ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್-19 ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಗಳಿಂದ 'ಆ್ಯಂಟಿಬಾಡಿ ಕಾಕ್ಟೇಲ್' ಥೆರಪಿ ಪ್ರಾರಂಭ!

ಹೋಂ ಐಸೊಲೇಷನ್ ನಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (ಆಂಟಿಬಾಡಿ ಕಾಕ್ಟೈಲ್) ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅದರ ಆರಂಭಕ್ಕೆ ಮುಂದಾಗಿವೆ. 

ಬೆಂಗಳೂರು: ಹೋಂ ಐಸೊಲೇಷನ್ ನಲ್ಲಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣ ಹೊಂದಿರುವವರು ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (ಆಂಟಿಬಾಡಿ ಕಾಕ್ಟೈಲ್) ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅದರ ಆರಂಭಕ್ಕೆ ಮುಂದಾಗಿವೆ. ಈ ಥೆರಪಿಯನ್ನು ದೆಹಲಿಯಲ್ಲಿ ಓರ್ವ ರೋಗಿಗೆ ಮಾತ್ರ ಇದುವರೆಗೆ ನೀಡಲಾಗಿತ್ತಷ್ಟೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಥೆರಪಿಯನ್ನು ಆರಂಭಿಸಲಿದ್ದು, ಇಲ್ಲಿ ಎರಡು ಔಷಧಿಗಳಾದ ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ (ಪುಡಿಯನ್ನು ದ್ರಾವಣವಾಗಿ ತಲಾ 10 ಎಂಎಲ್)ನ್ನು ಮಿಶ್ರ ಮಾಡಿ ಸೀಸೆ ರೂಪದಲ್ಲಿ ಲಭ್ಯವಾಗುವಂತೆ ತಯಾರು ಮಾಡಲಾಗುತ್ತದೆ. ರೋಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕೆಂದೇನಿಲ್ಲ, ಹಾಗೆಯೇ ಥೆರಪಿ ಪಡೆದುಕೊಳ್ಳಬಹುದು.

ಎಚ್‌ಸಿಕ್ಯು, ಫಾವಿಪಿರವಿರ್ ಮತ್ತು ಐವರ್ಮೆಕ್ಟಿನ್ ಗಿಂತ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವ ಚಿಕಿತ್ಸೆಯು ಸ್ಪೈಕ್ ಪ್ರೋಟೀನ್‌ಗೆ ವಿರುದ್ಧವಾಗಿ ವರ್ತಿಸುವ ಮೂಲಕ ಮತ್ತು ವೈರಸ್ ಶ್ವಾಸಕೋಶಕ್ಕೆ ಸೇರದಂತೆ ನೋಡಿಕೊಳ್ಳುತ್ತದೆ. ಸಾರ್ಸ್ ಕೋವಿಡ್-2 ವಿರುದ್ಧ ಪ್ರತಿರೋಧವನ್ನು ಉಂಟುಮಾಡುತ್ತದೆ. ರೂಪಾಂತರಿತ ವೈರಸ್ ದೇಹಕ್ಕೆ ದಾಳಿ ಮಾಡದಂತೆ ಇದು ತಡೆಯುತ್ತದೆ. ನಾವು ಇದರ ಬಳಕೆಗೆ ನಿಯಮ ಅನುಸರಿಸುತ್ತಿದ್ದು ಹೀಗಾಗಿ ಇದು ದುರುಪಯೋಗವಾಗುವ ಸಾಧ್ಯತೆಯಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ, ಶ್ವಾಸಕೋಶ ಕಸಿ ವೈದ್ಯ ಡಾ ಸತ್ಯನಾರಾಯಣ ಮೈಸೂರು ಹೇಳುತ್ತಾರೆ.

ಔಷಧಿಯನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಬಳಸಬಹುದು, ವಿಶೇಷವಾಗಿ ತೀವ್ರವಾದ ಕಾಯಿಲೆಗೆ ಹೆಚ್ಚಿನ ಅಪಾಯದಲ್ಲಿರುವ ಜನರಲ್ಲಿ. ಇದು ಪರಿಣಾಮ ಬೀರಬಹುದು. ಆದರೆ ದುಬಾರಿಯಾಗಿದೆ. ಇತರ ಸಂಯೋಜನೆಗಳು ಇದ್ದು, ಭಾರತದಲ್ಲಿ ಸದ್ಯಕ್ಕೆ ಬಳಕೆಯಲ್ಲಿಲ್ಲ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ತೀವ್ರ ನಿಗಾ ಘಟಕದ ಹಿರಿಯ ವೈದ್ಯ ಡಾ ಪ್ರಕಾಶ್ ದೊರೈಸ್ವಾಮಿ ಹೇಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT