ರಾಜ್ಯ

ಉಡುಪಿ: ಕಂದಕಕ್ಕೆ ಉರುಳಿ ಬಿದ್ದ ಟ್ರಕ್, ನಾಲ್ವರು ಸಾವು 

Sumana Upadhyaya

ಉಡುಪಿ: ಜಿಲ್ಲೆಯ ಆಗುಂಬೆ ಘಾಟಿಯ 5ನೇ ಕ್ರಾಸ್ ನಲ್ಲಿ ಟ್ರಕ್ ಕಂದಕಕ್ಕೆ ಉರುಳಿಬಿದ್ದು ನಾಲ್ವರು ಮೃತಪಟ್ಟು ಇತರ ಐವರಿಗೆ ಗಾಯಗೊಂಡಿರುವ ಘಟನೆ ನಡೆದಿದೆ. 

ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು ಮೃತರನ್ನು ಯಜ್ಞೇಶ್(24 ವ) ಟ್ರಕ್ ನ ಚಾಲಕ, 21 ವರ್ಷದ ಮಂಜುನಾಥ್, 21 ವರ್ಷದ ಮಣಿ, 21 ವರ್ಷದ ಶ್ರೀಜಿತ್ ಎಂದು ಗುರುತಿಸಲಾಗಿದ್ದು ಎಲ್ಲರೂ ಕಾರ್ಕಳ ಮೂಲದವರಾಗಿದ್ದಾರೆ. ಶಿವಮೊಗ್ಗದಿಂದ ಲಾರಿ ಖಾಲಿಯಾಗಿ ಹಿಂತಿರುಗುತ್ತಿತ್ತು. 

ಹೆಬ್ರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಶರೀರಗಳನ್ನು ಇಡಲಾಗಿದ್ದು, ಗಾಯಗೊಂಡವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರ ಪತ್ತೆಯಾಗಿಲ್ಲ.

SCROLL FOR NEXT