ರಾಜ್ಯ

ಧಾರವಾಡ: ರಸ್ತೆಯಲ್ಲಿ ಮಹಿಳೆಯ ಕೈಹಿಡಿದು ಎಳೆದಾಡಿದ್ದ ಜೆಡಿಎಸ್ ಮುಖಂಡನ ಬಂಧನ

Shilpa D

ಧಾರವಾಡ: ರಸ್ತೆಯಲ್ಲಿಯೇ ಮಹಿಳೆ ಕೈಹಿಡಿದು ಎಳೆದಾಡಿದ್ದ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ‌ನನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಧಾರವಾಡ ನಗರದ ಸತ್ತೂರ ಬಡಾವಣೆಯಲ್ಲಿ ಸತ್ತೂರಿನ ಮಹಿಳೆ ಮನೆಗೆ ತೆರಳಿದ್ದ ಶ್ರೀಕಾಂತ ಜಮುನಾಳ‌ ಈ ವೇಳೆ ಮಹಿಳೆಯ ಕೈಹಿಡಿದು ಎಳೆದಾಡಿರುವ ವಿಡಿಯೋ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಘಟನೆ ಬಳಿಕ ಆರೋಪಿ ಶ್ರೀಕಾಂತ ಜಮನಾಳ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಸವದತ್ತಿ ತಾಲೂಕಿನ ಪೊಲೀಸರಿಗೆ ಶ್ರೀಕಾಂತ ಸೆರೆಸಿಕ್ಕಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ವಿಚಾರಣೆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ದೊರಕಲಿದೆ.

SCROLL FOR NEXT