ಸಾಂದರ್ಭಿಕ ಚಿತ್ರ 
ರಾಜ್ಯ

ಷೇರು, ಆನ್ ಲೈನ್ ವಹಿವಾಟಿನಲ್ಲಿ ದುಡ್ಡು ಕಳ್ಕೊಂಡು ಸಾಲ ಮಾಡಿ ಮನೆಯೊಡತಿ ವೃದ್ಧೆಯನ್ನೇ ಕೊಲೆ ಮಾಡಿದ ಯುವಕ!

ಷೇರು ಮತ್ತು ಆನ್‌ಲೈನ್ ವಹಿವಾಟಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ 29 ವರ್ಷದ ಯುವಕ ದುಷ್ಚಟಕ್ಕೆ ಬಲಿಯಾಗಿ ತಾನು ಸಾಲ ಪಡೆದಿದ್ದ 75 ವರ್ಷದ ವೃದ್ಧೆ ಮನೆಯೊಡತಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದಿದೆ.

ಬೆಂಗಳೂರು: ಷೇರು ಮತ್ತು ಆನ್‌ಲೈನ್ ವಹಿವಾಟಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ 29 ವರ್ಷದ ಯುವಕ ದುಷ್ಚಟಕ್ಕೆ ಬಲಿಯಾಗಿ ತಾನು ಸಾಲ ಪಡೆದಿದ್ದ 75 ವರ್ಷದ ವೃದ್ಧೆ ಮನೆಯೊಡತಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದಿದೆ.

ಪೊಲೀಸರು ಆರೋಪಿ ದೊಮ್ಮಲೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರ ಜೈಕಿಶನ್ ಎಂಬಾತನನ್ನು ಬಂಧಿಸಿದ್ದಾರೆ. ಒಂಟಿಯಾಗಿ ವಾಸಿಸುತ್ತಿದ್ದ ಮನೆಯೊಡತಿ ಯಶೋದಮ್ಮ ಕಳೆದ ಜುಲೈ 1 ರಂದು ಅವರ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಜೈಕಿಶನ್ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಹಂತಕ ಹಲವು ಸುಳಿವು ಬಿಟ್ಟುಕೊಡದ ಕಾರಣ ಪ್ರಕರಣ ಭೇದಿಸಲು ಆರಂಭದಲ್ಲಿ ಸಾಧ್ಯವಾಗಿರಲಿಲ್ಲ. ಕಳೆದ ಎಂಟು ವರ್ಷಗಳಿಂದ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದ ಜೈಕಿಶನ್ ವೃದ್ಧೆಯನ್ನು ಕೊಲೆ ಮಾಡಿದ ನಂತರವೂ ಅದೇ ಮನೆಯಲ್ಲಿ ವಾಸಿಸುತ್ತಿದ್ದನು, ಅನುಮಾನಿಸಲು ಸಾಧ್ಯವಾಗದಿರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದನು. 

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದೆವು, ಆದರೆ ಯಾವುದೇ ಅಪರಿಚಿತ ವ್ಯಕ್ತಿಗಳು ಮನೆಗೆ ಪ್ರವೇಶಿಸದ ಕಾರಣ ಯಾವುದೇ ಸುಳಿವು ಕಂಡುಬಂದಿರಲಿಲ್ಲ. ಕೊಲೆಯ ಹಿಂದೆ ಪರಿಚಿತ ವ್ಯಕ್ತಿಯ ಕೈವಾಡವಿದೆ ಎಂಬುದು ಸ್ಪಷ್ಟವಾಗಿದ್ದರೂ, ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ವೃದ್ಧೆಯನ್ನು ಕೊಲೆ ಮಾಡಲು ಯೋಜನೆ ಹಾಕಿದ್ದೇಗೆ?: ವೃದ್ಧೆಯ ಕೊಲೆ ಬೆಳಕಿಗೆ ಬಂದು ವಿಚಾರಣೆ ನಡೆಸುತ್ತಿರುವಾಗ ಅದೇ ಮನೆಯಲ್ಲಿ ಮಹಡಿ ಮೇಲೆ ಬಾಡಿಗೆಗಿದ್ದ ಜೈಕಿಶನ್‌ ಕೆಪಿ ಅಗ್ರಹಾರದ ಪ್ಯಾನ್‌ ಬ್ರೋಕರ್‌ಗೆ ಹಲವು ಬಾರಿ ಕರೆ ಮಾಡಿರುವುದು ಗೊತ್ತಾದ ಮೇಲೆ ಪೊಲೀಸರಿಗೆ ಸಂಶಯ ಬಂತು. ಜೈಕಿಶನ್ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಆಗಾಗ್ಗೆ ಹೊರಗೆ ಹೋಗುತ್ತಿರಲಿಲ್ಲ. ಗಿರವಿ ದಲ್ಲಾಳಿ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳು ಕೊಲೆಯಾದ ಕೆಲವು ದಿನಗಳ ನಂತರ ಜೈಕಿಶನ್ ಅಲ್ಲಿಗೆ ಭೇಟಿ ನೀಡಿರುವುದನ್ನು ತೋರಿಸಿದೆ. ಜೈಕಿಶನ್ ಅವರು 6 ಲಕ್ಷ ರೂಪಾಯಿಗೆ ಚಿನ್ನದ ಸರ ಮತ್ತು ಬಳೆಗಳನ್ನು ಮಾರಾಟ ಮಾಡಿದ್ದು ಗೊತ್ತಾಯಿತು. ಅದರ ಆಧಾರದ ಮೇಲೆ ಜೈಕಿಶನ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದರು. 

ವಿಚಾರಣೆ ವೇಳೆ ಆತ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದು, ಯಶೋದಮ್ಮ ಸೇರಿದಂತೆ ತನ್ನ ಪರಿಚಿತ ವಲಯದಿಂದ ಲಕ್ಷಗಟ್ಟಲೆ ಸಾಲ ಪಡೆದಿದ್ದನ್ನು ಬಹಿರಂಗಪಡಿಸಿದ್ದಾನೆ.

ಸಾಲದಾತರು ಹಣವನ್ನು ಹಿಂದಿರುಗಿಸುವಂತೆ ಒತ್ತಡ ಹೇರುತ್ತಿದ್ದರಿಂದ, ಮನೆ ಮಾಲೀಕರಾದ ವೃದ್ಧೆ ಯಶೋದಮ್ಮನವರನ್ನು ಕೊಲೆ ಮಾಡಲು ಯೋಜಿಸಿದನು. ನಿಯಮಿತವಾಗಿ ಔಷಧ ಖರೀದಿಸಲು ಸಹಾಯ ಮಾಡುತ್ತಿದ್ದ ಕಾರಣ, ಇದೇ ನೆಪದಲ್ಲಿ ಜುಲೈ 1ರಂದು ಆಕೆಯ ಮನೆಗೆ ತೆರಳಿದ್ದ. ಮುಲಾಮು ಹಚ್ಚಲು ಅವಳನ್ನು ಮಲಗಲು ಹೇಳಿ, ಅವನು ಅವಳ ತಲೆಯನ್ನು ಗೋಡೆಗೆ ಬಡಿಯಲು ಪ್ರಾರಂಭಿಸಿದನು. ವೃದ್ಧೆ ಕಿರುಚಲು ಪ್ರಾರಂಭಿಸಿದಾಗ, ಪಕ್ಕದಲ್ಲಿದ್ದ ಚಾಕುವಿನಿಂದ 60 ಕ್ಕೂ ಹೆಚ್ಚು ಬಾರಿ ಅವಳನ್ನು ಇರಿದಿದ್ದಾನೆ. ಆಕೆಯ ಚಿನ್ನದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದನು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT