ಶಿರಾಡಿ ಘಾಟ್ 
ರಾಜ್ಯ

ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ಕಾರ್ಯಸಾಧುವಲ್ಲ: ಘಾಟ್ ರಸ್ತೆ ವಿಸ್ತರಣೆ NHAI ಗೆ: ನಿತಿನ್ ಗಡ್ಕರಿ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್‌ಗೆ ಉದ್ದೇಶಿಸಿರುವ ಹಸಿರು ಸುರಂಗ ಬೈಪಾಸ್ ಕಾರ್ಯಸಾಧುವಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದು 26 ಕಿಮೀ ಘಾಟ್ ಸ್ಟ್ರೆಚ್‌ನಲ್ಲಿ ಚತುಷ್ಪಥ ರಸ್ತೆಗಾಗಿ ವಿವರವಾದ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗುತ್ತಿದೆ ಎಂದರು.

ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್‌ಗೆ ಉದ್ದೇಶಿಸಿರುವ ಹಸಿರು ಸುರಂಗ ಬೈಪಾಸ್ ಕಾರ್ಯಸಾಧುವಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದು 26 ಕಿಮೀ ಘಾಟ್ ಸ್ಟ್ರೆಚ್‌ನಲ್ಲಿ ಚತುಷ್ಪಥ ರಸ್ತೆಗಾಗಿ ವಿವರವಾದ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗುತ್ತಿದೆ ಎಂದರು.

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶಿರಾಡಿ ಘಾಟ್‌ನ ಇಂದಿನ ಸ್ಥಿತಿಗತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, ಶಿರಾಡಿ ಘಾಟ್ ಭಾಗದಲ್ಲಿ ಸುರಂಗಗಳ ನಿರ್ಮಾಣದಲ್ಲಿ ಭಾರಿ ಹೂಡಿಕೆ ಹಾಗೂ ಕಾಮಗಾರಿ ನಿರ್ವಹಣೆಯಲ್ಲಿ ತೊಂದರೆಗಳಿದ್ದು, ಕಾರ್ಯಸಾಧ್ಯವಾಗದೇ ಇರಬಹುದು ಎಂದು ಸಚಿವರು ಹೇಳಿದರು. ಅಸ್ತಿತ್ವದಲ್ಲಿರುವ ದ್ವಿಪಥ ರಸ್ತೆಯನ್ನು ಚತುಷ್ಪಥಕ್ಕೆೇರಿಸುವುಕ್ಕೆ ಸಚಿವಾಲಯ ನಿರ್ಧರಿಸಿದೆ. ಅಲ್ಲದೆ NHAI ಈಗಾಗಲೇ DPRಯಲ್ಲಿ ತೊಡಗಿಸಿಕೊಂಡಿದೆ ಮತ್ತು ವರದಿಯು ಪ್ರಗತಿಯಲ್ಲಿದೆ ಎಂದರು. 

ಸುರಂಗ ಬೈಪಾಸ್ ಯೋಜನೆ ಕುರಿತಂತೆ ಆರಂಭದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಪ್ರಸ್ತಾಪಿಸಲಾಯಿತು. ಗಡ್ಕರಿ ಈ ಫೆಬ್ರವರಿಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ಬೈಪಾಸ್ ಯೋಜನೆಯು ಸುಮಾರು ರೂ. 14,000 ಕೋಟಿ ವೆಚ್ಚದಾಗಿದೆ. ಬೈಪಾಸ್ ಆರು ಸುರಂಗಗಳು ಮತ್ತು ಏಳು ಸೇತುವೆಗಳನ್ನು ಒಳಗೊಂಡಿರಬೇಕು. ಇದರಿಂದಾಗಿ ಪ್ರಯಾಣದ ಸಮಯ ಸುಮಾರು ಒಂದು ಗಂಟೆ ಕಡಿಮೆಯಾಗುತ್ತದೆ. ಪ್ರಸ್ತುತ ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಮಾರನಹಳ್ಳಿ ನಡುವಿನ ಹೆದ್ದಾರಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲು 9-10 ಗಂಟೆ ಬೇಕಾಗುತ್ತದೆ.

2018 ಮತ್ತು 2019ರ ಅವಧಿಯಲ್ಲಿ ಸುರಿದ ಭಾರಿ ಮಳೆಯಿಂದ 26 ಕಿ.ಮೀ ಕಾಂಕ್ರೀಟ್ ಘಾಟ್ ರಸ್ತೆಗೆ ತೀವ್ರ ಹಾನಿಯಾಗಿದ್ದು, ಕನಿಷ್ಠ 21 ಸ್ಥಳಗಳಲ್ಲಿ ಕೆಂಪು ಹಳ್ಳದ ಒಡ್ಡು ಕುಸಿದಿತ್ತು. ರಾಜ್ಯ PWD ಯ NH ವಿಭಾಗವು ಹೆದ್ದಾರಿಯ ಕಣಿವೆ ಬದಿಯ ಶಾಶ್ವತ ಪುನಃಸ್ಥಾಪನೆಯನ್ನು ಇತ್ತೀಚೆಗೆ 26 ಕೋಟಿ ರೂ. ಸೂಕ್ಷ್ಮ-ಪೈಲಿಂಗ್ ಮತ್ತು ಪೀಡಿತ ಒಡ್ಡು ಬಲಪಡಿಸುವಿಕೆಯನ್ನು ಒಳಗೊಂಡಿರುವ ಕೆಲಸವು ಮುಂದಿನ ಮಳೆಗಾಲದ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು NHAI ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT