ಪ್ರತಾಪ್ ಸಿಂಹ 
ರಾಜ್ಯ

'ಕಾಂಗ್ರೆಸ್ ಆಳಾಗಿ' ದೇವನೂರು ಮಹಾದೇವ ಕೃತಿ ರಚನೆ ಎಂದ ಪ್ರತಾಪ್ ಸಿಂಹ ವಿರುದ್ಧ ಡಿಎಸ್ ಎಸ್ ಆಕ್ರೋಶ

ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ  ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮೈಸೂರು: ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ  ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಆರ್ ಎಸ್ ಎಸ್ ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದ್ದು, ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿ, ಬ್ರಾಹ್ಮಣರು ಶ್ರೇಷ್ಠರು ಎಂದು ಪರಿಗಣಿಸಿದೆ ಎಂದು ಡಿಎಸ್ ಎಸ್ ಮೈಸೂರು ಜಿಲ್ಲಾ ಸಂಘಟಕ ಬೆಟ್ಟಯ್ಯ ಕೋಟೆ ಹೇಳಿದರು.

ಸಮಾಜವನ್ನು ನಿಯಂತ್ರಿಸಲು ಮತ್ತು ವಿಭಿಸಲು ಆರ್ ಎಸ್ ಎಸ್ ವರ್ಣಾಶ್ರಮವನ್ನು ಪ್ರಚೋದಿಸುತ್ತಿದೆ. ಇಂತಹ ಪದ್ಧತಿಗಳನ್ನು ದೇವನೂರು ಮಹಾದೇವ ತಮ್ಮ ಪುಸ್ತಕದಲ್ಲಿ ಖಂಡಿಸಿದ್ದಾರೆ. ಹಿಂದೂ ಧರ್ಮ ಶ್ರೇಷ್ಠ ಸಂಸ್ಕೃತಿಯ ಸನಾತನ ಧರ್ಮ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಹೇಳಿದಾಗಲೆಲ್ಲ,  ಶ್ರೀರಾಮ ಶಂಬುಕನ ಶಿರಚ್ಛೇದ ಮಾಡಿದದ್ದು, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದ್ದು, ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಮತ್ತು ದೇವದಾಸಿ ಪದ್ಧತಿ, ಬೆತ್ತಲೆ ಸೇವೆ (ಹೆಣ್ಣು ಬಟ್ಟೆ ಧರಿಸಿ ಮೆರವಣಿಗೆ ಮಾಡುವುದು) ಮತ್ತು ಉರುಳು ಸೇವೆ ನಮಗೆ ನೆನಪಾಗುತ್ತವೆ ಎಂದರು. 

“ನಮಗೆ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ. ಎಲ್ಲರಿಗೂ ಸಮಾನತೆ ಮತ್ತು ಗೌರವವನ್ನು ಸಾರುವ ಬುದ್ಧ ಧರ್ಮ, ಅಂಬೇಡ್ಕರ್ ಧರ್ಮ ಮತ್ತು ಬಸವ ಧರ್ಮವನ್ನು ನಾವು ನಂಬುತ್ತೇವೆ. ಸಂಸದರಾದ ಪ್ರತಾಪ್ ಸಿಂಹ, ವರ್ಣಾಶ್ರಮವನ್ನು ಬೆಂಬಲಿಸಿ ದೇವನೂರು ಮಹಾದೇವ ಅವರನ್ನು ಟೀಕಿಸಿದ್ದಾರೆ, ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ದಲಿತ ಮತ್ತು ಹಿಂದುಳಿದ ಸಮುದಾಯಗಳು ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ಮುಖ್ಯಸ್ಥ ಶಾಂತರಾಜು ಮಾತನಾಡಿ, ಸಿಂಹ ದಲಿತ ವಿರೋಧಿ ಎಂದರು. ಮಹಾದೇವ ಕಾಂಗ್ರೆಸ್ ಆಳು ಅಲ್ಲ, ಲೇಖಕ ಎಸ್‌ಎಲ್‌ ಭೈರಪ್ಪ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ದೇಶದ ಮೂಲ ನಿವಾಸಿಗಳಾದ ದ್ರಾವಿಡರು ಮತ್ತು ಆರ್ಯರಾದ ಆರ್‌ಎಸ್‌ಎಸ್ ಎಲ್ಲಿಂದ ಬಂದು ವರ್ಣಾಶ್ರಮವನ್ನು ಪ್ರಾರಂಭಿಸಿದರು ಎಂಬುದರ ಕುರಿತು ಹೆಚ್ಚಿನ ಜ್ಞಾನ  ಪಡೆಯಲು ಸಿಂಹ ಹೆಚ್ಚಿನ ಪುಸ್ತಕಗಳನ್ನು ಓದಬೇಕು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT