ರಾಜ್ಯ

ಪತಿಯ ಅಗಲಿಕೆಯಿಂದ ತುಂಬಲಾರದ ನಷ್ಟ: ಕಿರಣ್ ಮಜುಂದಾರ್ ಶಾ

Nagaraja AB

ಬೆಂಗಳೂರು: ತನ್ನ ಪತಿಯ ನಿಧನದಿಂದ ತುಂಬಲಾರದ ನಷ್ಟವಾಗಿರುವುದಾಗಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ. ಬಯೋಕಾನ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಾನ್ ಷಾ, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ನಿಧನರಾದರು.

' ನನ್ನ ಪತಿ, ಮಾರ್ಗದರ್ಶಕ ಹಾಗೂ ಆತ್ಮ ಸಂಗಾತಿ ಕಳೆದುಕೊಂಡು ತುಂಬಾ ಹಾನಿಯಾಗಿದೆ. ನನ್ನ ಉದ್ದೇಶ ಸಾಧಿಸುವಲ್ಲಿ ಯಾವಾಗಲೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು. ಜಾನ್ ಅವರ ಆತ್ಮಕ್ಕೆ ಶಾಂತಿ  ಸಿಗಲಿ,  ನಾನು ನಿನ್ನನ್ನು ಗಾಢವಾಗಿ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಮಜುಂದಾರ್-ಶಾ ಹೇಳಿದ್ದಾರೆ.

ಸ್ಕಾಟ್ಸ್‌ಮನ್ ಜಾನ್ ಶಾ,  1999 ರಲ್ಲಿ ಬಯೋಕಾನ್‌ಗೆ ಸೇರುವ ಮೊದಲು ಪ್ರಮುಖ ಜವಳಿ ಕಂಪನಿ ಮಧುರಾ ಕೋಟ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಚಿಕ್ಕದಾಗಿ ಪ್ರಾರಂಭವಾದ ಬಯೋಕಾನ್ ಸಂಸ್ಥೆ ಜಾಗತಿಕವಾಗಿ ಮನ್ನಣೆ ಪಡೆಯುವಲ್ಲಿ ಜಾನ್ ಶಾ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಕಂಪನಿ ಹೇಳಿದೆ. 

SCROLL FOR NEXT