ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕೋವಿಡ್-19 ಟೆಸ್ಟ್ ಮಾಡಿಸದಿದ್ದರೂ ಮಾಡಿಸಿರುವುದಾಗಿ ಜನರಿಗೆ ಎಸ್ಎಂಎಸ್ ಸಂದೇಶ!

ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶದಿಂದ ನಾಗರಿಕರು ಇದೀಗ ಚಿಂತೆಗೀಡಾಗಿದ್ದಾರೆ.  

ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆರೋಗ್ಯ ಇಲಾಖೆಯಿಂದ ಬರುತ್ತಿರುವ ಸಂದೇಶದಿಂದ ನಾಗರಿಕರು ಇದೀಗ ಚಿಂತೆಗೀಡಾಗಿದ್ದಾರೆ.  ಸ್ಯಾಂಪಲ್ಸ್ ಗಳನ್ನು ತೆಗೆದುಕೊಂಡಿದ್ದು, ವರದಿ ಬರುವವರೆಗೂ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರುವಂತೆ ಸಂದೇಶದಲ್ಲಿ ಹೇಳಲಾಗುತ್ತಿದೆ.

ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ಇದೇ ರೀತಿಯ ಸಂದೇಶ ಕಳುಹಿಸಲಾಗುತಿತ್ತು. ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ತೆಗೆದುಕೊಂಡಿರುವುದಾಗಿ ಅನೇಕರಿಗೆ ಮೆಸೇಜ್ ಕಳುಹಿಸಲಾಗಿದೆ. 

'ನಾನು ಚೆನ್ನಾಗಿದ್ದು, ಆಫೀಸ್ ಗೆ ಹೋಗುತ್ತಿದ್ದೇನೆ. ಇದ್ದಕ್ಕಿದ್ದಂತೆ ಆರ್ ಟಿ- ಪಿಸಿಆರ್ ಸ್ಯಾಂಪಲ್ಸ್ ಕೊಟ್ಟಿದ್ದು, ವರದಿ ಬರುವವರೆಗೂ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರುವಂತೆ ಹೇಳಲಾಗಿದೆ. ಮೊದಲ ಅಲೆ ವೇಳೆಯಲ್ಲಿ ನನ್ನ ಸ್ಯಾಂಪಲ್ಸ್ ಕೊಟ್ಟಿದೆ. ಕಳೆದ ಐದು ದಿನಗಳಲ್ಲಿ ಯಾವುದೇ ಸ್ಯಾಂಪಲ್ಸ್ ಕೊಟ್ಟಿಲ್ಲ ಎಂದು ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುವ ಕೆ. ನಯನ ಹೇಳಿದರು.

ನಯನ ರೀತಿಯಲ್ಲಿ ಅನೇಕ ಮಂದಿ ಸಂದೇಶ ಪಡೆದಿದ್ದಾರೆ. ನನ್ನ ರೂಮ್ ಮೇಟ್ ಸಹೋದ್ಯೋಗಿಯೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದ ನಂತರ ಆತ ಸ್ಯಾಂಪಲ್ಸ್ ನೀಡಿದ್ದ. ನೆಗೆಟಿವ್ ರಿಪೋರ್ಟ್ ಬಂದಿತ್ತು. ನಾನು ಯಾವುದೇ ರೀತಿಯ ಸ್ಯಾಂಪಲ್ಸ್ ನೀಡಿರಲಿಲ್ಲ, ಆದರೆ, ನನ್ನ ಸ್ಯಾಂಪಲ್ಸ್ ಕೂಡಾ ಸಂಗ್ರಹಿಸಲಾಗಿದೆ ಎಂಬ ಮೆಸೇಜ್ ಬಂದಿದೆ ಎಂದು ಖಾಸಗಿ ಸಂಸ್ಥೆಯ ನೌಕರ ಆಶಿಶ್ ತಿಳಿಸಿದರು. 

ಲಸಿಕೆಯೇ ಪಡೆಯದ ಚಿರಾಗ್ (19) ಗೆ ಈಗಾಗಲೇ ಎರಡನೇ ಡೋಸ್ ಹಾಗೂ ಸಂಪೂರ್ಣ ಲಸಿಕೆ ಪಡೆದಿರುವುದಾಗಿ ಬಂದಿರುವ ಮೆಸೇಜ್ ನಿಂದ ಆತಂಕಗೊಂಡಿದ್ದಾರೆ. ಎರಡು ಕೇಸ್ ಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ಡಿ ರಂದೀಪ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದರು.

ಸ್ಯಾಂಪಲ್ಸ್ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಲಸಿಕೆ ಪಡೆಯದಿದ್ದರೂ ಪಡೆದಿರುವುದಾಗಿ ಸಂದೇಶ ಬಂದಿರುವ ನಾಗರಿಕರು ಕೂಡಲೇ 1533 ಅಥವಾ 104 ಸಂಪರ್ಕಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ವಿ. ತ್ರಿಲೋಕಚಂದ್ರ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT