ಪ್ರತಾಪ್ ಸಿಂಹ 
ರಾಜ್ಯ

'ಕಾಂಗ್ರೆಸ್ ಆಳಾಗಿ' ದೇವನೂರು ಮಹಾದೇವ ಕೃತಿ ರಚನೆ ಎಂದ ಪ್ರತಾಪ್ ಸಿಂಹ ವಿರುದ್ಧ ಡಿಎಸ್ ಎಸ್ ಆಕ್ರೋಶ

ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ  ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮೈಸೂರು: ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ  ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಆರ್ ಎಸ್ ಎಸ್ ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದ್ದು, ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿ, ಬ್ರಾಹ್ಮಣರು ಶ್ರೇಷ್ಠರು ಎಂದು ಪರಿಗಣಿಸಿದೆ ಎಂದು ಡಿಎಸ್ ಎಸ್ ಮೈಸೂರು ಜಿಲ್ಲಾ ಸಂಘಟಕ ಬೆಟ್ಟಯ್ಯ ಕೋಟೆ ಹೇಳಿದರು.

ಸಮಾಜವನ್ನು ನಿಯಂತ್ರಿಸಲು ಮತ್ತು ವಿಭಿಸಲು ಆರ್ ಎಸ್ ಎಸ್ ವರ್ಣಾಶ್ರಮವನ್ನು ಪ್ರಚೋದಿಸುತ್ತಿದೆ. ಇಂತಹ ಪದ್ಧತಿಗಳನ್ನು ದೇವನೂರು ಮಹಾದೇವ ತಮ್ಮ ಪುಸ್ತಕದಲ್ಲಿ ಖಂಡಿಸಿದ್ದಾರೆ. ಹಿಂದೂ ಧರ್ಮ ಶ್ರೇಷ್ಠ ಸಂಸ್ಕೃತಿಯ ಸನಾತನ ಧರ್ಮ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಹೇಳಿದಾಗಲೆಲ್ಲ,  ಶ್ರೀರಾಮ ಶಂಬುಕನ ಶಿರಚ್ಛೇದ ಮಾಡಿದದ್ದು, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದ್ದು, ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಮತ್ತು ದೇವದಾಸಿ ಪದ್ಧತಿ, ಬೆತ್ತಲೆ ಸೇವೆ (ಹೆಣ್ಣು ಬಟ್ಟೆ ಧರಿಸಿ ಮೆರವಣಿಗೆ ಮಾಡುವುದು) ಮತ್ತು ಉರುಳು ಸೇವೆ ನಮಗೆ ನೆನಪಾಗುತ್ತವೆ ಎಂದರು. 

“ನಮಗೆ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ. ಎಲ್ಲರಿಗೂ ಸಮಾನತೆ ಮತ್ತು ಗೌರವವನ್ನು ಸಾರುವ ಬುದ್ಧ ಧರ್ಮ, ಅಂಬೇಡ್ಕರ್ ಧರ್ಮ ಮತ್ತು ಬಸವ ಧರ್ಮವನ್ನು ನಾವು ನಂಬುತ್ತೇವೆ. ಸಂಸದರಾದ ಪ್ರತಾಪ್ ಸಿಂಹ, ವರ್ಣಾಶ್ರಮವನ್ನು ಬೆಂಬಲಿಸಿ ದೇವನೂರು ಮಹಾದೇವ ಅವರನ್ನು ಟೀಕಿಸಿದ್ದಾರೆ, ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ದಲಿತ ಮತ್ತು ಹಿಂದುಳಿದ ಸಮುದಾಯಗಳು ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ಮುಖ್ಯಸ್ಥ ಶಾಂತರಾಜು ಮಾತನಾಡಿ, ಸಿಂಹ ದಲಿತ ವಿರೋಧಿ ಎಂದರು. ಮಹಾದೇವ ಕಾಂಗ್ರೆಸ್ ಆಳು ಅಲ್ಲ, ಲೇಖಕ ಎಸ್‌ಎಲ್‌ ಭೈರಪ್ಪ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ದೇಶದ ಮೂಲ ನಿವಾಸಿಗಳಾದ ದ್ರಾವಿಡರು ಮತ್ತು ಆರ್ಯರಾದ ಆರ್‌ಎಸ್‌ಎಸ್ ಎಲ್ಲಿಂದ ಬಂದು ವರ್ಣಾಶ್ರಮವನ್ನು ಪ್ರಾರಂಭಿಸಿದರು ಎಂಬುದರ ಕುರಿತು ಹೆಚ್ಚಿನ ಜ್ಞಾನ  ಪಡೆಯಲು ಸಿಂಹ ಹೆಚ್ಚಿನ ಪುಸ್ತಕಗಳನ್ನು ಓದಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ರಾಜೀನಾಮೆ; 3 ಗಂಟೆಗೆ ಪತ್ರಿಕಾಗೋಷ್ಠಿ; ಮುಂದಿನ CM ಡಿ.ಕೆ ಶಿವಕುಮಾರ್

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT