ಸಾಂದರ್ಭಿಕ ಚಿತ್ರ 
ರಾಜ್ಯ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಮಗನ ಕೊಲೆ: ತಾಯಿ-ಪ್ರಿಯಕರ ಸೇರಿ ಮೂವರ ಬಂಧನ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತವನ ಪ್ರಿಯಕರನನ್ನು ಮೈಕೋ ಲೇಔಟ್ ಪೊಲೀಸರು ಬಂದಿಸಿದ್ದಾರೆ.

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತವನ ಪ್ರಿಯಕರನನ್ನು ಮೈಕೋ ಲೇಔಟ್ ಪೊಲೀಸರು ಬಂದಿಸಿದ್ದಾರೆ.

ತಾಯಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಬಾಲಕನ ಕೊಲೆ ಮಾಡಲಾಗಿತ್ತು.  ಸುನೀಲ್ (31) ರೌಡಿ ಶೀಟರ್ ಆಗಿದ್ದು ಬೋರ್ ವೆಲ್ ಡ್ರಿಲ್ಲಿಂಗ್  ನಲ್ಲಿ ಕೆಲ ಮಾಡುತ್ತಿದ್ದ. ಬಾಲಕನಿಗೆ ಕಿರುಕುಳ ನೀಡಿ ಕೊಂದ ನಂತರ ಕೃಷ್ಣಗಿರಿ ಹೊರವಲಯದ ಪೊದೆಯಲ್ಲಿ ಬಿಸಾಡಿದ್ದನು.

ಬಾಲಕನನ್ನು ಕೊಲೆ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಸುನೀಲ್ ಪ್ರಿಯತಮೆ ಸಿಂಧುವನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧು ಮತ್ತು ನಾದಿಯ ಇಬ್ಬರು ತರಕಾರಿ ಮಾರಾಟಗಾರರಾಗಿದ್ದರು, ಸಿಂಧುವಿನ ಪ್ರಿಯಕರ ಸುನೀಲ್ ನಾದಿಯಾ ಜೊತೆ ಸಂಬಂಧ ಹೊಂದಿದ್ದನು. 

ನಾದಿಯಾ ಮನೆಗೆ ಹೋಗುತ್ತಿದ್ದ ಸುನೀಲ್, ಆಕೆಯ ಮಗನನ್ನು ಸ್ನೇಹಿತನಾಗಿಸಿಕೊಳ್ಳಲು ಯತ್ನಿಸುತ್ತಿದ್ದ, ಆದರೆ ನೀವು ಯಾಕೆ ನಮ್ಮ ಮನೆಗೆ ಬರುತ್ತೀರಾ ಎಂದು ನಾದಿಯಾ ಮಗ ಪ್ರಶ್ನಿಸುತ್ತಿದ್ದ, ಇದರಿಂದ ಕುಪಿತಗೊಂಡ ಆತ ಬಾಲಕನಿಗೆ ಕಿರುಕುಳ ನೀಡುತ್ತಿದ್ದ. 3 ವರ್ಷದ ಹಿಂದೆ ನಾದಿಯಾ ಪತಿ ಆಕೆಯಿಂದ ದೂರವಾದ ನಂತರ ಸುನೀಲ್ ಜೊತೆ ಸಂಪರ್ಕ ಹೊಂದಿದ್ದಳು.

ಪದೇ ಪದೇ ಸುನೀಲ್ ಮನೆಗೆ ಬರುವುದನ್ನು ಪ್ರಶ್ನಿಸಿದ್ದ ಬಾಲಕನಿಗೆ ಎಚ್ಚರಿಕೆ ನೀಡಿದ್ದ, ಆದರೆ ಅದನ್ನು ಮುಂದುವರಿಸಿದ ಕಾರಣ ಬಾಲಕನನ್ನು ಕೊಲೆ ಮಾಡಲು ನಿರ್ಧರಿಸಿದ. ನಾದಿಯಾ ಗೆ ಕರೆ ಮಾಡಿದ ಸುನೀಲ್ ಬಾಲಕನನ್ನು ಕೊಲೆ ಮಾಡುವುದಾಗಿ ತಿಳಿಸಿದ, ಇದಕ್ಕೆ ಸುನೀಲ್ ಪ್ರಿಯತಮೆ ಸಿಂಧು ಕೂಡ ಸಹಾಯ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ದಿನ ಕಳೆದಂತೆ ನಾದಿಯಾ ತಾಯಿ ಬಾಲಕನ ಬಗ್ಗೆ ವಿಚಾರಿಸಲು ಆರಂಭಿಸಿದರು, ಇದರಿಂದಾಗಿ ಆಕೆಯನ್ನು ದೂರವಿಡಲು ನಾದಿಯಾ ನಿರ್ಧರಿಸಿದಳು, ಇದರಿಂದ ಸಂಶಯಗೊಂಡ ನಾದಿಯಾ ತಾಯಿ ಪೊಲೀಸರ ಬಳಿ ನಾಪತ್ತೆ ಪ್ರಕರಣ ದಾಖಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT