ತೇಗದ ಮರಗಳ ಕಡಿತ (ಸಂಗ್ರಹ ಚಿತ್ರ) 
ರಾಜ್ಯ

ಐದು ವರ್ಷಗಳಲ್ಲಿ ಇದೇ ಮೊದಲು: ತೇಗದ ಮರಗಳ ಕಡಿತ, ನಿವೃತ್ತ ಎಸಿಎಫ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಬೆಲೆ ಬಾಳುವ 66 ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದ ಆರೋಪದ ಮೇರೆಗೆ ರಾಜ್ಯದ ಪರಿಸರ ಇಲಾಖೆ ನಿವೃತ್ತ ಎಸಿಎಫ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದೆ.

ಬೆಂಗಳೂರು: ಬೆಲೆ ಬಾಳುವ 66 ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದ ಆರೋಪದ ಮೇರೆಗೆ ರಾಜ್ಯದ ಪರಿಸರ ಇಲಾಖೆ ನಿವೃತ್ತ ಎಸಿಎಫ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದೆ.

ಅಧಿಕಾರದಲ್ಲಿದ್ದಾಗ ಐಎಫ್​ಎಸ್​ ಅಧಿಕಾರಿಯೊಬ್ಬರು ಕೋಟಿ ಬೆಲೆ ಬಾಳುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅಕ್ರಮವಾಗಿ ಅನುಮತಿ ನೀಡಿದ ಆರೋಪದ ಮೇರೆಗೆ ನಿವೃತ್ತ ಎಸಿಎಫ್ ಅಧಿಕಾರಿಯೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲು ಪರಿಸರ ಇಲಾಖೆ ಆದೇಶ ನೀಡಿದೆ.

ಕೊಡಗು ಜಿಲ್ಲೆ ವಿರಾಜಪೇಟೆ ವಿಭಾಗದ ಡಿಸಿಎಫ್ (Virajpet DCF) ಆಗಿದ್ದಾಗ ಇದೇ ಜನವರಿಯಲ್ಲಿ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದ  ವ್ಯಕ್ತಿಯೊಬ್ಬರು ತಮ್ಮ ಕಾಫಿ ತೋಟದಲ್ಲಿದ್ದ (Coffee Estate) ಆರು ತೇಗದ ಮರಗಳನ್ನು (Teak Trees) ಕಡಿಯಲು ಅನುಮತಿ ನೀಡುವಂತೆ ಅರ್ಜಿ ಹಾಕಿದ್ದು, ಈ ಅರ್ಜಿಯನ್ನು ಗಮನಿಸಿದ ಡಿಸಿಎಫ್ ಸಹಿ ನಕಲು ಮಾಡಿ ಆರು ಮರಗಳ ಬದಲು ಸಂಪೂರ್ಣ ಬೆಳದು ನಿಂತಿರುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

ಈ ಒಂದೊಂದು ಮರವೂ ಎರಡು ಮೀಟರ್​ಗಿಂತಲೂ ಹೆಚ್ಚು ದಪ್ಪವಿದ್ದು. 60 ವರ್ಷಕ್ಕೂ ಅಧಿಕ ಹಳೆಯದ್ದಾಗಿದ್ದವು. ಹಾಗಾಗಿ ಈ 66 ಮರಗಳು ಎಷ್ಟೋ ಕೋಟಿ ರೂಪಾಯಿಗೆ ಬೆಲೆ ಬಾಳುತ್ತಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತನಿಖೆಗೆ ಒಳಪಡುತ್ತದೆ. ಕೊಡಗು ಜಿಲ್ಲೆಯ ಸಿಸಿಎಫ್​ ಅವರೇ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದು, ಎಸಿಎಪ್ ಅವರು ಉದ್ದೇಶಪೂರ್ವಕವಾಗಿಯೇ 66 ಮರಗಳನ್ನ ಕಡಿಯಲು ಅನಮತಿ ನೀಡಿರುವುದು ಬೆಳಕಿಗೆ ಬರುತ್ತದೆ. ಮಾತ್ರವಲ್ಲ. ಇಷ್ಟೊಂದು ಅಗಾಧ ಮರಗಳನ್ನ ಕಡಿಯಲು ಅನುಮತಿ ನೀಡುವಾ ಕಂದಾಯ ಇಲಾಖೆಯಿಂದಾಗಲಿ ಇತರ ಇಲಾಖೆಯಿಂದಾಗಲಿ ಸರ್ವೆ ಅಥವಾ ಇತರ ಯಾವುದೇ ನೀತಿ ನಿಯಮಗಳನ್ನು ಕೂಡ ಪಾಲಿಸಿರುವುದಿಲ್ಲ. ಅದೂ ಅಲ್ಲದೆ ತನಿಖೆಯ ಸಂದರ್ಭ ದಾಖಲಾತಿಗಳನ್ನ ಮನಸೋ ಇಚ್ಛೆ ತಿದ್ದಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ ಆರೋಪವೂ ಇವರ ಮೇಲೆ ಇದೆ.

ಹೀಗಾಗಿ ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯ ಪರಿಸರ ಇಲಾಖೆಯ ಕಚೇರಿಯು ಅರಣ್ಯ ಉಪ ಸಂರಕ್ಷಣಾಧಿಕಾರಿಗಳಿಗೆ (ಡಿಸಿಎಫ್) ಆದೇಶ ಹೊರಡಿಸಿದೆ. ಹಾಗೂ ಅಕ್ರಮವಾಗಿ ಮರ ಸಾಗಣೆ ಹಾಗೂ ಸರಕಾರಿ ಭೂಮಿ ಬಳಕೆಗೆ ನಕಲಿ ಸಹಿ ಹಾಕಿದ ಆರೋಪ ಹೊರಿಸಲಾಗಿದೆ.

ಆಗಸ್ಟ್ 2, 2023 ರಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

ಐದು ವರ್ಷಗಳಲ್ಲಿ ಮೊದಲ ಪ್ರಕರಣ
ಕಳೆದ ಐದು ವರ್ಷಗಳಲ್ಲಿ ಅರಣ್ಯ ಅಧಿಕಾರಿಯೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಕೈಗೊಳ್ಳುವ ಮೊದಲ ಪ್ರಕರಣ ಇದಾಗಿದೆ ಎಂದು ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಸರ್ಕಾರ ನೇಮಿಸಿದ ಸಮಿತಿಯ ವಿವರವಾದ ತನಿಖೆಯ ನಂತರ ಎಸಿಎಫ್ ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ಅವರು ಹೇಳಿದರು. 

ಇದೇ ವಿಚಾರವಾಗಿ ಮಾತನಾಡಿದ ಅಧಿಕಾರಿಯೊಬ್ಬರು, ‘‘ಪ್ರಕರಣದಲ್ಲಿ ಭಾಗಿಯಾಗಿರುವ ನಿವೃತ್ತ ಎಸಿಎಫ್ ಮತ್ತು ಇತರರು ತಪ್ಪಿತಸ್ಥರೆಂದು ಸರ್ಕಾರವು ಕಂಡುಹಿಡಿದಿದೆ. ಈ ಪ್ರಕರಣವನ್ನು ಅರಣ್ಯ ಕಚೇರಿ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬಹುದಾದರೂ, ಅದನ್ನು ಸ್ವತಂತ್ರ ಏಜೆನ್ಸಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಒಳಗೊಂಡಿರುವ ಅಧಿಕಾರಿ ಸಿಬ್ಬಂದಿಗಳಲ್ಲಿ ಒಬ್ಬರು. ಭೂಮಿ ಮತ್ತು ಮರದ ಕೃತ್ಯದಲ್ಲಿ ಸರ್ಕಾರವು ನಷ್ಟದಲ್ಲಿದೆ ಎಂದು ಕಂಡುಹಿಡಿದಿದೆ. ಆದ್ದರಿಂದ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಲ್ಲಾ ಪೇಪರ್‌ಗಳೊಂದಿಗೆ ವಿವರವಾಗಿ ಎಫ್‌ಐಆರ್ ದಾಖಲಿಸಲು ಡಿಸಿಎಫ್‌ಗೆ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಗೆಲುವು; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

SCROLL FOR NEXT