ಸಾಂದರ್ಭಿಕ ಚಿತ್ರ 
ರಾಜ್ಯ

ವಾರದೊಳಗೆ ಬಾಡಿಗೆ ಪಾವತಿಸಿ, ಖಾಲಿ ಮಾಡುವಂತೆ ಐಎಂಎ ಫ್ಲಾಟ್ ಬಾಡಿಗೆದಾರರಿಗೆ ಸೂಚನೆ

ವಂಚಕ ಸಂಸ್ಥೆ ಐಎಂಎ ನಿರ್ಮಿಸಿರುವ ಪಾಶ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಗೆ ಕಂದಾಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ವಾರದೊಳಗೆ ಖಾಲಿ ಮಾಡುವಂತೆ ಸೂಚಿಸಿದೆ. ವಂಚಕ ಮನ್ಸೂರ್ ಖಾನ್ ಐಎಂಎ ಹುಟ್ಟು ಹಾಕಿದ್ದ

ಬೆಂಗಳೂರು: ವಂಚಕ ಸಂಸ್ಥೆ ಐಎಂಎ ನಿರ್ಮಿಸಿರುವ ಪಾಶ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ಬಾಡಿಗೆದಾರರಿಗೆ ಕಂದಾಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ವಾರದೊಳಗೆ ಖಾಲಿ ಮಾಡುವಂತೆ ಸೂಚಿಸಿದೆ. ವಂಚಕ ಮನ್ಸೂರ್ ಖಾನ್ ಐಎಂಎ ಹುಟ್ಟು ಹಾಕಿದ್ದ

 ಕ್ವೀನ್ಸ್ ರಸ್ತೆ ಬಳಿಯ ಟಾಸ್ಕರ್‌ ಟೌನ್‌ ಪಾರ್ಕ್‌ ರೋಡ್‌ ಅಪಾರ್ಟ್‌ಮೆಂಟ್‌ನ ಬಾಡಿಗೆದಾರ ಮಹಮ್ಮದ್‌ ಯಾಸಿರ್‌ ಮಾತನಾಡಿ, ಐಎಂಎ ನಿರ್ಮಿಸಿರುವ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ನೂರಾರು ಬಾಡಿಗೆದಾರರಿಗೆ ನವೆಂಬರ್‌ 23ರಂದು ಯಲಹಂಕ ತಹಶೀಲ್ದಾರ್‌ ನೋಟಿಸ್‌ ನೀಡಿದ್ದು, ಸಕ್ಷಮ ಪ್ರಾಧಿಕಾರವ ಹಾಕಿದ್ದ ಐದು ವರ್ಷಗಳ ಬಾಡಿಗೆ ಒಪ್ಪಂದದ ಷರತ್ತು ಕೊನೆಗೊಂಡ ಕಾರಣ ಖಾಲಿ ಮಾಡುವಂತೆ ಸೂಚಿಸಿದ್ದಾರೆ ಎಂದರು. 

ಪ್ರಾಧಿಕಾರವು ಐಎಂಎ ಜೊತೆ ಮಾಡಿಕೊಂಡಿರುವ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿ ಅದನ್ನು ಬಾಡಿಗೆ ಒಪ್ಪಂದದೊಂದಿಗೆ ಬದಲಾಯಿಸಿತ್ತು.  ಅಲ್ಲಿನ 'ಬಾಡಿಗೆದಾರ' 60 ತಿಂಗಳುಗಳು ಪೂರ್ಣಗೊಳ್ಳುವವರೆಗೆ ತಿಂಗಳಿಗೆ 40,000 ರೂ ಪಾವತಿಸಬೇಕಾಗುತ್ತದೆ. ನ್ಯಾಯಾಲಯದ ಮೊರೆ ಹೋಗಿರುವ ಉಳಿದ ಒಬ್ಬ ಅಥವಾ ಇಬ್ಬರಿಗೆ 8 ಲಕ್ಷ ರೂ.ಗಳನ್ನು ನೀಡುವಂತೆ ಮಂಗಳವಾರ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ತಿಳಿಸಿದರು. ಮೊತ್ತವನ್ನು ಇತ್ಯರ್ಥಪಡಿಸಿದ ನಂತರ, ನಾನು ಒಂದು ವಾರದಲ್ಲಿ ಖಾಲಿ ಮಾಡಬೇಕಾಗುತ್ತದೆ ಎಂದು ಯಾಸಿರ್ ಹೇಳಿದರು.

30 ಲಕ್ಷ ಹಣ ನೀಡಿದ್ದು, ಒಪ್ಪಂದದ ಷರತ್ತಿನಲ್ಲಿ ಬದಲಾವಣೆಯಾಗಿದ್ದರಿಂದ ಈಗ 8 ಲಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ ಎಂದರು. ಅಪಾರ್ಟ್‌ಮೆಂಟ್‌ಗೆ ತೆರಳಲು ಐಎಂಎ ಜತೆ ಅಕ್ರಮ ಒಪ್ಪಂದ ಮಾಡಿಕೊಂಡಿದ್ದಕ್ಕೆ 3 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ವರು ತಿಳಿಸಿದರು. 

ಯಲಹಂಕ ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್ ಮಾತನಾಡಿ,  ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಅಥವಾ ಇಬ್ಬರು ಸರ್ಕಾರಿ ಅಧಿಕಾರಿಗಳು ಇಲ್ಲಿ ಲೀಸ್ ನಲ್ಲಿ ನೆಲೆಸಿದ್ದಾರೆ ಮತ್ತು ಭಾಗಶಃ ಫ್ಲ್ಯಾಟ್‌ಗಳನ್ನು ಖಾಲಿ ಮಾಡಿದ್ದಾರೆ.  ನ್ಯಾಯಾಲಯಕ್ಕೆ ಹೋದ ಬಾಡಿಗೆದಾರರಲ್ಲಿ ಒಬ್ಬರು ಸಹ ಖಾಲಿ ಮಾಡುತ್ತಾರೆ. ಉಳಿದ ಬಾಡಿಗೆದಾರರು ಜಾಗ ಖಾಲಿ ಮಾಡಿದ ನಂತರ, ಎಂಟು ಐಷಾರಾಮಿ ಫ್ಲಾಟ್‌ಗಳು ಕಂದಾಯ ಇಲಾಖೆಯ ಸ್ವಾಧೀನದಲ್ಲಿರುತ್ತವೆ ಎಂದು ಹೇಳಿದರು. 

ಬಹುಕೋಟಿ ಐಎಂಎ ಹಗರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಪ್ರವರ್ತಕ ಮನ್ಸೂರ್ ಖಾನ್ ಗೆ ಹೆಸರು ಹೇಳಲಿಚ್ಛಿಸದ ಕೆಲ ಬಾಡಿಗೆದಾರರು ಹಿಡಿಶಾಪ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT