ಪ್ರಾತಿನಿಧಿಕ ಚಿತ್ರ 
ರಾಜ್ಯ

ಸ್ವಚ್ಛ ಸರ್ವೇಕ್ಷಣೆ–2022 ರ್‍ಯಾಂಕಿಂಗ್‌ನಲ್ಲಿ ಬೆಂಗಳೂರು 28ರಿಂದ 43ನೇ ಸ್ಥಾನಕ್ಕೆ ಕುಸಿತ

ಶನಿವಾರ ಬಿಡುಗಡೆಯಾದ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣೆ–2022 ರ್‍ರ್‍ಯಾಂಕಿಂಗ್‌ನಲ್ಲಿ ಬೆಂಗಳೂರು 2892.8 ಅಂಕಗಳೊಂದಿಗೆ 45 ನಗರಗಳ ಪೈಕಿ 43ನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ಮತ್ತು ಮಧುರೈ ನಂತರದ ಸ್ಥಾನಗಳಲ್ಲಿವೆ.

ಬೆಂಗಳೂರು: ಶನಿವಾರ ಬಿಡುಗಡೆಯಾದ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣೆ–2022 ರ್‍ಯಾಂಕಿಂಗ್‌ನಲ್ಲಿ ಬೆಂಗಳೂರು 2892.8 ಅಂಕಗಳೊಂದಿಗೆ 45 ನಗರಗಳ ಪೈಕಿ 43ನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ಮತ್ತು ಮಧುರೈ ನಂತರದ ಸ್ಥಾನಗಳಲ್ಲಿವೆ.

2021ರಲ್ಲಿ 28ನೇ ಸ್ಥಾನದಿಂದ ಕುಸಿದಿರುವ ಬಗ್ಗೆ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, 'ಕಳೆದ ಬಾರಿ 10,000 ಜನರ ಪ್ರತಿಕ್ರಿಯೆಯನ್ನು ಆಧರಿಸಿ ಸಮೀಕ್ಷೆ ನಡೆಸಿದ್ದರಿಂದ ನಗರವು ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ, ಈಗ ನಾಗರಿಕರ ಧ್ವನಿಯ ಪ್ಯಾರಾಮೀಟರ್ ಅಡಿಯಲ್ಲಿ 5 ಲಕ್ಷ ನಾಗರಿಕರನ್ನು ಕೇಳಿರುವುದರಿಂದ ಅಂಕಗಳು ಕುಸಿದಿವೆ ಎಂದು ತಿಳಿಸಿದ್ದಾರೆ.

'ನಾವು ಮನೆ-ಮನೆಗೆ ತೆರಳಿ ಸಂಗ್ರಹಣೆ ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸುತ್ತಿದ್ದೇವೆ. ಆದರೆ, ನಾಗರಿಕರ ಅಭಿಪ್ರಾಯಗಳು ವ್ಯಕ್ತಿನಿಷ್ಠವಾಗಿವೆ. ‘ವಾಟರ್ ಪ್ಲಸ್’ (ಪ್ರವಾಹದ ನೀರಿನ ಚರಂಡಿಗಳು, ಕೆರೆಗಳು ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ) ಮತ್ತು ಜಿಎಫ್‌ಸಿ (ಕಸ ಮುಕ್ತ ಸರ್ಟಿಫಿಕೇಟ್) ನಂತಹ ನಿಯತಾಂಕಗಳಲ್ಲಿ ನಾವು ಅರ್ಹತೆ ಹೊಂದಿಲ್ಲ. ಇದು 2,800 ಪಾಯಿಂಟ್‌ಗಳ ನಷ್ಟಕ್ಕೆ ಕಾರಣವಾಯಿತು. ಇವುಗಳಲ್ಲಿ ಒಂದಾದ ಬಯಲು ಮಲವಿಸರ್ಜನೆ ನಿರ್ಮೂಲನೆಯಲ್ಲಿ  ಗಮನಾರ್ಹ ಪ್ರಗತಿಯಾಗಿದೆ' ಎಂದು ಅವರು ಹೇಳಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮಾತನಾಡಿ, 'ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು 8ನೇ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ. ಅವಳಿ ನಗರಗಳಾದ ಹುಬ್ಬಳ್ಳಿ ಮತ್ತು ಧಾರವಾಡ ಕ್ರಮವಾಗಿ 43 ಮತ್ತು 82ನೇ ಶ್ರೇಯಾಂಕವನ್ನು ಗಳಿಸಿವೆ.

'ನಾನು ಪ್ರತಿ ನಗರದ ಆಯುಕ್ತರೊಂದಿಗೆ ಸಭೆಗಳನ್ನು ನಡೆಸಿದ್ದೇನೆ ಮತ್ತು ಘನತ್ಯಾಜ್ಯ, ತ್ಯಾಜ್ಯ ನೀರು ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯಂತಹ ನಿಯತಾಂಕಗಳ ಬಗ್ಗೆ ಗಮನಹರಿಸುವಂತೆ ಕೇಳಿದ್ದೇನೆ. ಮುಂದಿನ ವರ್ಷ ಈ ಶ್ರೇಯಾಂಕ ಸುಧಾರಿಸಲು ಹೆಚ್ಚಿನ ಕೆಲಸ ಮಾಡುತ್ತೇವೆ’ ಎಂದು ಬಸವರಾಜ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT