ಆಯುಷಿ ಚೌಹಾಣ್ 
ರಾಜ್ಯ

ಕ್ಷಯರೋಗ ಸುಲಭ ಪತ್ತೆಗೆ ಸಾಧನ ಕಂಡು ಹಿಡಿದ ಐಐಎಸ್'ಸಿ ವಿದ್ಯಾರ್ಥಿಗೆ ಬರ್ಲಿನ್ ಶೃಂಗಸಭೆಯಲ್ಲಿ ಬಹುಮಾನ!

ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಐಐಎಸ್‌ಸಿ ವಿದ್ಯಾರ್ಥಿಯೊಬ್ಬರು ಕ್ಷಯರೋಗ (ಟಿಬಿ) ರೋಗವನ್ನು ಅಗ್ಗದ ಮತ್ತು ಹೆಚ್ಚು ಸುಲಭವಾಗಿ ಪತ್ತೆಹಚ್ಚುವ ಸಾಧನ ಕಂಡು ಹಿಡಿದಕ್ಕಾಗಿ ಮೂರನೇ ಬಹುಮಾನವನ್ನು ಗೆದ್ದಿದ್ದಾರೆ.

ಬೆಂಗಳೂರು: ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಶೃಂಗಸಭೆಯಲ್ಲಿ ಐಐಎಸ್‌ಸಿ ವಿದ್ಯಾರ್ಥಿಯೊಬ್ಬರು ಕ್ಷಯರೋಗ (ಟಿಬಿ) ರೋಗವನ್ನು ಅಗ್ಗದ ಮತ್ತು ಹೆಚ್ಚು ಸುಲಭವಾಗಿ ಪತ್ತೆಹಚ್ಚುವ ಸಾಧನ ಕಂಡು ಹಿಡಿದಕ್ಕಾಗಿ ಮೂರನೇ ಬಹುಮಾನವನ್ನು ಗೆದ್ದಿದ್ದಾರೆ.

ಐಐಎಸ್‌ಸಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ವಿದ್ವಾಂಸರಾದ ಆಯುಷಿ ಚೌಹಾಣ್ ಅವರಿಗೆ ಜರ್ಮನಿಯಲ್ಲಿ ನಡೆದ ಫಾಲಿಂಗ್ ವಾಲ್ಸ್ ಲ್ಯಾಬ್ ಮತ್ತು ಸೈನ್ಸ್ ಸಮ್ಮಿಟ್ 2022ರಲ್ಲಿ 'ವರ್ಷದ ಉದಯೋನ್ಮುಖ ಪ್ರತಿಭೆಗಳ ಬ್ರೇಕ್ ಥ್ರೂ' ವಿಭಾಗದಲ್ಲಿ ಮೂರನೇ ಬಹುಮಾನವನ್ನು ನೀಡಲಾಯಿತು.

ಆಯುಷಿ ಹಾಗೂ ಅವರ ಸಲಹೆಗಾರ ಡಾ.ಭೂಷಣ್ ಟೋಲೆ ಅವರು, ನಿಯಮಿತ ಮತ್ತು ಔಷಧ-ನಿರೋಧಕ ಕ್ಷಯರೋಗವನ್ನು ಪತ್ತೆಹಚ್ಚಲು ಪಾಕೆಟ್-ಗಾತ್ರದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ರೋಗನಿರ್ಣಯದ ಭಾಗವನ್ನು ಸಾಧನ-ಮುಕ್ತವಾಗಿ ಮಾಡುತ್ತದೆ. “ಸಾಧನವು ಉಪಕರಣ ವೆಚ್ಚವನ್ನು ಶೇ.99.6 ಮತ್ತು ಪರೀಕ್ಷಾ ವೆಚ್ಚವನ್ನು ಶೇ.87 ರಷ್ಟು ಕಡಿಮೆ ಮಾಡುತ್ತದೆ, ಅದನ್ನು ಇನ್ನೂ ಕಡಿಮೆ ಮಾಡಬಹುದು ಎಂದು ಆಯುಷಿ ಹೇಳಿದ್ದಾರೆ.

ಶೃಂಗಸಭೆಯಲ್ಲಿ ಮಾತನಾಡಿದ ಆಯುಷಿಯವರು, ದೇಶದಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಕ್ಷಯರೋಗ ಪ್ರಕರಣಗಳು ವರದಿಯಾಗಿವೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸಲಕರಣೆಗಳ ಅಗತ್ಯಗಳಿಗೆ ಕಾರಣವಾಗಿದೆ, ನಾವು ಆವಿಷ್ಕರಿಸಿರುವ ರೋಗನಿರ್ಣಯ ವಿಧಾನವು ಮನೆಯಲ್ಲಿಯೇ ಮಾಡಿಕೊಳ್ಳುವ ಗರ್ಭಧಾರಣೆ ಪರೀಕ್ಷೆ ಮತ್ತು ಕೋವಿಡ್ ಪರೀಕ್ಷೆಗಳಂತೆಯೇ ಇರುತ್ತದೆ. ನಮ್ಮ ಈ ಆವಿಷ್ಕಾರವು 2035 ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸಬಹುದು ಎಂದು ನಾನು ನಂಬುತ್ತೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT