ರಾಜ್ಯ

ಮಂಗಳೂರು: ಕಲ್ಲಿನ ಕ್ವಾರಿಯಲ್ಲಿ ಬಿದ್ದು 11 ವರ್ಷದ ಬಾಲಕ ಸಾವು

Lingaraj Badiger

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಾಸ್ಬಾ ಗ್ರಾಮದ 11 ವರ್ಷದ ಬಾಲಕ ಕಲ್ಲಿನ ಕ್ವಾರಿಗೆ ಜಾರಿ ಬಿದ್ದು, ನೀರು ಪಾಲಾಗಿರುವ ದಾರುಣ ಘಟನೆ ಶನಿವಾರ ನಡೆದಿದೆ.

ಮೃತರ ಬಾಲಕನನ್ನು ಮೊಹಮ್ಮದ್ ಮೊಹದ್ ಎಂದು ಗುರುತಿಸಲಾಗಿದೆ.

ಮೊಹದ್ ತನ್ನ ಸ್ನೇಹಿತರ ಜೊತೆಯಲ್ಲಿ ಕ್ವಾರಿ ಬಳಿ ಆಟವಾಡಲು ಹೋಗಿದ್ದನು. ಈ ವೇಳೆ ಕಾಲು ಜಾರಿ ಕ್ವಾರಿಗೆ ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಬಾಲಕನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ದಾರಿಯಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಏತನ್ಮಧ್ಯೆ, ಬಂಟ್ವಾಲ್ ಪೋಲಿಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ. ಕ್ವಾರಿ ಕೆಲಸ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದೆ.

SCROLL FOR NEXT