ವಿಭಾಗೀಯ ರೈಲ್ವೆ ಆಸ್ಪತ್ರೆ 
ರಾಜ್ಯ

ಹಳೆಯ ನಿಯಮ ತಿದ್ದುಪಡಿ: ರೈಲ್ವೆ ನೌಕರರ ಎಲ್ಲಾ ದತ್ತು ಮಕ್ಕಳು ಈಗ ವೈದ್ಯಕೀಯ ಆರೈಕೆ ಪಡೆಯಬಹುದು

ಭಾರತೀಯ ರೈಲ್ವೆ ನೌಕರರು ದತ್ತು ಪಡೆದಿರುವ ಎಲ್ಲಾ ಮಕ್ಕಳಿಗೂ ಇದೀಗ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಲಭ್ಯವಿದೆ. 21 ವರ್ಷದ ಹಳೆಯ ನಿಯಮ ತಿದ್ದುಪಡಿ ಮಾಡಿ ಇದೇ ತಿಂಗಳ 25 ರಂದು ರೈಲ್ವೆ ಮಂಡಳಿ ಈ ಆದೇಶವನ್ನು ಹೊರಡಿಸಿದೆ.

ಬೆಂಗಳೂರು: ಭಾರತೀಯ ರೈಲ್ವೆ ನೌಕರರು ದತ್ತು ಪಡೆದಿರುವ ಎಲ್ಲಾ ಮಕ್ಕಳಿಗೂ ಇದೀಗ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಲಭ್ಯವಿದೆ. 21 ವರ್ಷದ ಹಳೆಯ ನಿಯಮ ತಿದ್ದುಪಡಿ ಮಾಡಿ ಇದೇ ತಿಂಗಳ 25 ರಂದು ರೈಲ್ವೆ ಮಂಡಳಿ ಈ ಆದೇಶವನ್ನು ಹೊರಡಿಸಿದೆ. ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಇದನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬೆಂಗಳೂರು ರೈಲ್ವೆ ವಿಭಾಗದ ಎಂಜಿನಿಯರಿಂಗ್ ಇಲಾಖೆಯ ಕಚೇರಿ ಅಧೀಕ್ಷಕಿಯಾಗಿ ಕೆಲಸ ಮಾಡುವ ವೀಣಾ ನಾಯಕ್,
ಒಂದು ಬಾಲಕ ಹಾಗೂ ಬಾಲಕಿಯನ್ನು ದತ್ತು ಪಡೆದಿದ್ದರು. ಅವರಿಬ್ಬರು ಇದೀಗ ಕ್ರಮವಾಗಿ 14 ಮತ್ತು 13 ವಯಸ್ಸಿನವರಾಗಿದ್ದಾರೆ. 
ಅವರು ತನ್ನ ಮಕ್ಕಳ ಪರವಾಗಿ ಜೂನ್ 2020ರಲ್ಲಿ ಈ ವಿಚಾರವನ್ನು ಕೈಗೆತ್ತಿಕೊಂಡರು. ವರ್ಷದ ನಂತರ ಅದು ಫಲ ನೀಡಿದೆ.

ಪ್ರಸ್ತುತ ಹಾಗೂ ಹಿಂದಿನ ನೌಕರರ ಎಲ್ಲಾ ಕುಟುಂಬ ಸದಸ್ಯರಿಗೆ ನೀಡಲಾಗಿರುವ ವಿಶಿಷ್ಟ ವೈದ್ಯಕೀಯ ಗುರುತಿನ ಕಾರ್ಡ್ ನ್ನು ಪಡೆಯಲು ಸಾಧ್ಯವಾಗದಿದ್ದಾಗ ನಾಯಕ್, ತಮ್ಮ ಗಮನಕ್ಕೆ ತಂದಿದ್ದರು. ದೇಶದಲ್ಲಿನ ಯಾವುದೇ ರೈಲ್ವೆ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಲಭ್ಯವಿರುವುದಾಗಿ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ಸಮನ್ವಯ, ಕೆ ಆಸಿಫ್ ಹಫೀಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. 

ನಿಯಮಗಳ ಪ್ರಕಾರ, ರೈಲ್ವೆ ಆಸ್ಪತ್ರೆ, ಅದರಲ್ಲಿ ಸಂಯೋಜನೆಗೊಂಡ ಖಾಸಗಿ ಆಸ್ಪತ್ರೆಗಳಲ್ಲಿ ದತ್ತು ಪಡೆದ ಒಂದು ಮಗುವಿಗೆ ಮಾತ್ರ
ಉಚಿತ ದರದಲ್ಲಿ ಸೌಲಭ್ಯ ದೊರೆಯಲಿದೆ ಎಂದು ಅವರು ತಿಳಿಸಿದರು.

ನೈರುತ್ಯ ರೈಲ್ವೆಯಾದ್ಯಂತ ಸುಮಾರು 37 ಸಾವಿರ ಕುಟುಂಬಗಳಿಗೆ ವೈದ್ಯಕೀಯ ಸೌಲಭ್ಯವಿದೆ. ಹೆಚ್ಚಿನ ಮಕ್ಕಳನ್ನು ದತ್ತು ಪಡೆಯಲು ಹಿಂಜರಿಯುವ ರೈಲ್ವೆ ನೌಕರರಿಗೆ ಇದೊಂದು ಪ್ರೇರಣೆಯಾಗಲಿದೆ. ವೀಣಾ ನಾಯಕ್ ಅವರು ಈ ವಿಷಯವನ್ನು ಕೈಗೆತ್ತಿಕೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ಹಫೀಜ್ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT