ಆಕ್ಸಿಜನ್ ಬಸ್ ಸೇವೆ 
ರಾಜ್ಯ

ಉಚಿತ ಆಕ್ಸಿಜನ್ ಬಸ್: ಖಾಸಗಿ ಆಸ್ಪತ್ರೆಯೊಂದಿಗೆ ಬೆಂಗಳೂರು ಶಾಲೆ ಸಹಯೋಗ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ಸಾವಿರಾರು ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವಂತೆಯೇ ಇತ್ತ ಖಾಸಗಿ ಶಾಲೆಯೊಂದು ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ಸಾವಿರಾರು ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವಂತೆಯೇ ಇತ್ತ ಖಾಸಗಿ ಶಾಲೆಯೊಂದು ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆಕ್ಸಿಜನ್ ಬಸ್ ಸೇವೆಗೆ ಚಾಲನೆ ನೀಡಿದೆ.

ಬೆಂಗಳೂರಿನ ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್‌, ಮಹಾರಾಜ ಅಗ್ರಸೆನ್‌ ಆಸ್ಪತ್ರೆಯ ಸಹಯೋಗದೊಂದಿಗೆ ಐದು ಆಕ್ಸಿಜನ್ ಬಸ್‌ಗಳನ್ನು ಪ್ರಾರಂಭಿಸುತ್ತಿದ್ದು, ಇದು ಸೋಂಕಿತ ಜನರಿಗೆ ಉಚಿತ ಆಮ್ಲಜನಕವನ್ನು ಒದಗಿಸುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಲು ವಾಹನಗಳನ್ನು ನಗರದ ಆಸ್ಪತ್ರೆಗಳ ಹೊರಗೆ ಇಡಲಾಗುವುದು. ಪ್ರತಿ ಬಸ್‌ನಲ್ಲಿ ಒಂದು ಸಮಯದಲ್ಲಿ 12 ರೋಗಿಗಳಿಗೆ ಅವಕಾಶ ಕಲ್ಪಿಸಬಹುದು ಎನ್ನಲಾಗಿದೆ.

ಈ ಉಚಿತ ಆಕ್ಸಿಜನ್ ಸೇವೆಗಾಗಿ ರೋಗಿಗಳು ವೈದ್ಯರ ಪ್ರಿಸ್ಕ್ರಿಪ್ಷನ್ ಅಥವಾ ಆರ್‌ಟಿಪಿಸಿಆರ್ ವರದಿ ಮತ್ತು ರೋಗಿಯ ಆಧಾರ್ ಕಾರ್ಡ್‌ನ ನಕಲನ್ನು ಒದಗಿಸಬೇಕು. ರೋಗಿಯ ಅಟೆಂಡೆಂಟ್ ಅಥವಾ ಸಹಾಯಕರು ಈ ವಿವರಗಳನ್ನು ಒದಗಿಸಬೇಕೇ ಹೊರತು ರೋಗಿಯಲ್ಲ ಎಂದು ಮಹಾರಾಜ ಅಗ್ರಸೆನ್ ಆಸ್ಪತ್ರೆಯ  ಅಧ್ಯಕ್ಷ ಡಾ. ಸತೀಶ್ ಜೈನ್ ಹೇಳಿದರು. 

ಈ ವಿಶೇಷ ಸೇವಾ ಕಾರ್ಯಕ್ರಮವನ್ನು ಕಂದಾಯ ಸಚಿವ ಆರ್ ಅಶೋಕ್ ಅವರು ಗುರುವಾರ ಉದ್ಘಾಟಿಸಿದರು. ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್ ನ ಶಾಲಾ ಬಸ್ ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದ್ದು, ಆಂತರಿಕ ಸಲಕರಣೆಗಳ ವೆಚ್ಚವನ್ನು ಆಸ್ಪತ್ರೆ ನಿರ್ವಹಿಸಿಕೊಂಡಿದೆ. ಆಕ್ಸಿಜನ್ ಸಿಲಿಂಡರ್, ಫೇಸ್ ಮಾಸ್ಕ್ ಸಲಕರಣೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸಹಾಯವನ್ನು ಆಸ್ಪತ್ರೆಯಿಂದ ಒದಗಿಸಲಾಗುವುದು ಎಂದು ಗ್ರೀನ್‌ವುಡ್ ಶಾಲೆಯ ಅಧ್ಯಕ್ಷ ಬಿಜಯ್ ಅಗರ್ವಾಲ್ ಹೇಳಿದ್ದಾರೆ.

'ಮಹಾರಾಜ ಅಗ್ರಸೆನ್ ಆಸ್ಪತ್ರೆ ವೈದ್ಯ ಡಾ.ಸತೀಶ್ ಜೈನ್ ಅವರು ಈ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದಾಗ ನಾನಗೆ ಈ ಉಪಾಯ ವಿಶೇಷವೆನಿಸಿತು. ಈ ವಿಶೇಷ ಸೇವೆಯಿಂದ ಪ್ರತಿ ರೋಗಿಯು ಎರಡು ಗಂಟೆಗಳ ಕಾಲ ಆಮ್ಲಜನಕವನ್ನು ಬಳಸಲು ಸಾಧ್ಯವಾಗುತ್ತದೆ. ಒಂದು ಬಸ್ ನಲ್ಲಿ ಏಕಕಾಲಕ್ಕೆ 12 ಮಂದಿ  ರೋಗಿಗಳಿಗೆ ಆಕ್ಸಿಜನ್ ನೀಡಬಹುದು. ಮುಂದಿನ ಹತ್ತು ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, 10 ದಿನಗಳ ಬಳಿಕ ಬೇಡಿಕೆಯನ್ನಾಧರಿಸಿ ಮುಂದಿನ ನಿರ್ಧಾರ ಮಾಡುತ್ತೇವಲೆ ಎಂದು ಹೇಳಿದರು.

ಇನ್ನು ಈ ಉಚಿತ ಸೇವೆ ಬಳಸಿಕೊಳ್ಳಲು ಆಸ್ಪತ್ರೆಯ ನಿರ್ವಾಹಕರಿಗೆ: 09620304864 ಸಂಖ್ಯೆಗೆ ಕರೆ ಮಾಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT