ಕೊಡಗು ಮಹಿಳೆಯರು 
ರಾಜ್ಯ

ಕೊಡಗು: ಕ್ರಿಕೆಟ್ ಪಂದ್ಯಾವಳಿಗಾಗಿ ಬ್ಯಾಟ್ ಹಿಡಿಯಲಿರುವ ಮಹಿಳೆಯರು!

ಕೊಡಗಿನ 'ಕೈಲ್ ಪೋದ್' ಹಬ್ಬದ ನಂತರ ಜಿಲ್ಲೆಯಲ್ಲಿ ಕ್ರೀಡಾಕೂಟಕ್ಕೆ ಜಾಲ್ತಿ ಸಿಗಲಿದೆ. ಸೆಪ್ಟೆಂಬರ್ 3ರಂದು ಹಬ್ಬದ ಆಚರಣೆಯ ನಂತರ, ಹಲವಾರು ಕ್ರೀಡಾ ಪಂದ್ಯಾವಳಿಗಳು ಕ್ರೀಡಾ ಉತ್ಸಾಹಿಗಳನ್ನು ಆಕರ್ಷಿಸುತ್ತವೆ.

ಮಡಿಕೇರಿ: ಕೊಡಗಿನ 'ಕೈಲ್ ಪೋದ್' ಹಬ್ಬದ ನಂತರ ಜಿಲ್ಲೆಯಲ್ಲಿ ಕ್ರೀಡಾಕೂಟಕ್ಕೆ ಜಾಲ್ತಿ ಸಿಗಲಿದೆ. ಸೆಪ್ಟೆಂಬರ್ 3ರಂದು ಹಬ್ಬದ ಆಚರಣೆಯ ನಂತರ, ಹಲವಾರು ಕ್ರೀಡಾ ಪಂದ್ಯಾವಳಿಗಳು ಕ್ರೀಡಾ ಉತ್ಸಾಹಿಗಳನ್ನು ಆಕರ್ಷಿಸುತ್ತವೆ. 

ಈ ವರ್ಷ ಅದರ ಭಾಗವಾಗಿ ಮೊದಲ ಪ್ರಯತ್ನದಲ್ಲಿ ಕ್ರಿಕೆಟ್ ಲೀಗ್ ಅನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಮಹಿಳೆಯರಿಗಾಗಿ ಪ್ರತ್ಯೇಕ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ.

ಮಡಿಕೇರಿ ತಾಲೂಕಿನ ಚೆಟ್ಟಳ್ಳಿಯಲ್ಲಿ ಸ್ಥಾಪಿತವಾಗಿರುವ 'ನಮ್ಮ ಕ್ಲಬ್' ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಮುಂದಾಗಿದ್ದು, ಈಗಾಗಲೇ ಉತ್ಸಾಹಿ ಮಹಿಳೆಯರು ನೋಂದಣಿ ಮಾಡಿಸುತ್ತಿದ್ದಾರೆ.

2010ರಲ್ಲಿ 13 ಸದಸ್ಯರೊಂದಿಗೆ ಕ್ಲಬ್ ಅನ್ನು ಸ್ಥಾಪಿಸಲಾಯಿತು. ಅಂದಿನಿಂದ ನಾವು ಮಹಿಳೆಯರಿಗಾಗಿ ಸಣ್ಣ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದೇವೆ. ಆದರೆ, ಈ ಬಾರಿಯ ಸಾಂದರ್ಭಿಕ ಚರ್ಚೆಯು ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರಿಂದ ತಕ್ಷಣದ ಬೆಂಬಲದೊಂದಿಗೆ ದೊಡ್ಡ ಯೋಜನೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷೆ ಶೋಬಾ ಚೆಂಗಪ್ಪ ವಿವರಿಸಿದರು.

ಕ್ಲಬ್ ನಲ್ಲಿ ಒಟ್ಟು 64 ಮಹಿಳಾ ಸದಸ್ಯರಿದ್ದು, ಪ್ರತಿಯೊಬ್ಬರು ವೈಯಕ್ತಿಕ ದೇಣಿಗೆ ನೀಡಿದ್ದು, ಸೆ.24ರಂದು ಚೆಟ್ಟಳ್ಳಿ ಹೈಸ್ಕೂಲ್ ಮೈದಾನದಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.

ಯೋಜನೆಯ ಅಂತಿಮ ನಿರ್ಧಾರದ ನಂತರ ನಾವು ಹಲವಾರು ಇತರ ಮಹಿಳಾ ಕ್ಲಬ್‌ಗಳನ್ನು ಆಹ್ವಾನಿಸಿದ್ದೇವೆ. ಒಟ್ಟು 16 ತಂಡಗಳು ಟೂರ್ನಿಗಾಗಿ ನೋಂದಾಯಿಸಿಕೊಂಡಿವೆ. ಸೇರಲು ಬಯಸುವವರ ಸಂಖ್ಯೆ ಹೆಚ್ಚಿದೆ. ಆದರೆ ಇದು ಮೊದಲ ವರ್ಷವಾಗಿರುವುದರಿಂದ ನಾವು ಈ ಬಾರಿ ಸಂಖ್ಯೆಗಳನ್ನು ನಿರ್ಬಂಧಿಸಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT