ಸಾಂದರ್ಭಿಕ ಚಿತ್ರ 
ರಾಜ್ಯ

ಎರಡು ಲಸಿಕೆ ಪಡೆದಿದ್ದರೂ ಕೊರೋನಾ ಸೋಂಕಿನಿಂದ ಸಂಶೋಧಕ ಡಾ. ಎನ್.ಎಸ್. ಮೂರ್ತಿ ಸಾವು

ಕೋವಿಶೀಲ್ಡ್ ನ ಎರಡು ಲಸಿಕೆ ತೆಗೆದುಕೊಂಡ ನಂತರವೂ ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ.ಎನ್ ಎಸ್ ಮೂರ್ತಿ ಕೋವಿಡ್ ನಿಂದ ನಿಧನರಾಗಿದ್ದಾರೆ.

ಬೆಂಗಳೂರು: ಕೋವಿಶೀಲ್ಡ್ ನ ಎರಡು ಲಸಿಕೆ ತೆಗೆದುಕೊಂಡ ನಂತರವೂ ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ.ಎನ್ ಎಸ್ ಮೂರ್ತಿ ಕೋವಿಡ್ ನಿಂದ ನಿಧನರಾಗಿದ್ದಾರೆ.

ಜನವರಿ 21 ರಂದು ಮೊದಲ ಡೋಸ್ ಮತ್ತು ಅದಾದ ನಾಲ್ಕು ವಾರಗಳ ನಂತರ ಎರಡನೇ ಲಸಿಕೆ ಪಡೆದುಕೊಂಡಿದ್ದರು. ಏಪ್ರಿಲ್ 8 ರಂದು ಸೋಂಕು ಕಾಣಿಸಿಕೊಂಡಿತ್ತು. ಏಪ್ರಿಲ್ 15 ರಂದು ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರಂಭದಲ್ಲಿ ಅವರ ಶ್ವಾಸಕೋಶಗಳು ಸರಿಯಾಗಿದ್ದವು, ಆದರೆ ನಂತರ ಊರಿಯೂತ ಕಾಣಿಸಿಕೊಂಡಿತು, ಏಪ್ರಿಲ್ 25 ರಂದು ಆಕ್ಸಿಜನ್ ಮಟ್ಟ ಕಡಿಮೆಯಾದ್ದರಿಂದ ಅವರನ್ನು ಐಸಿಯು ಗೆ ಶಿಫ್ಟ್ ಮಾಡಲಾಯಿತು.

ಅವರನ್ನು ಸಾಮಾನ್ಯ ವೆಂಟಿಲೇಟರ್ ನಲ್ಲಿರಿಸಲಾಗಿತ್ತು, ಒಂದು ವಾರದ ಕಾಲ ಅವರು ಸರಿಯಾಗಿದ್ದರು. ಆದರೆ ಶ್ವಾಸಕೋಶಕ್ಕೆ ಎಫೆಕ್ಟ್ ಆದ ಕಾರಣ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು ಎಂದು  ಡಾ. ರೂಪಾರಾಣಿ ತಿಳಿಸಿದ್ದಾರೆ. 

ಅವರು ಒಂದು ವಾರದವರೆಗೆ ಇಂಟ್ಯೂಬೇಟ್ ಆಗಿದ್ದರು ಮತ್ತು ಮೇ 7 ರಂದು ಅವರು ವೈರಸ್‌ಗೆ ಬಲಿಯಾದರು. ಲಸಿಕೆಗಳು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತವೆ ಆದರೆ ಈ ಲಸಿಕೆಯ ಪರಿಣಾಮಕಾರಿತ್ವವು ಸುಮಾರು 70% ನಷ್ಟಿದೆ ಎಂದು ಡಾ. ರೂಪಾರಣಿ ಹೇಳಿದರು. ಅವರ ವಯಸ್ಸು ಮತ್ತು ಅಧಿಕ ರಕ್ತದೊತ್ತಡ ಇದಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು. ನಮ್ಮ ಕೋವಿಡ್- ಐಸಿಯುನಲ್ಲಿ ಲಸಿಕೆಯ ಮೊದಲ ಅಥವಾ ಎರಡೂ ಪ್ರಮಾಣವನ್ನು ತೆಗೆದುಕೊಂಡ ಬಹಳಷ್ಟು ಜನರಿದ್ದಾರೆ. ಇನಾಕ್ಯುಲೇಷನ್ ಹೊರತಾಗಿಯೂ ಪ್ರತಿಕಾಯದ ಪ್ರತಿಕ್ರಿಯೆ ಕಡಿಮೆ ಇರುವ ಸಾಧ್ಯತೆಯಿದೆ, ಎಂದು ಅವರು ಹೇಳಿದರು.

ವ್ಯಾಕ್ಸಿನೇಷನ್ ಹೊರತಾಗಿಯೂ ಅಪರೂಪದ ಸಂದರ್ಭಗಳಲ್ಲಿ ಜನರು ಸಾವನ್ನಪ್ಪುತ್ತಾರೆ, ಕೆಲವು ಜನರಲ್ಲಿ, ಅವರು ಯಾವ ಲಸಿಕೆ ತೆಗೆದುಕೊಂಡರೂ, ಇಮ್ಯುನೊಜೆನಿಕ್ ಪ್ರತಿಕ್ರಿಯೆ ಕಳಪೆಯಾಗಿರುವ ಕಾರಣ ಲಿಸಿಕೆ ಕೆಲಸ ಮಾಡುವುದಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ  ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT