ಸಚಿನ್ ತೆಂಡೂಲ್ಕರ್ 
ರಾಜ್ಯ

ಕುಂದಾನಗರಿಗೆ ಕ್ರಿಕೆಟ್​ ದೇವರು.. ಬೆಳಗಾವಿ ಚಹಾ ಸವಿದ ಸಚಿನ್‌ ತೆಂಡೂಲ್ಕರ್‌!

ಕ್ರಿಕೆಟ್​ನ ದೇವರು ಎಂದೇ ಪ್ರಸಿದ್ಧರಾಗಿರುವ ಸಚಿನ್‌ ತೆಂಡೂಲ್ಕರ್‌ ಇಂದು ಬೆಳಗಾವಿಯ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಚಹಾ ಕುಡಿದಿದ್ದಾರೆ. ಟೀ ಕುಡಿದು ಬಳಿಕ ಸೆಲ್ಪಿ ವಿಡಿಯೋ ಕ್ಲಿಕ್ಕಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಗಾವಿ: ಕ್ರಿಕೆಟ್​ನ ದೇವರು ಎಂದೇ ಪ್ರಸಿದ್ಧರಾಗಿರುವ ಸಚಿನ್‌ ತೆಂಡೂಲ್ಕರ್‌ ಇಂದು ಬೆಳಗಾವಿಯ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಚಹಾ ಕುಡಿದಿದ್ದಾರೆ. ಟೀ ಕುಡಿದು ಬಳಿಕ ಸೆಲ್ಪಿ ವಿಡಿಯೋ ಕ್ಲಿಕ್ಕಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಚಿನ್‌ ತೆಂಡೂಲ್ಕರ್‌ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವರ ಫೌಜಿ ಟೀ ಸ್ಟಾಲ್​ನಲ್ಲಿ ಚಹಾ ಸವಿದಿದ್ದಾರೆ. ಹಾಗೇ ವೈಜು ನಿತೂರ್ಕರ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಳಿಕ ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ತಾಲೂಕಿನ ಹೊರವಲಯದಲ್ಲಿರುವ ಮಚ್ಛೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್‍ನಲ್ಲಿ ಸಚಿನ್ ತೆಂಡೂಲ್ಕರ್ ಚಹಾ ಸೇವಿಸಿದ್ದಾರೆ. 

ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಸಚಿನ್ ಕಂಡು ಸೆಲ್ಫಿ, ವೀಡಿಯೋ ಮತ್ತು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಈ ಕುರಿತು ಮಾತನಾಡಿರುವ ಚಹಾ ಅಂಗಡಿಯ ನಿಟ್ಟೂರ್ಕರ್ ಅವರು, “ಅಲ್ಲಿಯವರೆಗೆ, ಆ ಕಾರಿನಲ್ಲಿ ತೆಂಡೂಲ್ಕರ್ ಮತ್ತು ಅವರ ಕುಟುಂಬದವರು ಇದ್ದರು ಎಂಬುದು ನನಗೆ ತಿಳಿದಿರಲಿಲ್ಲ. ತೆಂಡೂಲ್ಕರ್ ಸ್ವತಃ ಕಾರಿನಿಂದ ಇಳಿದು ಚಹಾ ಸೇವಿಸಿ ರುಚಿ ಚೆನ್ನಾಗಿದೆ ಎಂದು ಹೇಳಿದರು. ಅವರು ಕಾರಿನಿಂದ ಇಳಿದಾಗಲೇ ಅದು ಕ್ರಿಕೆಟ್ ದೇವರು ಸಚಿನ್ ಎಂದು ನನಗೆ ತಿಳಿಯಿತು ಎಂದು ಅವರು ಹೇಳಿದರು. ಬಿಲ್ 175 ಆಗಿದ್ದು, ನಿಟ್ಟೂರ್ಕರ್ ಗೆ 200 ರೂ. 25 ರೂಪಾಯಿ ಹಿಂತಿರುಗಿಸುವಾಗ ನಿಟ್ಟೂರ್ಕರ್ ಅದೇ 200 ರೂಪಾಯಿ ನೋಟಿನಲ್ಲಿ ತೆಂಡೂಲ್ಕರ್ ಅವರ ಹಸ್ತಾಕ್ಷರವನ್ನು ಕೇಳಿದರು.

ತೆಂಡೂಲ್ಕರ್ ಮುಗುಳ್ನಕ್ಕು ತಮ್ಮ ಹಸ್ತಾಕ್ಷರ ನೀಡಿದರು. ನಂತರ ನಿಟ್ಟೂರ್ಕರ್ ಸಚಿನ್ ಜೊತೆ ಸೆಲ್ಫಿಗಾಗಿ ವಿನಂತಿಸಿದರು. ತೆಂಡೂಲ್ಕರ್ ತಕ್ಷಣ ಒಪ್ಪಿಕೊಂಡರು ಮತ್ತು ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದರು. ತೆಂಡೂಲ್ಕರ್ ಅವರು ನಿಟ್ಟೂರ್ಕರ್ ಅವರೊಂದಿಗೆ ತಮ್ಮ ಸೆಲ್ ಫೋನ್‌ನಲ್ಲಿ ಸೆಲ್ಫಿ ಮತ್ತು ವೀಡಿಯೊಗಳನ್ನು ತೆಗೆದುಕೊಂಡರು. ತೆಂಡೂಲ್ಕರ್ ಅವರ ಅನಿರೀಕ್ಷಿತ ಭೇಟಿಯು ನನ್ನ ನೆನಪಿನಲ್ಲಿ ಸದಾ ಹಸಿರಾಗಿರುತ್ತದೆ ಎಂದು ಕ್ಯಾಂಟೀನ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT