ಚರ್ಚ್ ಸ್ಟ್ರೀಟ್ 
ರಾಜ್ಯ

ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ

ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 10ನೇ ಮುಖ್ಯರಸ್ತೆ ಮತ್ತು ಗಾಂಧಿ ಬಜಾರ್ ರಸ್ತೆಗಳನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಉನ್ನತ ದರ್ಜೆಗೆ ಏರಿಸಲಾಗುವುದು.

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ನಿರ್ಮಾಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಮತ್ತು ಭೂ ಸಾರಿಗೆ ಇಲಾಖೆ(Department of Urban and Land Transport) ಅದೇ ಮಾದರಿಯ ಯೋಜನೆಯನ್ನು ನಗರದ ಮೂರು ರಸ್ತೆಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. 

ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 10ನೇ ಮುಖ್ಯರಸ್ತೆ ಮತ್ತು ಗಾಂಧಿ ಬಜಾರ್ ರಸ್ತೆಗಳನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಉನ್ನತ ದರ್ಜೆಗೆ ಏರಿಸಲಾಗುವುದು.

ಇದೇ ವೇಳೆ ನಗರ ಮತ್ತು ಭೂ ಸಾರಿಗೆ ಇಲಾಖೆ ನಗರದ ಬೀದಿಗಳನ್ನು ಪಾದಚಾರಿ ಮಾರ್ಗಗಳನ್ನಾಗಿ ಮಾರ್ಪಾಡು ಮಾಡಿದುದರ ಪರಿಣಾಮ ಮತ್ತು ಅದರ ಬಾಳಿಕೆ ಎನ್ನುವ ಪರಿಶೀಲನಾ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯನ್ನು ನಗರದ ಪ್ರತಿಷ್ಟಿತ ವಿಜ್ನಾನ ಸಂಸ್ಥೆಯಾದ ಐಐಎಸ್ಸಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ನಗರ ಮತ್ತು ಭೂ ಸಾರಿಗೆ ಇಲಾಖೆ ಆಯುಕ್ತರಾದ ವಿ ಮಂಜುಳ Clean Air Street Testbed ಎನ್ನುವ ಕಾರ್ಯಕ್ರಮ ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ. 

ಈ ಕಾರ್ಯಕ್ರಮದಡಿ ಸ್ಟಾರ್ಟಪ್ ಕಂಪನಿಗಳು ವಿಭಿನ್ನ ಪರಿಸರ ಸ್ನೇಹಿ ತಂತ್ರಜ್ನಾನ, ಪ್ಲ್ಯಾನ್ ಅಥವಾ ಯೋಜನೆಗಳನ್ನು ಇಲಾಖೆ ಜೊತೆಗೆ ಹಂಚಿಕೊಳ್ಳಬಹುದು. ಸದ್ಯ ನಿವೃತ್ತಿಯಾಗಿರುವ ಬಿಬಿಎಂಪಿ ಮುಖ್ಯ ಅಭಿಯಂತರ ಕೆ.ಟಿ ನಾಗರಾಜ್ ಅವರ ನೇತೃತ್ವದಲ್ಲಿ ಚರ್ಚ್ ಸ್ಟ್ರೀಟ್ ರಸ್ತೆ ಕಾಮಗಾರಿ ನಡೆದಿತ್ತು ಎನ್ನುವುದು ಗಮನಾರ್ಹ. 

ರಸ್ತೆಗಳನ್ನು ವಾರಾಂತ್ಯದ ದಿನಗಳಲ್ಲಿ ವಾಹನಮುಕ್ತಗೊಳಿಸಿ ಪಾದಚಾರಿಗಳಿಗೆ ಮಾತ್ರ ಅನುವು ಮಾಡಿಕೊಡುವುದರಿಂದ ಆ ಪರಿಸರದ ಗಾಳಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿರುವುದಾಗಿ ಐಐಎಸ್ಸಿ ನೀಡಿರುವ ವರದಿಯಲ್ಲಿ ಹೇಳಲಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?