ಜಿಮ್ (ಸಂಗ್ರಹ ಚಿತ್ರ) 
ರಾಜ್ಯ

ಜಿಮ್ ತರಬೇತುದಾರರಿಗೆ ಮಣಿಪಾಲ ಆಸ್ಪತ್ರೆಯಿಂದ ಸಿಪಿಆರ್ ಕಾರ್ಯಾಗಾರ

ಯುವಕರಲ್ಲಿ ಹೃದಯಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆ ಜಿಮ್ ತರಬೇತುದಾರರಿಗೆ ಸಿಪಿಆರ್ ಕಾರ್ಯಗಾರವನ್ನು ಆಯೋಜನೆ ಮಾಡಿದೆ.

ಬೆಂಗಳೂರು: ಯುವಕರಲ್ಲಿ ಹೃದಯಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆ ಜಿಮ್ ತರಬೇತುದಾರರಿಗೆ ಸಿಪಿಆರ್ ಕಾರ್ಯಗಾರವನ್ನು ಆಯೋಜನೆ ಮಾಡಿದೆ.

ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (ಸಿಪಿಆರ್) ತುರ್ತು ಪರಿಸ್ಥಿತಿಗಳಲ್ಲಿ, ಹೃದಯ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಹೃದಯ ಬಡಿತ ನಿಂತಲ್ಲಿ ಇದು  ಜೀವ ಉಳಿಸುವ ಪ್ರಥಮ ಚಿಕಿತ್ಸೆಯಾಗಿದೆ. 

"ಹೃದಯಸ್ತಂಭನ ಉಂಟಾದಾಗ ಆ ವ್ಯಕ್ತಿಯ ಜೀವ ಉಳಿಸುವುದು ಸಾಧ್ಯವಾಗುದು ಪಕ್ಕದಲ್ಲಿರುವವರಿಗೆ ಮಾತ್ರ, ಆದ್ದರಿಂದ ಸಾಧ್ಯವಾದಷ್ಟೂ ಮಂದಿಗೆ ಈ ಮೂಲಭೂತ ಲೈಫ್ ಸಪೋರ್ಟ್ ತರಬೇತಿ ನೀಡಬೇಕು ಎನ್ನುತ್ತಾರೆ ವರ್ತೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ತಜ್ಞವೈದ್ಯ ಡಾ. ನವೀನ್ ಚಂದ್ರ. 

ಡಾ.ನವೀನ್ ಚಂದ್ರ ಅವರು ಡಾ. ರಾಮ್ ಕುಮಾರ್ ಜಯಪ್ರಕಾಶ್, ಕನ್ಸಲ್ಟೆಂಟ್, ಕ್ರಿಟಿಕಲ್ ಕೇರ್ ಇವರೊಂದಿಗೆ ತರಬೇತಿ ಕಾರ್ಯಗಾರವನ್ನು ನಡೆಸಲಿದ್ದಾರೆ. 

ತೀವ್ರ ವರ್ಕ್ ಔಟ್ ನಂತದಲ್ಲಿ ಪುನೀತ್ ರಾಜ್ ಕುಮಾರ್ ಗೆ ಹೃದಯಸ್ತಂಭನವಾಗಿತ್ತು ಎಂದು ಹೇಳಲಾಗುತ್ತಿತ್ತು. ಈ ಘಟನೆಯ ಬಳಿಕ ಜಿಮ್ ಟ್ರೈನರ್ ಗಳಿಗೆ ಸಿಪಿಆರ್ ಜ್ಞಾನದ ಅಗತ್ಯವಿರಬೇಕು ಹಾಗೂ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಬಳಕೆ ತಿಳಿದಿರಬೇಕೆಂಬ ಜಾಗೃತಿ ಮೂಡಲಾರಂಭಿಸಿದೆ.

ಪಶ್ಚಿಮ ದೇಶಗಳಲ್ಲಿ ಬಹುತೇಕ ಮಂದಿಗೆ ಸಿಪಿಆರ್ ಹೇಗೆ ನೀಡಬೇಕೆಂಬ ಬಗ್ಗೆ ಅರಿವಿದ್ದು ಹಲವಾರು ಮಂದಿ ಜೀವ ಉಳಿಸುತ್ತಾರೆ ಎಂದು ಡಾ.ನವೀನ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT