ರಾಜ್ಯ

ಪುನೀತ್ ರಾಜ್ ಕುಮಾರ್ ನಿಧನದಿಂದ ಖಿನ್ನತೆ: ಅಪ್ಪು ಕಟ್ಟಾ ಅಭಿಮಾನಿ ಮಯೂರ ಆತ್ಮಹತ್ಯೆ

Sumana Upadhyaya

ಹಾಸನ: ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneet Rajkumar) ಹಠಾತ್ತನೆ ಅಗಲಿ ಒಂದು ತಿಂಗಳಾಗುತ್ತಾ ಬಂದಿದ್ದು, ವಾಸ್ತವ ಸ್ಥಿತಿಯನ್ನು ಇನ್ನೂ ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ನಿಧನಕ್ಕೆ ಇಡೀ ಕರುನಾಡು ಶೋಕ ವ್ಯಕ್ತಪಡಿಸಿದೆ.

ನಿನ್ನೆ ಸಂಜೆ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ ಮಯೂರ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹಾಸನದ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ರಾಜ್ ಕುಮಾರ್ ಕುಟುಂಬಕ್ಕೆ ಬಹಳ ಆಪ್ತರಾಗಿರುವ ನಾಗರಾಜ್ ಅವರ ಪುತ್ರ. ಅವರಿಗೆ 34 ವರ್ಷ ವಯಸ್ಸಾಗಿತ್ತು. 

ಡಾ ರಾಜ್ ಕುಮಾರ್ ಅವರ ಜನಪ್ರಿಯ ಸಿನಿಮಾ ಮಯೂರ ಹೆಸರನ್ನು ತಮ್ಮ ಪುತ್ರನಿಗೆ ಇಟ್ಟಿದ್ದರು ನಾಗರಾಜ್. ಪುನೀತ್ ರಾಜ್ ಕುಮಾರ್ ಅವರ ನಿಧನ ಬಳಿಕ ಖಿನ್ನತೆಗೆ ಒಳಗಾಗಿದ್ದ ಮಯೂರ ಇಂದು ತಮ್ಮ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. 

SCROLL FOR NEXT