ಸಾರಿ ರನ್ 
ರಾಜ್ಯ

ಬೆಂಗಳೂರು: ನಾಳೆ ಮಹಿಳೆಯರ 'ಸಾರಿ ರನ್'ಗೆ ಸಚಿವ ಅಶ್ವಥ್ ನಾರಾಯಣರಿಂದ ಚಾಲನೆ

ಮಹಿಳೆಯರು ವೈಯಕ್ತಿಕ ಫಿಟ್ನೆಸ್ ಬಗ್ಗೆ ಗಮನಹರಿಸಲು ಜಯನಗರ ಜಾಗ್ವಾರ್ಸ್ ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಐದನೇ "ಸಾರಿ ರನ್‌(ಸೀರೆ ಓಟದ ಸ್ಪರ್ಧೆ)' ಆಯೋಜಿಸಿದೆ.

ಬೆಂಗಳೂರು: ಮಹಿಳೆಯರು ವೈಯಕ್ತಿಕ ಫಿಟ್ನೆಸ್ ಬಗ್ಗೆ ಗಮನಹರಿಸಲು ಜಯನಗರ ಜಾಗ್ವಾರ್ಸ್ ಭಾನುವಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಐದನೇ "ಸಾರಿ ರನ್‌(ಸೀರೆ ಓಟದ ಸ್ಪರ್ಧೆ)' ಆಯೋಜಿಸಿದೆ.

ನಾಳೆ ಬೆಳಗ್ಗೆ 6.30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಸಾರಿ ರನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅವರಿಗೆ ಅದಮ್ಯ ಚೇತನ ಫೌಂಡೇಶನ್‌ನ ಅಧ್ಯಕ್ಷೆ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮತ್ತು ಎಸಿಪಿ ಶಶಿಕಲಾ ಅವರು ಸಾಥ್ ನೀಡಲಿದ್ದಾರೆ ಎಂದು ಜಯನಗರ ಜಾಗ್ವಾರ್ಸ್ ತಿಳಿಸಿದೆ.

ಸುಮಾರು 2300ಕ್ಕೂ ಹೆಚ್ಚು ಮಹಿಳೆಯರು ಈ ಸೀರೆ ಓಟ ಅಥವಾ ಸಾರಿ ರನ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಯನಗರ ಜಾಗ್ವಾರ್ಸ್ ಹೇಳಿದೆ.

ನಾವು ಕಳೆದ 7 ವರ್ಷಗಳಿಂದ ಈ ಸಾರಿ ರನ್ ಆಯೋಜಿಸುತ್ತಿದ್ದೇವೆ. ಕಾರಣಾಂತರಗಳಿಂದ 2 ವರ್ಷ ಆಯೋಜನೆ ಮಾಡಲಾಗಲಿಲ್ಲ. ಈ ಓಟ ಮಹಿಳೆಯರಿಗೆ ಫಿಟ್‌ನೆಸ್ ಬಗ್ಗೆ ಅರಿವು ಮೂಡಿಸುತ್ತದೆ ಎಂದು ನಮಗೆ ಖಚಿತವಾಗಿದೆ. ಸಮಾಜದ ಎಲ್ಲಾ ವರ್ಗದ ಮಹಿಳೆಯರು, ಮನೆಕೆಲಸ ಮಾಡುವವರಿಂದ ಹಿಡಿದು ಸಿಇಒಗಳು ಮತ್ತು ವೈದ್ಯರು, ಪೊಲೀಸ್ ಅಧಿಕಾರಿಗಳು, ಚಲನಚಿತ್ರ ನಟರಂತಹ ವೃತ್ತಿಪರರು ಈ ಸೀರೆ ರನ್‌ ನಲ್ಲಿ ಭಾಗವಹಿಸುತ್ತಾರೆ ಎಂದು ಜಯನಗರ ಜಾಗ್ವಾರ್ಸ್ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

SCROLL FOR NEXT