ಶೇಖರ್ ಅವರ ಅಂಗಡಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸಲಾಗುತ್ತಿದೆ. 
ರಾಜ್ಯ

ಕ್ಷೇತ್ರ ಪ್ರಚಾರ ಮತದಾರರ ಮೇಲೆ ಪರಿಣಾಮ ಬೀರುತ್ತದೆ: ಪಕ್ಷಗಳಿಗೆ ಪ್ರಚಾರ ಸಾಮಗ್ರಿ ಒದಗಿಸುವ ವ್ಯಾಪಾರಿಗಳು

ರಾಜಕೀಯ ಪಕ್ಷಗಳಿಗೆ ಬಾವುಟಗಳು, ಕ್ಯಾಪ್, ಬಟ್ಟೆ ಬಂಟಿಂಗ್ಸ್, ಬ್ಯಾನರ್, ಶಾಲು, ಟೀ ಶರ್ಟ್, ಬ್ಯಾಡ್ಜ್, ಹೆಡ್ ಮತ್ತು ಹ್ಯಾಂಡ್ ಬ್ಯಾಂಡ್, ಟವೆಲ್ ಮತ್ತಿತರ ಚುನಾವಣಾ ಸಾಮಗ್ರಿಗಳನ್ನು ಪೂರೈಸುವ ಸಗಟು ವ್ಯಾಪಾರಿಗಳು, ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಮತ್ತು ಪ್ರಚಾರಗಳನ್ನು ಆರಂಭಿಸುತ್ತಿರುವುದರಿಂದ ಬಿರುಸಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು: ರಾಜಕೀಯ ಪಕ್ಷಗಳಿಗೆ ಬಾವುಟಗಳು, ಕ್ಯಾಪ್, ಬಟ್ಟೆ ಬಂಟಿಂಗ್ಸ್, ಬ್ಯಾನರ್, ಶಾಲು, ಟೀ ಶರ್ಟ್, ಬ್ಯಾಡ್ಜ್, ಹೆಡ್ ಮತ್ತು ಹ್ಯಾಂಡ್ ಬ್ಯಾಂಡ್, ಟವೆಲ್ ಮತ್ತಿತರ ಚುನಾವಣಾ ಸಾಮಗ್ರಿಗಳನ್ನು ಪೂರೈಸುವ ಸಗಟು ವ್ಯಾಪಾರಿಗಳು, ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಮತ್ತು ಪ್ರಚಾರಗಳನ್ನು ಆರಂಭಿಸುತ್ತಿರುವುದರಿಂದ ಬಿರುಸಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ಎರಡು ದಶಕಗಳಿಂದ ಚುನಾವಣಾ ಸಾಮಗ್ರಿಗಳನ್ನು ಪೂರೈಸುತ್ತಿರುವ ಬೆಂಗಳೂರಿನ ಸಗಟು ವ್ಯಾಪಾರಿ ಶೇಖರ್ ಆರ್, ವಾರ್ಡಿನಿಂದ ಸಂಸತ್ತಿನವರೆಗೆ ನಡೆಯುವ ಹಲವಾರು ಚುನಾವಣೆಗಳನ್ನು ಕಂಡವರು. ಕ್ಷೇತ್ರ ಪ್ರಚಾರಕ್ಕೆ ಹೋಗುವ ಪಕ್ಷಗಳು ಮಾತ್ರ ಮತದಾರರ ಮೇಲೆ ಪ್ರಭಾವ ಬೀರುತ್ತವೆ ಮತ್ತು ಸಾಮಾಜಿಕ ಮಾಧ್ಯಮಗಳು ಅವರ ಮೇಲೆ ಪ್ರಭಾವ ಬೀರುವಲ್ಲಿ ಸೀಮಿತ ಪಾತ್ರವಹಿಸುತ್ತವೆ ಎನ್ನುತ್ತಾರೆ. ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಮುಖ್ಯಮಂತ್ರಿಗಳು ಬಳಸಿದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಸಾಮಗ್ರಿಗಳನ್ನು ಪೂರೈಸಿದ ಕೀರ್ತಿ ಶೇಖರ್ ಅವರಿಗೆ ಸಲ್ಲುತ್ತದೆ.

'2000ರ ದಶಕದ ಆರಂಭದಲ್ಲಿ, ನಾವು ಸುಮಾರು 100 ಕೆಲಸಗಾರರನ್ನು ಹೊಂದಿದ್ದೆವು. ವಿಶೇಷವಾಗಿ ಮಹಿಳೆಯರು, ಅವರು ಬಂಟಿಂಗ್ಸ್, ಬ್ಯಾನರ್‌ಗಳು, ಧ್ವಜಗಳು ಮತ್ತು ಇತರ ಚುನಾವಣಾ ಸಾಮಗ್ರಿಗಳನ್ನು ಕಾಗದದಿಂದ ತಯಾರಿಸುತ್ತಿದ್ದರು. ಅವುಗಳನ್ನು ಈಗ ಬಟ್ಟೆಯಿಂದ ತಯಾರಿಸಲಾಗುತ್ತಿದೆ. ಉತ್ಪಾದನಾ ವಸ್ತು ಬದಲಾಗಿದೆ, ಉಳಿದವು ಒಂದೇ ಆಗಿರುತ್ತದೆ. ರಸ್ತೆಗಳಲ್ಲಿ ರ್ಯಾಲಿಗಳನ್ನು ನಡೆಸುವ ಮತ್ತು ಮನೆ-ಮನೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅಭ್ಯರ್ಥಿಗಳು ಮಾತ್ರ ಗೆಲುವಿನ ಅಂಚಿಗೆ ತೆರಳುತ್ತಾರೆ. ಏಕೆಂದರೆ, ಅವರು ಸಾಮಾನ್ಯರನ್ನು ಮೆಚ್ಚಿಸಬಹುದು' ಎಂದು ಅವರು ಹೇಳಿದರು.

'ಸಾಮಾಜಿಕ ಮಾಧ್ಯಮಕ್ಕೆ ಹೋಲಿಸಿದರೆ, ನಾವು ಸರಬರಾಜು ಮಾಡುವ ವಸ್ತುಗಳಲ್ಲಿ ಧ್ವಜಗಳು, ಬಟ್ಟೆಯ ಬ್ಯಾನರ್‌ಗಳು, ಬಂಟಿಂಗ್ಸ್, ಕ್ಯಾಪ್‌ಗಳು, ಶಾಲುಗಳು ಮತ್ತು ಟಿ-ಶರ್ಟ್‌ಗಳು ಮತದಾರರ ಮೇಲೆ ಪ್ರಭಾವ ಬೀರಲು ಸಹಾಯ ಮಾಡುತ್ತವೆ. ಕ್ಷೇತ್ರ ಪ್ರಚಾರಗಳು, ರ‍್ಯಾಲಿಗಳು ಮತ್ತು ಸಮಾವೇಶಗಳಲ್ಲಿ ಚುನಾವಣಾ ಚಿಹ್ನೆಗಳು ಮತದಾರರ ಮನಸ್ಸಿನಲ್ಲಿ ಗಟ್ಟಿಯಾಗಿ ನೋಂದಾಯಿಸಲ್ಪಡುತ್ತವೆಟ ಎಂದು ಅವರು ವಿವರಿಸಿದರು.

'ಮಾದರಿ ನೀತಿ ಸಂಹಿತೆ ಜಾರಿಗೂ ಮೊದಲು, ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಬಹು ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಬಯಸಿದ್ದರಿಂದ ಹಣ ಖರ್ಚು ಮಾಡುತ್ತಿದ್ದರು. ಅವರಿಂದ ನಿತ್ಯ ಆರ್ಡರ್ ಪಡೆಯುತ್ತಿದ್ದೆವು. ಇದೀಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆರ್ಡರ್‌ಗಳು ಸ್ಥಗಿತಗೊಂಡಿವೆ. ಆದಾಗ್ಯೂ, ಅಭ್ಯರ್ಥಿಗಳ ಘೋಷಣೆಯೊಂದಿಗೆ ವ್ಯಾಪಾರವು ಹೆಚ್ಚುತ್ತಿದೆ' ಎಂದು ಬಿನ್ನಿ ಮಿಲ್ಸ್‌ನಲ್ಲಿ ಎಸ್‌ಆರ್ ಎಂಟರ್‌ಪ್ರೈಸಸ್ ಹೊಂದಿರುವ ಶೇಖರ್ ಹೇಳುತ್ತಾರೆ.

ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಜೆಡಿಎಸ್‌ನ ಪಂಚರತ್ನ ಯಾತ್ರೆ, ಬಿಜೆಪಿಯ ರಥಯಾತ್ರೆ ಮತ್ತು ಕಾಂಗ್ರೆಸ್‌ನ ಪ್ರಜಾದ್ವನಿ ಯಾತ್ರೆಗೆ ಬಲ್ಕ್ ಆರ್ಡರ್‌ಗಳು ಬಂದಿವೆ. ನಮ್ಮಲ್ಲಿನ ಎಲ್ಲಾ ವಸ್ತುಗಳು 5-100 ರೂ. ಬೆಲೆ ಇರುತ್ತದೆ. ಈ ಎಲ್ಲಾ ವಸ್ತುಗಳನ್ನು ಸೂರತ್‌ನಿಂದ ಸಿದ್ಧಪಡಿಸಿದ ಉತ್ಪನ್ನಗಳಾಗಿ ತೆಗೆದುಕೊಂಡು ಬರಲಾಗುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT