ದಸರಾ ಆನೆಗಳ ತೂಕ ಪರೀಕ್ಷೆ 
ರಾಜ್ಯ

ಮೈಸೂರು ದಸರಾ 2022: ಈ ಬಾರಿಯೂ 5,725 ಕೆಜಿ ತೂಕದ ಅರ್ಜುನನೇ ಬಲಶಾಲಿ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ತೂಕ ಪರೀಕ್ಷಿಸಲಾಗಿದ್ದು, ಈ ಬಾರಿಯೂ ಅರ್ಜುನನೇ ಬಲಶಾಲಿಯಾಗಿದ್ದಾನೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ತೂಕ ಪರೀಕ್ಷಿಸಲಾಗಿದ್ದು, ಈ ಬಾರಿಯೂ ಅರ್ಜುನನೇ ಬಲಶಾಲಿಯಾಗಿದ್ದಾನೆ.

ಅರಣ್ಯ ಇಲಾಖೆ ಗುರುವಾರ ಇಲ್ಲಿ ಆಯೋಜಿಸಿದ್ದ ತೂಕ ತಪಾಸಣೆ ವೇಳೆ 5,725 ಕೆಜಿ ತೂಕದ ಅರ್ಜುನ ಇತರೆ ದಸರಾ ಆನೆಗಳನ್ನು ಮೀರಿಸಿದೆ. ಮೈಸೂರು ಅರಮನೆಗೆ ಆಗಮಿಸಿದ ದಸರಾ ಆನೆಗಳ ಮೊದಲ ತಂಡದ ಎಲ್ಲಾ ಒಂಬತ್ತು ಆನೆಗಳನ್ನು ಗುರುವಾರ ಬೆಳಗ್ಗೆ ಇಲ್ಲಿಂದ ಧನ್ವಂತ್ರಿ ರಸ್ತೆಗೆ ಕರೆತಂದು ಅಲ್ಲಿ ತೂಕದ ಸೇತುವೆಯ ಮೇಲೆ ಎಲ್ಲಾ ಆನೆಗಳ ತೂಕವನ್ನು ಅಳೆಯಲಾಯಿತು.

ಕಳೆದ ವರ್ಷದಂತೆ ಅರ್ಜುನ 5,725 ಕೆ.ಜಿ.ತೂಕದೊಂದಿಗೆ ಇತರೆ ಆನೆಗಳಿಗಿಂತ ತಾನು ಬಲಶಾಲಿ ಎಂದು ಸಾಬೀತು ಪಡಿಸಿದ್ದಾನೆ. ಉಳಿದಂತೆ ಕಾವೇರಿ 3100, ಅಭಿಮನ್ಯು 4770, ಮಹೇಂದ್ರ 4250, ಲಕ್ಷ್ಮೀ 2920, ಚೈತ್ರ 3050, ಭೀಮ 3920, ಧನಂಜಯ 4810 ಗೋಪಾಲಸ್ವಾಮಿ, 5140 ಕೆ.ಜಿ ತೂಕ ಹೊಂದಿವೆ.

ಈ ಕುರಿತು ಡಿಸಿಎಫ್ ಡಾ.ಕರಿಕಾಳನ್ ಮಾತನಾಡಿ, ಆನೆಗಳಿಗೆ 14ರಿಂದ ಅರಮನೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಆನೆಗಳ ಆರೋಗ್ಯ ಕಾಪಾಡುವುದಷ್ಟೇ ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುವುದರೊಳಗೆ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ. ವಿಶೇಷ ಪೌಷ್ಟಿಕಾಂಶದ ಆಹಾರವನ್ನು ಪಡೆದ ನಂತರ, ಆನೆಗಳು 400-500 ಕೆಜಿ ತೂಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ನಾವು ಅವರು ದಪ್ಪವಾಗಿ ಬೆಳೆಯಲು ಬಯಸುವುದಿಲ್ಲ, ಆದರೆ ಆರೋಗ್ಯವಾಗಿರಲು ಬಯಸುತ್ತೇವೆ ಎಂದು ವಿವರಿಸಿದರು.

ಆಗಸ್ಟ್ 14 ರಿಂದ ಜಂಬೂ ಸವಾರಿ ತರಬೇತಿಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT