ಆನೆಯ ಆಕೃತಿಯಲ್ಲಿ ಬೆಳೆಯುತ್ತಿರುವ ಮರ 
ರಾಜ್ಯ

ಹುಬ್ಬಳ್ಳಿ: ಎಲ್ಲರ ಗಮನ ಸೆಳೆಯುತ್ತಿರುವ ಆನೆ ಆಕೃತಿಯ ಈ ಮರ, ಈಗ ಸೆಲ್ಫಿ ಕೇಂದ್ರ!

ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಂಥದ್ದೇನಿದೆ ಈ ಮರದಲ್ಲಿ ಅಂತೀರಾ?

ಹುಬ್ಬಳ್ಳಿ: ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಂಥದ್ದೇನಿದೆ ಈ ಮರದಲ್ಲಿ ಅಂತೀರಾ? ಆ ಮರ ಆನೆಯ ಆಕೃತಿಯಲ್ಲಿದ್ದು ಸೆಲ್ಫಿ ಪ್ರಿಯರಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅತ್ಯುತ್ತಮ ತಾಣವಾಗಿ ಮಾರ್ಪಾಡಾಗಿದೆ. 

ಆನೆಯ ಸೊಂಡಿಲ ಮಾದರಿಯಲ್ಲಿ ಈ ಮರ ಬೆಳೆದಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಜೊತೆಗೆ ಈ ಮರಕ್ಕೆ ಪೂಜೆ ಸಲ್ಲಿಸುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಮರಕ್ಕೆ ಜನರು ಹಣ್ಣು, ಹೂವುಗಳನ್ನು ಅರ್ಪಿಸಲು ಪ್ರಾರಂಭಿಸಿದ್ದಾರೆ. 

ಈ ಬೇವಿನ ಮರ ಹಲವು ವರ್ಷಗಳಿಂದ ಇದೆ. ಆದರೆ ಬೆಳೆಯುತ್ತಾ ಅದು ಆನೆಯ ಸೊಂಡಿಲ ಆಕೃತಿ ಪಡೆದಿದ್ದರಿಂದ ಸ್ಥಳೀಯ ವರ್ತಕರು ಅದಕ್ಕೆ ಕಣ್ಣು ಹಾಗೂ ದಂತಗಳನ್ನು ಬರೆದಿದ್ದಾರೆ.  ಕೆಲವು ತಿಂಗಳ ಹಿಂದೆ ಬಣ್ಣ ಹಾಕಿದ ನಂತರ ಈ ಮರ ಮತ್ತಷ್ಟು ಜನಪ್ರಿಯತೆ/ ಖ್ಯಾತಿ ಗಳಿಸಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಮಂದಿ ವಾಹನ ನಿಲ್ಲಿಸಿ ತಲೆಬಾಗಿ ನಮಿಸಿ ಮುಂದೆ ಸಾಗುತ್ತಾರೆ. 

ಈ ಬಗ್ಗೆ ಮಾತನಾಡಿರುವ ಕಲಬುರಗಿ ಮ್ಯಾಚಿಂಗ್ ಸೆಂಟರ್ ನ ಮಾಲಿಕರಾಗಿರುವ ಉದಯ್ ಕಲಬುರಗಿ, ಈ ಮರ ತಮ್ಮ ಮಳಿಗೆಯ ಪಕ್ಕದಲ್ಲೇ ಇದ್ದು, ಬಾಲ್ಯದಿಂದಲೂ ಈ ಮರವನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.

ಆನೆ ಆಕೃತಿಯನ್ನು ಹೊಂದಿರುವ ಮರ ಬೇವಿನ ಮರವಾಗಿದ್ದು, ಪಕ್ಕದಲ್ಲೇ ಆಲದ ಮರವೂ ಇದೆ. ಎರಡೂ ಮರಗಳೂ ಕನಿಷ್ಟ 100 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಮಾಹಿತಿ ನೀಡಿದ್ದಾರೆ. 

ನಾಲ್ಕು ವರ್ಷಗಳ ಹಿಂದೆಯೂ ಈ ಮರ ಆನೆಯ ಸೊಂಡಿಲ ಆಕೃತಿಯಲ್ಲಿ ಬೆಳೆಯತ್ತಿರುವುದನ್ನು ಯಾರೂ ಗಮನಿಸಿರಲಿಲ್ಲ. ಏಕಾ ಏಕಿ ಈ ಪ್ರದೇಶದಲ್ಲಿ ಮರ ಇಷ್ಟೊಂದು ಜನಪ್ರಿಯವಾಗಿದೆ ಎನ್ನುತ್ತಾರೆ ಉದಯ್ ಕಲಬುರಗಿ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT