ಮುಳುಗಿ ಸಾವು 
ರಾಜ್ಯ

ಕಬಿನಿ ನಾಲೆಗೆ ಬಿದ್ದ ಕಾರು: ಇಬ್ಬರು ವಕೀಲರ ಸಾವು

ಕಬಿನಿ ನಾಲೆಗೆ ಕಾರು ಬಿದ್ದ ಪರಿಣಾಮ ಇಬ್ಬರು ವಕೀಲರು ಸಾವನ್ನಪ್ಪಿರುವ ಧಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು: ಕಬಿನಿ ನಾಲೆಗೆ ಕಾರು ಬಿದ್ದ ಪರಿಣಾಮ ಇಬ್ಬರು ವಕೀಲರು ಸಾವನ್ನಪ್ಪಿರುವ ಧಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಾಗರೆ ಸಮೀಪದ ಕಬಿನಿ ಜಲಾಶಯದ ಬಲದಂಡೆ ನಾಲೆಯಲ್ಲಿ ನೀರುಪಾಲಾಗಿದ್ದ ಹುಣಸೂರಿನ ಇಬ್ಬರು ವಕೀಲರ ಮೃತದೇಹ ಶನಿವಾರ ಪತ್ತೆಯಾಗಿದೆ.

ಸಾಗರೆ ಸಮೀಪದ ಬೆಟ್ಟಯ್ಯ ಸೇತುವೆ ಬಳಿಯಿಂದ ನೂರು ಮೀಟರ್‌ ದೂರದಲ್ಲಿ ಗಿರೀಶ್‌ ಮೃತದೇಹ ಪತ್ತೆಯಾದರೆ, ತಾಲೂಕಿನ ಬೊಂತಗಾಲದಹುಂಡಿ ಗ್ರಾಮದ ಕೆರೆ ಬಳಿ ಇರುವ ನಾಲೆಯಲ್ಲಿ ದಿನೇಶ್‌ ಮೃತದೇಹ ಪತ್ತೆಯಾಗಿದೆ. ಸರಗೂರು ಪೊಲೀಸರು ಇಟ್ನ ಗ್ರಾಮದ ಈಜು ತಜ್ಞರ ಸಹಾಯದಿಂದ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ.

ಹೇಗಾಯ್ತು ದುರಂತ
ಹುಣಸೂರು ತಾಲೂಕಿನ ಉಂಡವಾಡಿ ಗ್ರಾಮದ ಸಿ.ದಿನೇಶ್‌ (46) ಹಾಗೂ ನಿಲುವಾಗಿಲು ಗ್ರಾಮದ ಗಿರೀಶ್‌ (44) ಹಾಗೂ ಅಶೋಕ್‌ ಪ್ರಕರಣವೊಂದರ ಸಂಬಂಧ ಶನಿವಾರ ಎಚ್‌.ಡಿ.ಕೋಟೆಗೆ ಕಾರಿನಲ್ಲಿ ತೆರಳಿದ್ದರು. ಊಟ ಮಾಡಲು ಕಬಿನಿ ಡ್ಯಾಂ ಬಳಿಯ ಬಿದರಹಳ್ಳಿ ಸಮೀಪದ ಹೋಟೆಲ್‌ಗೆ ತೆರಳಿ ನಂತರ ಸರಗೂರು ಕಡೆಗೆ ತೆರಳುವಾಗ ದಾರಿ ಮಧ್ಯೆ ಸಾಗರೆ ಸಮೀಪದ ಬೆಟ್ಟಯ್ಯನ ಸೇತುವೆ ಬಳಿ ರಸ್ತೆ ಕ್ರಾಸ್‌ ಇರುವುದು ಗಮನಕ್ಕೆ ಬಾರದ ಹಿನ್ನೆಲೆ ಕಾರು ನೇರವಾಗಿ ನಾಲೆಯಲ್ಲಿ ಬಿದ್ದಿದೆ. ನೀರಿನ ಸೆಳೆತಕ್ಕೆ ಸಿಕ್ಕಿ ದಿನೇಶ್‌ ಹಾಗೂ ಗಿರೀಶ್‌ ಕೊಚ್ಚಿ ಹೋಗಿದ್ದರು. ಅಶೋಕ ಪಾರಾಗಿದ್ದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT