ಸಾಂಕೇತಿಕ ಚಿತ್ರ 
ರಾಜ್ಯ

ಬಿಬಿಎಂಪಿಯಿಂದ ಈ ವರ್ಷ ಶಾಲೆ-ಕಾಲೇಜುಗಳಿಗೆ ಸ್ವೆಟರ್ ಪೂರೈಕೆ ಇಲ್ಲ

ಬಿಬಿಎಂಪಿಯ ಶೈಕ್ಷಣಿಕ ವಿಭಾಗ ಈ ವರ್ಷ ಶಾಲಾ-ಕಾಲೇಜುಗಳಿಗೆ ಸ್ವೆಟರ್ ಪೂರೈಕೆ ಮಾಡದಿರಲು ನಿರ್ಧರಿಸಿದೆ. 

ಬೆಂಗಳೂರು: ಬಿಬಿಎಂಪಿಯ ಶೈಕ್ಷಣಿಕ ವಿಭಾಗ ಈ ವರ್ಷ ಶಾಲಾ-ಕಾಲೇಜುಗಳಿಗೆ ಸ್ವೆಟರ್ ಪೂರೈಕೆ ಮಾಡದಿರಲು ನಿರ್ಧರಿಸಿದೆ. 

ಕಳೆದ ವರ್ಷ ಸ್ವೆಟರ್ ಗಳನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಸ್ವೆಟರ್ ಗಳನ್ನು ಪೂರೈಸುವಂತೆ ಶೈಕ್ಷಣಿಕ ಸಂಸ್ಥೆಗಳ ಮ್ಯಾನೇಜ್ಮೆಂಟ್ ಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. 

ಬಿಬಿಎಂಪಿಯಲ್ಲಿ ಆರ್ಥಿಕ ಅಕ್ರಮಗಳ ಆರೋಪ, ಬಿಬಿಎಂಪಿ ಸಿಬ್ಬಂದಿಗಳು, ಮಧ್ಯವರ್ತಿಗಳು, ಗುತ್ತಿಗೆದಾರರು ಸ್ವೆಟರ್ ಪೂರೈಕೆ ವಿಷಯದಲ್ಲಿ ವಂಚನೆ ಎಸಗಿರುವ ಆರೋಪ ಕೇಳಿಬಂದಿರುವ ನಡುವೆಯೇ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದೆ. 

ಈ ವರ್ಷದ 9 ನೇ ತರಗತಿಯಿಂದ ಪದವಿವರೆಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲು ಬಿಬಿಎಂಪಿ ಅನುಮತಿಯನ್ನು ಕೇಳಿದೆ. 

ಮಾರ್ಚ್ 2020 ರಲ್ಲಿ ಕೌನ್ಸಿಲ್ ನಲ್ಲಿ ತೆಗೆದುಕೊಂಡಿದ್ದ ನಿರ್ಧಾರದ ಆಧಾರದಲ್ಲಿ ಬಿಬಿಎಂಪಿ 1-12 ನೇ ತರಗತಿ ವರೆಗಿನ 14,000 ಮಕ್ಕಳಿಗೆ ಸ್ವೆಟರ್ ಗಳನ್ನು ನೀಡಬೇಕಿತ್ತು. ಆದರೆ 2020 ರ ಏಪ್ರಿಲ್ ನಲ್ಲಿ ಲಾಕ್ ಡೌನ್ ಘೋಷಣೆಯಾದ ಪರಿಣಾಮ ಸ್ವೆಟರ್ ಗಳ ವಿತರಣೆ ಮಾಡಲಾಗಿರಲಿಲ್ಲ.  ಆ ನಂತರ 1-9 ನೇ ತರಗತಿ ವಿದ್ಯಾರ್ಥಿಗಳಿಗೆ ರೇಷನ್ ಕಿಟ್ ಗಳೊಂದಿಗೆ ಸ್ವೆಟರ್ ಗಳನ್ನು ವಿತರಣೆ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು. 9-12 ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 2020 ರಲ್ಲಿ ಶಾಲೆಗಳು ಪ್ರಾರಂಭವಾದಾಗ ವಿತರಣೆ ಮಾಡಲಾಗಿತ್ತು. ಇದಕ್ಕಾಗಿ ಬಿಬಿಎಂಪಿ ಹ್ಯಾಂಡ್ ಲೂಮ್ ಇಲಾಖೆಗೆ ಸ್ವೆಟರ್ ಗಳಿಗಾಗಿ ಗುತ್ತಿಗೆ ನೀಡಿತ್ತು. 

ಕಳೆದ ವರ್ಷ ಶೇ.50-60 ರಷ್ಟು ಸ್ವೆಟರ್ ಗಳನ್ನು ನೀಡಿದ್ದೇವೆ, ಯಾರಿಗೆ ಸಿಕ್ಕಿಲ್ಲ ಅವರು ಈಗ ಬಂದು ಪಡೆದುಕೊಳ್ಳಬಹುದಾಗಿದೆ. ಈ ವರ್ಷ ಹೊಸ ಸ್ವೆಟರ್ ಗಳನ್ನು ನೀಡಲಾಗುವುದಿಲ್ಲ ಎಂದು ಈ ವರ್ಷ ಸಂಪೂರ್ಣ ಸಮವಸ್ತ್ರ ನೀಡಲು ಉದ್ದೇಶಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT