈಟ್ ಲಿಸ್ಟ್ ಮಾಡಲಾಗುವುದು, ಇದಕ್ಕೆ ಬೇರೆ ಐಡಿ, ಪಾಸ್ ವರ್ಡ್ ಯೂಸರ್ ನೇಮ್ ನೀಡಲಾಗುತ್ತದೆ, ಹೀಗೆ ಮಾಡಿದರೇ ನೋಂದಾಯಿತ  ಕಂಪ್ಯೂಟರ್ ಗಳಲ್ಲಿ ಮಾತ್ರ ಬೆಡ್ ಬುಕ್ ಮಾಡಬಹುದಾಗಿದೆ. ಬೇರೆಯವರ ಐಡಿ ಬಳಸಿ ಬೆಡ್ ಬುಕ್ ಮಾಡಲು ಸಾಧ್ಯವಿಲ್ಲ,

ನೋಂದಾಯಿತ ಸಂಖ್ಯೆಗೆ ಓಟಿಪಿ ಬಂದ ನಂತರ ವಷ್ಟೇ ಬೆಡ್ ಬುಕ್ ಆಗಲಿದೆ,  ವೈದ್ಯರು ಅಥವಾ ಬಳಕೆದಾರರ ಹೆಸರಲ್ಲಿ ಬುಕ್ ಆಗಬೇಕಿದೆ ಎಂದು ತಿಳಿಸಿದೆ.

ಇನ್ನೂ ಸಭೆಯಲ್ಲಿ ಡಿಫಾಲ್ಟ್ ಬೆಡ್ ಹಂಚಿಕೆ ಮತ್ತಪ ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿ 5ರಿಂದ 10 ಗಂಟೆಗಳ ಕಾಲ ಕಾಯಬೇಕಾಗಿದೆ, ಬಿಯು ಸಂಖ್ಯೆಯನ್ನು ರೋಗಿಗೆ ಕಳುಹಿಸಿ ಬೆಡ್ ಬೇಕೆ ಅಥವಾ ಬೇಡವೇ ಎಂಬುದನ್ನು ಕೇಳಬೇಕು. ರೋಗಿ ತನಗೆ ಬೆಡ್ ಅವಶ್ಯಕತೆ ಇದೆ ಅಥವಾ ಇಲ್ಲ ಎಂದು ಪ್ರಾಮಾಣಿಕವಾಗಿ ಹೇಳಬೇಕಾಗುತ್ತದೆ,  ಅವರಿಗೆ ಬೇಡವಾದರೇ ಅವಶ್ಯಕತೆ ಇರುವವರಿಗೆ ನೀಡಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT