ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹಣ ಕೇಳಿದ್ದಕ್ಕೆ ಆಟೋ ಚಾಲಕ ಮತ್ತವನ ಕುಟುಂಬಸ್ಥರ ಮೇಲೆ ಮಹಿಳೆ ಮತ್ತು ಸಹಚರರಿಂದ ಹಲ್ಲೆ!

ಆಟೋ ಬಾಡಿಗೆ ಪಡೆದ ಮಹಿಳೆಯೊಬ್ಬಳು ಹಣ ಕೇಳಿದ್ದಕ್ಕೆ ಚಾಲಕ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಹುಳಿಮಾವಿನಲ್ಲಿ ನಡೆದಿದೆ.

ಬೆಂಗಳೂರು: ಆಟೋ ಬಾಡಿಗೆ ಪಡೆದ ಮಹಿಳೆಯೊಬ್ಬಳು ಹಣ ಕೇಳಿದ್ದಕ್ಕೆ ಚಾಲಕ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಹುಳಿಮಾವಿನಲ್ಲಿ ನಡೆದಿದೆ.

ಭಾನುವಾರ ರಾತ್ರ ಸುಮಾರು 12.10 ರಿಂದ 1.30 ರ ಸಮಯದಲ್ಲಿ ಈ ಘಟನೆ ನಡೆದಿದೆ.  ದೇವರಚಿಕ್ಕನಹಳ್ಳಿ ನಿವಾಸಿ ರಾಜು ಆಟೋ ಚಾಲಕರಾಗಿದ್ದು ಮಹಿಳೆ ಆಟೋವನ್ನು ಬಾಡಿಗೆ ತೆಗದುಕೊಂಡಿದ್ದಾರೆ. ಮನೆ ಹತ್ತಿರ ತೆರಳಿದ ಬಳಿಕ ಹಣ ಕೇಳಿದ್ದಾರೆ. ಕುಡಿದ ಅಮಲಿನಲ್ಲಿದ್ದ ಮಹಿಳೆ ಮನೆಗೆ ತೆರಳಿ ತನ್ನ ಇಬ್ಬರು ಸಹಚರರನ್ನು ಕರೆದುಕೊಂಡು ಬಂದು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ.

ಈ ವೇಳೆ ರಾಜು ತನ್ನ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ, ಕುಟುಂಬಸ್ಥರು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ರಾಜು ಸ್ನೇಹಿತ 35 ವರ್ಷದ ಮೋಹಿನ್ ಕೂಡ ಅವರ ಜೊತೆಗಿದ್ದ, ಆತನಿಗೂ ಗಂಭೀರ ಗಾಯಗಳಾಗಿವೆ,  ರಾಜುವಿಗೆ ಗಂಭೀರ ಗಾಯಗಳಾಗಿದ್ದು, ಆತನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಆಟೋಗೆ ಹಾನಿ ಮಾಡಿದ್ದಾರೆ.

ಈ ಹಲ್ಲೆಯಲ್ಲಿ ರಾಜುವಿನ ಹಲ್ಲುಗಳು ಮುರಿದಿವೆ,  ರಾಜು ಸ್ನೇಹಿತ 35 ವರ್ಷದ ಮೋಹಿನ್ ಕೈ ಗೆ ಸುಮಾರು 7 ಹೊಲಿಗೆ ಹಾಕಲಾಗಿದೆ,  ರಾಜು ಪತ್ನಿ ಮತ್ತು ಅವರ ಮಗನ ಮೇಲೆ ಪೆಪ್ಪರ್ ಸ್ಪ್ರೇ ಮಾಡಲಾಗಿದೆ,  ತಾಯಿ ಮತ್ತು ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮೋಹಿನ್ ಮೈಸೂರಿಗೆ ಮರಳಿದ್ದಾರೆ.

ಭಾನುವಾರ ನನ್ನ ಹುಟ್ಟಿದ ಹಬ್ಬವಿತ್ತು, ನಾನು ಮತ್ತು ನನ್ನ ಸ್ನೇಹಿತ ಮೋಹಿನ್ ಜೊತೆಗಿದ್ದೆವು,  ಈ ವೇಳೆ ಕುಡಿದ ಅಮಲಿನಲ್ಲಿದ್ದ ಮಹಿಳೆ ಆಟೋ ಬಾಡಿಗೆ ಪಡೆದರು, ಆಕೆ ಒಂಟಿಯಾಗಿದ್ದರಿಂದ ನಾನು ನನ್ನ ,ಸ್ನೇಹಿತನ ಜೊತೆ ತೆರಳಿದೆ. ಆಕೆ ಮನೆ ತಲುಪಿದ ವೇಳೆ ಹಣ ತರುವುದಾಗಿ ಹೋಗಿ ಮನೆಯೊಳಗೆ ಹೋದಳು.

ನಂತರ ಒಳಗೆ ಹೋದ ಆಕೆ ಕಬ್ಬಿಣದ ರಾಡ್ ಜೊತೆಗೆ ಇಬ್ಬರು ಪುರುಷರೊಂದಿಗೆ ಹೊರ ಬಂದಳು, ಬಂದವರು ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಮೊಬೈಲ್ ಕಸಿದುಕೊಂಡರು.  ನನ್ನ ಮನೆ ಕೇವಲ 1 ಕಿಮೀ ದೂರವಿದ್ದ ಕಾರಣ, ಮೋಹಿನ್ ಫೋನ್ ನಲ್ಲಿ ನನ್ನ ಮನೆಯವರಿಗೆ ಕರೆ ಮಾಡಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ''ಮಹಿಳೆ ಮತ್ತು ಆಕೆಯ ಇಬ್ಬರು ಸಹಚರರನ್ನು ಬಂಧಿಸಬೇಕಿದೆ. ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅವರು ತಮಿಳಿನಲ್ಲಿ ಮಾತನಾಡುತ್ತಿದ್ದರು,  ತಮಿಳುನಾಡು ಮೂಲದವರು ಎಂದು ತೋರುತ್ತದೆ. ಆರೋಪಿಗಳು ಮಾದಕ ವಸ್ತುವಿನ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ಮಹಿಳೆ ಮತ್ತು ಆಕೆಯ ಸಹಚರರ ವಿರುದ್ಧ ದರೋಡೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT