ಸಿದ್ಧಿ ಹಾಡಿಯಲ್ಲಿ ಶ್ರೀರಾಮುಲು 
ರಾಜ್ಯ

ಸಿದ್ದಿಗಳ ಹಾಡಿಯಲ್ಲಿ ಶ್ರೀರಾಮುಲು ವಾಸ್ತವ್ಯ; ಜನರ ಕುಂದು ಕೊರತೆ ಆಲಿಸಿದ ಸಾರಿಗೆ ಸಚಿವ

ಸಿದ್ಧಿಗಳ ಸಂಕಷ್ಟಗಳನ್ನು  ಖುದ್ದು ಆಲಿಸಲು ಹಾಗೂ ಅರಣ್ಯವಾಸಿಗಳ ಸಮಸ್ಯೆಗಳ ನಿವಾರಣೆಗೆ ಸಚಿವ ಬಿ.ಶ್ರೀರಾಮುಲು ಅವರು ಶುಕ್ರವಾರ ತಡರಾತ್ರಿಯವರೆಗೂ ರಾಮಗಣಪತಿ ಸಿದ್ಧಿ ಅವರ ಮನೆಯಲ್ಲಿ ತಂಗಿದ್ದು, ಸಮಾಜದ ಬಾಂಧವರ ಜತೆ ಸಂವಾದ ನಡೆಸಿದರು.

ಕೆರೆಕುಂಬ್ರಿ (ಉತ್ತರಕನ್ನಡ): ಸಿದ್ಧಿಗಳ ಸಂಕಷ್ಟಗಳನ್ನು  ಖುದ್ದು ಆಲಿಸಲು ಹಾಗೂ ಅರಣ್ಯವಾಸಿಗಳ ಸಮಸ್ಯೆಗಳ ನಿವಾರಣೆಗೆ ಸಚಿವ ಬಿ.ಶ್ರೀರಾಮುಲು ಅವರು ಶುಕ್ರವಾರ ತಡರಾತ್ರಿಯವರೆಗೂ ರಾಮಗಣಪತಿ ಸಿದ್ಧಿ ಅವರ ಮನೆಯಲ್ಲಿ ತಂಗಿದ್ದು, ಸಮಾಜದ ಬಾಂಧವರ ಜತೆ ಸಂವಾದ ನಡೆಸಿದರು.

ಯಲ್ಲಾಪುರ ತಾಲೂಕಿನ ಮಾಗೋಡ ಕಾಲನಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಪ್ರಶಸ್ತಿ ಪಡೆದ ಲಕ್ಷ್ಮೀ ಗಣಪತಿ ಸಿದ್ದಿ ವೇದಿಕೆಯಲ್ಲಿ ಸಿದ್ದಿ ಸಮುದಾಯದವರೊಂದಿಗೆ ಸಂವಾದ ಮತ್ತು ಸರ್ಕಾರದ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಣ್ಯದ ಕೆರೆಕುಂಬ್ರಿಯಲ್ಲಿರುವ ರಾಮನ ಮನೆಗೆ ಬಂದ ಅವರು, ಬಿಜೆಪಿ ಎಂಎಲ್ಸಿ ಶಾಂತಾರಾಮ್ ಸಿದ್ಧಿ ಅವರ ಜೊತೆಯಲ್ಲಿ, ಅವರು ಫೋಟೋಗಳು ಮತ್ತು ಸೆಲ್ಫಿಗಳಿಗಾಗಿ ಸಮುದಾಯದ ಸದಸ್ಯರ ಮನವಿಗೆ ಸ್ಪಂದಿಸಿದರು.

ತಡವಾಗಿ ಬಂದಿದ್ದರಿಂದ ಊಟ ಮಾಡಲು ನಿರಾಕರಿಸಿ ಸಿದ್ಧಿ ನಾಯಕರ ಜತೆ ಚರ್ಚೆ ಆರಂಭಿಸಿದರು. ವಸತಿ, ಸೂಕ್ತ ಶಿಕ್ಷಣ, ಸಂಪರ್ಕ ಹಾಗೂ ಕುಡಿಯುವ ನೀರು, ವಿದ್ಯುತ್‌ನಂತಹ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಮುದಾಯದವರು ಮನವಿ ಸಲ್ಲಿಸಿದರು.

ಈ ಗ್ರಾಮ್ಯ ವಾಸ್ತವ್ಯ (ಗ್ರಾಮ ವಾಸ್ತವ್ಯ) ಬುಡಕಟ್ಟು ಸಮುದಾಯದ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಶ್ರೀರಾಮುಲು ಹೇಳಿದರು.

ಶಿಕ್ಷಣ ಅತ್ಯಂತ ಬೇಡಿಕೆಯಾಗಿರುವುದರಿಂದ ಯಲ್ಲಾಪುರದಲ್ಲಿ ವಸತಿ ಶಾಲೆ ನಿರ್ಮಿಸಲಾಗುವುದು ಎಂದು ಸಮುದಾಯದವರಿಗೆ ಭರವಸೆ ನೀಡಿದರು.

ಸಿದ್ಧಿ ಮಕ್ಕಳಲ್ಲಿನ ಅಪೌಷ್ಟಿಕತೆಯ ಕುರಿತು ಮಾತನಾಡಿದ ಅವರ, “ನಾವು ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತೇವೆ ಮತ್ತು ಅವರಿಗೆ ಸರ್ಕಾರದ ಯೋಜನೆಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಜನರು ರಸ್ತೆ, ನೀರು ಮತ್ತು ವಿದ್ಯುತ್‌ಗಾಗಿ ಕೇಳಿಕೊಂಡಿದ್ದಾರೆ, ಅದನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಭರವೆಸ ನೀಡಿದರು.

ಚಾಪೆಯ ಮೇಲೆ ಕುಳಿತುಕೊಂಡರು ಮತ್ತು ಮಲಗಲು ಹಾಸಿಗೆಯನ್ನು ಬಳಸಿದರು. ತಮ್ಮ ಆಪ್ತ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷ ಕಟ್ಟುತ್ತಾರೆ  ಎಂಬ ವದಂತಿಗಳನ್ನು ಬಿ ಶ್ರೀರಾಮುಲು ನಿರಾಕರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಡ್ಡಿ ನನ್ನ ಸ್ನೇಹಿತ, ಪಕ್ಷ ತನ್ನ ತಾಯಿ ಇದ್ದಂತೆ,  ಹಿಂದುಳಿದ ಸಮುದಾಯದ ವ್ಯಕ್ತಿಯನ್ನು ಬೆಳೆಸಿ ನಾಲ್ಕು ಬಾರಿ ಮಂತ್ರಿ ಮಾಡಿದೆ, ಪಕ್ಷ ನನಗೆ ಶಿಸ್ತನ್ನು ಕಲಿಸಿದೆ. ಇದು ನನಗೆ ತಾಯಿಯಂತೆ. ರೆಡ್ಡಿ ಜೊತೆಗಿನ ಸ್ನೇಹ ಸಂಪೂರ್ಣ ಭಿನ್ನವಾಗಿದೆ. ಅವರಿಗೆ ನಾನು ಋಣಿಯಾಗಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT