ಸಾಂದರ್ಭಿಕ ಚಿತ್ರ 
ರಾಜ್ಯ

ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರದಿಂದ ಮಹಾ ದ್ರೋಹ: ಕಾಂಗ್ರೆಸ್ ಆರೋಪ

ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರ ಮಹಾ ದ್ರೋಹ ಎಸಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರ ಮಹಾ ದ್ರೋಹ ಎಸಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್,  ಇರುವ ನಿಯಮ ಮೀರಿ ತಂದೆಯ ಜಾತಿಯ ಬದಲು ಪತಿಯ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಏಕಾಏಕಿ ಹೊಸದಾಗಿ ಹೇಳುತ್ತಿದೆ. ಇದರಿಂದಾಗಿ  ಈಗಾಗಲೇ ತಂದೆಯ ಜಾತಿ ಪ್ರಮಾಣ ಪತ್ರ ಸಲ್ಲಿಸಿದವರಲ್ಲಿ ಗೊಂದಲ ಸೃಷ್ಟಿಯಾಗಿದೆ. ಶೇ.40 ಕಮೀಷನ್ ಗಾಗಿ ಈ ಗೊಂದಲ್ಲ ಸೃಷ್ಟಿಸಿದ್ದೀರಾ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಪ್ರಶ್ನಿಸಿದೆ.

ಅಭ್ಯರ್ಥಿಗಳ ಮೀಸಲಾತಿ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರದಲ್ಲಿ ಬಲವಂತವಾಗಿ ಸಾಮಾನ್ಯ ವರ್ಗದಲ್ಲಾದರೂ ಪರಿಗಣಿಸಿ ಎಂದು ಬಲವಂತವಾಗಿ ಬರೆಸಿಕೊಂಡಿದೆ. ಇದು ಮೀಸಲಾತಿ ಹಕ್ಕು ಮೊಟಕುಗೊಳಿಸಲು ಮಾಡಿದ ಷಡ್ಯಂತ್ರವೇ? ಅಥವಾ ಹುದ್ದೆ ಮಾರಾಟ ಯೋಜನೆಯ ಮುಂದುವರೆದ ಹುನ್ನಾರವೇ? ಎಂದು ಕೇಳಿದೆ. 

ಸಾಲು ಸಾಲು ನೇಮಕಾತಿ ಅಕ್ರಮ ನಡೆಸಿದ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲೂ ಹಣ ಪೀಕಲು ಇಲ್ಲದ, ಸಲ್ಲದ ನಿಯಮ ಹೇರುತ್ತಿದೆಯೇ? ಜಾತಿ ಪ್ರಮಾಣ ಪತ್ರದಲ್ಲಿ ಸೃಷ್ಟಿಯಾದ ಗೊಂದಲ ಪ್ರಶ್ನಿಸಿದ ಅಭ್ಯರ್ಥಿಗಳೊಂದಿಗೆ ಧೂರ್ತತನದಿಂದ ವರ್ತಿಸಿದ ಸಚಿವ ಬಿ. ಸಿ. ನಾಗೇಶ್ ಅವರಿಗೆ ಕನಿಷ್ಠ ಪ್ರಜ್ಞಾವಂತಿಕೆ ಇಲ್ಲವೇ? ಅಥವಾ ಕಮಿಷನ್ ಆಸೆಗಾಗಿ ಈ ನಾಟಕವೇ? ಎಂದು ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT