ಸಂಗ್ರಹ ಚಿತ್ರ 
ರಾಜ್ಯ

ಮಳೆಯ ಅಬ್ಬರಕ್ಕೆ ನಲುಗಿದ ಬೆಂಗಳೂರು: ಐಡಿಯಲ್ ಹೋಮ್ಸ್ ಬಡಾವಣೆಗೆ ನುಗ್ಗಿದ ವೃಷಭಾವತಿ ನೀರು, ಜನತೆಯ ಪರದಾಟ

ಈ ವರ್ಷ ಕಂಡ 2ನೆಯ ದಾಖಲೆಯ ಮಳೆಯ ಆಘಾತಕ್ಕೆ ನಗರದ ಜನತೆ ತತ್ತರಿಸಿದ್ದಾರೆ. ಸುಮಾರು 3 ತಾಸು ಸುರಿದ ಭಾರೀ ಮಳೆಯು ಪ್ರವಾಹ ಸದೃಶ್ಯ ವಾತಾವರಣ ನಿರ್ಮಿಸಿದ್ದು, ಪರಿಣಾಮ ಭಾನುವಾರ ರಾತ್ರಿ ಏಕಾಏಕಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ಬೆಂಗಳೂರು: ಈ ವರ್ಷ ಕಂಡ 2ನೆಯ ದಾಖಲೆಯ ಮಳೆಯ ಆಘಾತಕ್ಕೆ ನಗರದ ಜನತೆ ತತ್ತರಿಸಿದ್ದಾರೆ. ಸುಮಾರು 3 ತಾಸು ಸುರಿದ ಭಾರೀ ಮಳೆಯು ಪ್ರವಾಹ ಸದೃಶ್ಯ ವಾತಾವರಣ ನಿರ್ಮಿಸಿದ್ದು, ಪರಿಣಾಮ ಭಾನುವಾರ ರಾತ್ರಿ ಏಕಾಏಕಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. 

ರಾಜರಾಜೇಶ್ವರಿನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಾಜಕಾಲುವೆ (ವೃಷಭಾವತಿ ನದಿ) ಉಕ್ಕಿ ಹರಿದು ಭಾರೀ ಪ್ರಮಾಣದ ನೀರು ಐಡಿಯಲ್ ಹೋಮ್ಸ್ ಬಡಲಾವಣಗೆ ನುಗ್ಗಿದ್ದು, ಜನರು ಪರದಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. 

ತಡೆಗೋಡೆಯಿದ್ದರೂ ಕೂಡ ವೃಷಭಾವತಿ ನದಿ ನೀರು ಮನೆಗಳಿಗೆ ನುಗ್ಗಿತ್ತು. ಮನೆಯಲ್ಲಿ ನಾಲ್ಕು ಅಡಿ ನೀರು ತುಂಬಿತ್ತು. ಎಲ್ಲಿಗೆ ಹೋಗಬೇಕೆಂಬುದು ನಮಗೆ ತಿಳಿಯಲಿಲ್ಲ ಎಂದು ಐಡಿಯಲ್ ಹೋಮ್ಸ್ ಲೇಔಟ್ ನಿವಾಸಿ ಸತ್ಯನಾರಾಯಣ್ ಬಿಎ ಅವರು ಹೇಳಿದ್ದಾರೆ. 

ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಪಂಪ್ ಸೆಟ್ ಗಳನ್ನು ತಂದಿದ್ದರು. ಆದರೆ, ಅದರಿಂದ ಯಾವುದೇ ಪ್ರಯೋಜನಗಳಾಗಲಿಲ್ಲ. ಅಧಿಕಾರಿಗಳು ಬರುವುದಕ್ಕೂ ಮುನ್ನವೇ ನಾವು ಬಕೆಟ್ ಗಳ ಮೂಲಕ ನೀರನ್ನು ಹೊರ ಹಾಕಿದ್ದೆವು. ನೀರು ತೆಗೆಯಲು ಖಾಸಗಿ ಕಂಪನಿಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಕಾರು ಹಾಗೂ ದ್ವಿಚಕ್ರ ವಾಹನಗಳು ನಾಶಗೊಂಡಿವೆ. ಟೋಯಿಂಗ್ ವಾಹನಗಳ ಮೂಲಕ ಮೆಕಾನಿಕ್ ಗಳ ಬಳಿ ವಾಹನಗಳ ರಿಪೇರಿಗೆ ಮೆಕಾನಿಕ್ ಗಳ ತೆಗೆದುಕೊಂಡು ಹೋಗುತ್ತಿದ್ದೇವೆಂದು ತಿಳಿಸಿದ್ದಾರೆ. 

ರಾಜರಾಜೇಶ್ವರಿ ನಗರ ನಿವಾಸಿಯೊಬ್ಬರು ಮಾತನಾಡಿ, ಮಳೆ ಬಂದಾಗಲೆಲ್ಲಾ ಇಲ್ಲಿ ನೀರು ತುಂಬಿಕೊಳ್ಳುತ್ತದೆ. ಮೊದಲೆಲ್ಲಾ ಮುಖ್ಯ ರಸ್ತೆಗಳಲ್ಲಿ ಮಾತ್ರ ತುಂಬುತ್ತಿತ್ತು. ಆದರೆ, ಇಡೀ ಬಡಾವಣೆಯಲ್ಲಿ ತುಂಬಿಕೊಳ್ಳುತ್ತಿದೆ. ಭಾನುವಾರ ರಾತ್ರಿ ಮಳೆ ಆರಂಭವಾದಾಗ ರಾಜಕಾಲುವೆ ಸಂಪರ್ಕಿಸುವ ಮುಖ್ಯ ಗೋಡೆ ಕುಸಿದುಬಿದ್ದಿತ್ತು. ಬಳಿಕ ರಾಜಕಾಲುವೆಯ ನೀರು ಹರಿದು ಬಂದಿತ್ತು ಎಂದು ಹೇಳಿದ್ದಾರೆ. 

ಅಡುಗೆ ಮನೆಗೂ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳು, ಧಾನ್ಯಗಳು ನಾಶಗೊಂಡಿವೆ ಎಂದು ಮತ್ತೊಬ್ಬ ನಿವಾಸಿ ನಿರ್ಮಲಾ ಅವರು ಹೇಳಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಇಂತಹ ಸ್ಥಲದಲ್ಲಿ ಲೇ ಔಟ್ ನಿರ್ಮಾಣಕ್ಕೆ ಸರ್ಕಾರ ಯಾವ ಕಾರಣಕ್ಕೆ ಅನುಮತಿ ನೀಡಿತು. ಮಳೆ ಕಾಲ ಬಂದಾಗ ನಮ್ಮ ಮನೆಗಳಲ್ಲಿ ಇರಲು ನಮಗೆ ಭಯವಾಗುತ್ತಿದೆ ಎಂದು ತಿಳಿಸಿದ್ದಾರೆ. 

ಮುಖ್ಯ ಚಂಡಮಾರುತದ ವಾಹಕವನ್ನು ಸಂಪರ್ಕಿಸುವ ಚರಂಡಿಯ ಗೋಡೆ ಕುಸಿದು ನೀರು ತುಂಬಿ ಹರಿಯಿತು "ಎಂದು ಐಡಿಯಲ್ ಹೋಮ್ಸ್ ಲೇಔಟ್‌ನ ಇನ್ನೊಬ್ಬ ನಿವಾಸಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT