ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ರಾಜ್ಯ

ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸದ್ಯಕ್ಕೆ ಏರಿಕೆ ಇಲ್ಲ

ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸದ್ಯಕ್ಕೆ ಏರಿಕೆ ಇಲ್ಲ ಎಂದು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಕ ಪ್ರಾಧಿಕಾರ (ಎಇಆರ್ ಎ) ತನ್ನ ಆದೇಶದಲ್ಲಿ ತಿಳಿಸಿದೆ. 

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಸದ್ಯಕ್ಕೆ ಏರಿಕೆ ಇಲ್ಲ ಎಂದು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಕ ಪ್ರಾಧಿಕಾರ (ಎಇಆರ್ ಎ) ತನ್ನ ಆದೇಶದಲ್ಲಿ ತಿಳಿಸಿದೆ. 

ಮುಂದಿನ ವರ್ಷದ ಮಾರ್ಚ್ ವರೆಗೂ ಬಳಕೆದಾರರ ಶುಲ್ಕವನ್ನು ಯಥಾ ಸ್ಥಿತಿ ಕಾಯ್ದುಕೊಳ್ಳಲು ಎಇಆರ್ ಎ ಹೇಳಿದೆ. ಆದರೆ 2022 ರ ಏಪ್ರಿಲ್ 1 ರಿಂದ ಹೆಚ್ಚಿನ ಪ್ರಮಾಣದಲ್ಲಿ ವಿಮಾನ ನಿಲ್ದಾಣದ ಶುಲ್ಕ ಹೆಚ್ಚಿಸಲು ಅನುಮತಿ ನೀಡಿದೆ.

ಈಗ ದೇಶೀಯ, ಹೊರ ತೆರಳುವ ವಿಮಾನಗಳಿಗೆ ಏರ್ ಪೋರ್ಟ್ ಬಳಕೆದಾರರ ಶುಲ್ಕ 184 ರೂಪಾಯಿಗಳಾಗಿದ್ದು, ಹೊರ ಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ 839 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದು 2021-2026 ರ ನಡುವಿನ ಮೂರನೇ ನಂತ್ರಣ ಅವಧಿ ಪ್ರಾರಂಭವಾದ ನಂತರವೂ ಅಕ್ಟೋಬರ್ 1 ವರೆಗೆ ಈ ದರವೇ ಮುಂದುವರೆಯಲಿದೆ.

ಮುಂದಿನ ಆರ್ಥಿಕ ವರ್ಷದಿಂದ ಈ ಶುಲ್ಕದ ದರ ದೇಶೀಯ, ಹೊರಹೋಗುವ ವಿಮಾನಗಳಿಗೆ 350 ರೂಪಾಯಿ, ಹೊರಹೋಗುವ ಅಂತಾರಾಷ್ಟ್ರೀಯ ವಿಮಾನಗಳಿಗೆ 1,200 ರೂಪಾಯಿಗಳನ್ನು ನಿಗದಿಪಡಿಸಗುತ್ತದೆ. ಹೊಸ ಶುಲ್ಕ ದರ ಮಾರ್ಚ್ 2023 ಕ್ಕೆ ಜಾರಿಯಲ್ಲಿರಲಿದೆ.

ಜುಲೈ ನ ಮೊದಲ ವಾರದಲ್ಲಿ ಎಇಆರ್ ಎ ಅ.1 ರಿಂದ ಶುಲ್ಕ ಹೆಚ್ಚುಗೊಳಿಸುವುದನ್ನು ಪ್ರಸ್ತಾವಿಸಿತ್ತು. ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಶುಲ್ಕ ಏರಿಕೆಯಲ್ಲಿ ವಿಳಂಬ ಉಂಟಾಗಿದೆ.

ಅಕ್ಟೊಬರ್ 2021 ರಿಂದ 2023 ರ ಮಾರ್ಚ್ ವರೆಗೂ ಯುಡಿಎಫ್ ಶುಲ್ಕವನ್ನು 450 ರೂಪಾಯಿಗಳಿಗೆ ಏರಿಕೆ ಮಾಡುವುದು, 2023 ರ ಏಪ್ರಿಲ್ ನಿಂದ 2024 ರ ಮಾರ್ಚ್ ವರೆಗೆ 550 ರೂಪಾಯಿ 2024 ರ ಏಪ್ರಿಲ್ ನಿಂದ 2026 ರ ಮಾರ್ಚ್ ವರೆಗೂ 555 ರೂಪಾಯಿಗಳಿಗೆ ದೇಶೀಯ ಪ್ರಯಾಣಿಕ ವಿಮಾನಗಳಿಗೆ ಶುಲ್ಕ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿತ್ತು. ಬಿಐಎಎಲ್ ನ ಏರ್ ಪೋರ್ಟ್ ಆಪರೇಟರ್ ಎಇಆರ್ ಎ ಯ ಶುಲ್ಕ ನಿರ್ಧಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT